Home> Technology
Advertisement

New Telecom Reforms: ಮೊಬೈಲ್‌ಗೆ ಸಂಬಂಧಿಸಿದ ಈ ನಿಯಮಗಳನ್ನು ಸರಳಗೊಳಿಸಿದ ಸರ್ಕಾರ; ಈಗ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಸಿಮ್

New Telecom Reforms: ಸರ್ಕಾರವು ಮೊಬೈಲ್‌ಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಸಡಿಲಗೊಳಿಸಿದೆ. ಗ್ರಾಹಕರು ಈಗ ಮನೆಯಲ್ಲಿಯೇ ಕುಳಿತು ಹೊಸ ಸಿಮ್ ಕಾರ್ಡ್ ಪಡೆಯಬಹುದಾಗಿದೆ.
 

New Telecom Reforms: ಮೊಬೈಲ್‌ಗೆ ಸಂಬಂಧಿಸಿದ ಈ ನಿಯಮಗಳನ್ನು ಸರಳಗೊಳಿಸಿದ ಸರ್ಕಾರ; ಈಗ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಸಿಮ್

ನವದೆಹಲಿ: New Telecom Reforms- ಈಗ ಗ್ರಾಹಕರಿಗೆ ಹೊಸ ಮೊಬೈಲ್ ಸಂಪರ್ಕವನ್ನು ಪಡೆಯುವುದು ಸುಲಭವಾಗುತ್ತದೆ. ಗ್ರಾಹಕರು ಈಗ ಹೊಸ ಮೊಬೈಲ್ ಸಂಪರ್ಕಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಅವರ ಮನೆ ಬಾಗಿಲಿಗೆ ಸಿಮ್ ಕಾರ್ಡ್ ತಲುಪಲಿದೆ. ಇದಕ್ಕಾಗಿ, ಗ್ರಾಹಕರು ತಮ್ಮನ್ನು ಆಧಾರ್ ಅಥವಾ ಡಿಜಿಲಾಕರ್‌ನಲ್ಲಿ ಸಂಗ್ರಹವಾಗಿರುವ ಯಾವುದೇ ಇತರ ದಾಖಲೆಗಳೊಂದಿಗೆ ಪರಿಶೀಲಿಸಬಹುದು. 

ಹೊಸ ನಿಯಮಗಳಿಗೆ ಸಂಬಂಧಿಸಿದಂತೆ ದೂರಸಂಪರ್ಕ ಇಲಾಖೆ (Department of Telecom) ಮಂಗಳವಾರ ಈ ಕುರಿತು ಆದೇಶ ಹೊರಡಿಸಿದ್ದು, ಇದು ಸೆಪ್ಟೆಂಬರ್ 15 ರಂದು ಕ್ಯಾಬಿನೆಟ್ ಅನುಮೋದಿಸಿದ ಟೆಲಿಕಾಂ ಸುಧಾರಣೆಗಳ ಭಾಗವಾಗಿದೆ.

KYC ಗಾಗಿ ನೀವು 1 ರೂ. ಪಾವತಿಸಬೇಕಾಗುತ್ತದೆ:
ಹೊಸ ನಿಯಮಗಳ ಪ್ರಕಾರ, ಬಳಕೆದಾರರು ಹೊಸ ಮೊಬೈಲ್ ಸಂಪರ್ಕವನ್ನು (New Mobile Connection) ಪಡೆಯಲು ಯುಐಡಿಎಐ (UIDAI)  ನ ಆಧಾರ್ (Aadhaar) ಆಧಾರಿತ e-KYC ಸೇವೆಯ ಮೂಲಕ ದೃಢೀಕರಣ ಪ್ರಕ್ರಿಯೆಗೆ 1 ರೂ. ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ- Fake SIM Card: ಎಚ್ಚರಿಕೆ! ನಿಮ್ಮ ಹೆಸರಲ್ಲೂ ನಕಲಿ SIM ಚಾಲ್ತಿಯಲ್ಲಿದೆಯಾ? ಈ ರೀತಿ ಬ್ಲಾಕ್ ಮಾಡಿ

