Home> World
Advertisement

Farmers Protest: 'ನನ್ನನ್ನು ಮೌನವಾಗಿರಿಸಲು ಸಾಧ್ಯವಿಲ್ಲ'

ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸೋದರ ಸೊಸೆ ಅಮೆರಿಕದ ವಕೀಲೇ ಮೀನಾ ಹ್ಯಾರಿಸ್ ಅವರು ತಮ್ಮ ವಿರುದ್ಧದ ಪ್ರತಿಭಟನೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.ಅವರು ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿದ್ದಕ್ಕೆ ಅವರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. 

Farmers Protest: 'ನನ್ನನ್ನು ಮೌನವಾಗಿರಿಸಲು ಸಾಧ್ಯವಿಲ್ಲ'

ನವದೆಹಲಿ: ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸೋದರ ಸೊಸೆ ಅಮೆರಿಕದ ವಕೀಲೇ ಮೀನಾ ಹ್ಯಾರಿಸ್ ಅವರು ತಮ್ಮ ವಿರುದ್ಧದ ಪ್ರತಿಭಟನೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.ಅವರು ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿದ್ದಕ್ಕೆ ಅವರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. 

ಈಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮೀನಾ ಹ್ಯಾರಿಸ್ "ನಾನು ಭಾರತೀಯ ರೈತರ ಮಾನವ ಹಕ್ಕುಗಳನ್ನು ಬೆಂಬಲಿಸಿ ಮಾತನಾಡಿದ್ದೇನೆ ಮತ್ತು ಆದರೆ ಪ್ರತಿಕ್ರಿಯೆಯನ್ನು ಗಮನಿಸಿ" ಎಂದು ಮೀನಾ ಹ್ಯಾರಿಸ್ ಗುರುವಾರ ಟ್ವೀಟ್ ಮಾಡಿದ್ದಾರೆ,ರಾಯಿಟರ್ಸ್ ಪತ್ರಕರ್ತ ಡ್ಯಾನಿಶ್ ಸಿದ್ದಿಕಿ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ.ಈಗ ಯಾವುದಕ್ಕೂ ಬೆದರುವುದಿಲ್ಲ ಮತ್ತು ಮೌನವಾಗಿರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಜಗತ್ತಿನ ಗಮನ ಸೆಳೆದ ಯಾರು ಈ ಗ್ರೇಟಾ ಥನ್ಬರ್ಗ್..!

ರೈತರ ಪ್ರತಿಭಟನೆ ವಿಚಾರವಾಗಿ ಅಂತರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ ಟ್ವೀಟ್ ಮಾಡಿ "ನಾವು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಎಂದು ಟ್ವೀಟ್ ಮಾಡಿದ್ದರು.100 ಕ್ಕೂ ಅಧಿಕ ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ರಿಹಾನ್ನಾ ಆ ಮೂಲಕ ರೈತರ ಪ್ರತಿಭಟನೆಯನ್ನು ಜಾಗತಿಕ ಪಟ್ಟದಲ್ಲಿ ಸದ್ದು ಮಾಡುವಂತೆ ಮಾಡಿದ್ದರು.

ಇದನ್ನೂ ಓದಿ: Farmers Protest ಗೆ ಸಂಬಂಧಿಸಿದ ಟ್ವೀಟ್ ಲೈಕ್ ಮಾಡಿದ Twitter CEO ಜ್ಯಾಕ್ ಡಾರ್ಸೆ

ಇದರಿಂದ ತೀವ್ರ ಹಿನ್ನಡೆಗೆ ಒಳಗಾದ ಕೇಂದ್ರ ಸರ್ಕಾರ ತದನಂತರ ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಮತ್ತು ಇತರ ಸಾರ್ವಜನಿಕ ವ್ಯಕ್ತಿಗಳ ಪೋಸ್ಟ್‌ಗಳೊಂದಿಗೆ 'IndiaAgainstPropaganda' ಮತ್ತು 'IndiaTogether' ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಪ್ರತಿಕ್ರಿಯಿಸಿತು.

ರಿಹಾನ್ನಾ, ಮೀನಾ ಹ್ಯಾರಿಸ್, ಗ್ರೆಟಾ ಥನ್‌ಬರ್ಗ್ (Greta Thunberg) ಮತ್ತು ಅನೇಕರು ಸಿಎನ್‌ಎನ್ ವರದಿಯನ್ನು ಹಂಚಿಕೊಂಡು ಪ್ರತಿಭಟನೆ ಕುರಿತಾಗಿ ಗಮನ ಸೆಳೆದಿದ್ದಾರೆ."ಭಾರತದ ಅಂತರ್ಜಾಲ ಸ್ಥಗಿತಗೊಳಿಸುವಿಕೆ ಮತ್ತು ರೈತ ಪ್ರತಿಭಟನಾಕಾರರ ವಿರುದ್ಧ ಅರೆಸೈನಿಕ ಹಿಂಸಾಚಾರದಿಂದ ನಾವು ಎಲ್ಲರೂ ಆಕ್ರೋಶಗೊಳ್ಳಬೇಕು" ಎಂದು ಮೀನಾ ಹ್ಯಾರಿಸ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Farmers Protest: ಗ್ರೇಟಾ ಥನ್‌ಬರ್ಗ್ ಮೇಲೆ ದೆಹಲಿ ಪೋಲಿಸರ ಪ್ರಕರಣ ದಾಖಲು

ದೆಹಲಿ ಪೊಲೀಸರು ನಿನ್ನೆ ಗ್ರೆಟಾ ಥನ್‌ಬರ್ಗ್ ಟ್ವೀಟ್ ಮಾಡಿದ 'ಟೂಲ್‌ಕಿಟ್' ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ."ನಾವು ಭಾರತ ಸರ್ಕಾರದ ವಿರುದ್ಧ ಅಸಮಾಧಾನವನ್ನು ಹರಡಿರುವ ವಿಚಾರವಾಗಿ ಪ್ರಕರಣ ದಾಖಲಿಸಿದ್ದೇವೆ.ಇದು ದೇಶದ್ರೋಹಕ್ಕೆ ಸಂಬಂಧಿಸಿದೆ ಮತ್ತು ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಧಾರದ ಮೇಲೆ ಗುಂಪುಗಳ ನಡುವೆ ಅಸಂಗತತೆ ಮತ್ತು ಅಂತಹ ಯೋಜನೆಗೆ ಆಕಾರ ನೀಡುವ ಕ್ರಿಮಿನಲ್ ಪಿತೂರಿ" ಎಂದು ದೆಹಲಿ ಪೊಲೀಸ್ ವಿಶೇಷ ಆಯುಕ್ತ ಪ್ರವೀರ್ ರಂಜನ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More