ಸರ್ಕಾರ ಕಾನೂನಿಗೆ ತಿದ್ದುಪಡಿ ತಂದಿದೆ:
ಹೊಸ ಮೊಬೈಲ್ ಸಂಪರ್ಕಗಳ ವಿತರಣೆಗಾಗಿ ಆಧಾರ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆಯನ್ನು ಮರುಪರಿಚಯಿಸಲು ಸರ್ಕಾರವು ಭಾರತೀಯ ಟೆಲಿಗ್ರಾಫ್ ಕಾಯ್ದೆ (Indian Telegraph Act), 1885 ರ ಜುಲೈ 2019 ರಲ್ಲಿ ಈಗಾಗಲೇ ತಿದ್ದುಪಡಿ ಮಾಡಿತ್ತು. ಪ್ರಿಪೇಯ್ಡ್ ಅನ್ನು ಪೋಸ್ಟ್ ಪೇಯ್ಡ್ ಆಗಿ ಪರಿವರ್ತಿಸಲು ಹೊಸ ಒನ್ ಟೈಮ್ ಪಾಸ್ ವರ್ಡ್ (ಒಟಿಪಿ) ಆಧಾರಿತ ಪ್ರಕ್ರಿಯೆಗೆ ಸರ್ಕಾರ ಆದೇಶ ಹೊರಡಿಸಿದೆ.

ಮನೆಯಲ್ಲಿ ಕುಳಿತುಕೊಳ್ಳಿ ಹೊಸ ಸಿಮ್ ಕಾರ್ಡ್ ಖರೀದಿಸಿ:
ಆಪ್ / ಪೋರ್ಟಲ್ ಆಧಾರಿತ ಪ್ರಕ್ರಿಯೆಯ ಮೂಲಕ ಗ್ರಾಹಕರಿಗೆ ಮೊಬೈಲ್ ಸಂಪರ್ಕವನ್ನು ನೀಡಲಾಗುವುದು. ಇದರಲ್ಲಿ ಗ್ರಾಹಕರು ಮನೆಯಲ್ಲಿಯೇ ಕುಳಿತು ಮೊಬೈಲ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಡಿಒಟಿ ತನ್ನ ಆದೇಶದಲ್ಲಿ ಹೇಳಿದೆ. ಯುಐಡಿಎಐ (UIDAI) ಆಧಾರಿತ ಪರಿಶೀಲನೆ ಮೂಲಕ ಗ್ರಾಹಕರು ತಮ್ಮ ಮನೆ ಬಾಗಿಲಿನಲ್ಲೇ ಸಿಮ್ ಪಡೆಯಬಹುದು.

ಇದನ್ನೂ ಓದಿ- Passport: ವಿದೇಶಕ್ಕೆ ಪ್ರಯಾಣಿಸಲು ಪಾಸ್‌ಪೋರ್ಟ್‌ಗೆ ಕರೋನಾ ಲಸಿಕೆ ಪ್ರಮಾಣಪತ್ರವನ್ನು ಲಿಂಕ್ ಮಾಡಿ, ಸಂಪೂರ್ಣ ಪ್ರಕ್ರಿಯೆ ತಿಳಿಯಿರಿ

ಪ್ರಸ್ತುತ, ಹೊಸ ಮೊಬೈಲ್ ಸಂಪರ್ಕ ಪಡೆಯಲು ಅಥವಾ ಮೊಬೈಲ್ ಸಂಪರ್ಕವನ್ನು ಪ್ರಿಪೇಯ್ಡ್ ನಿಂದ ಪೋಸ್ಟ್ ಪೇಯ್ಡ್ ಗೆ ಪರಿವರ್ತಿಸಲು, ಗ್ರಾಹಕರು ಕೆವೈಸಿ ಪ್ರಕ್ರಿಯೆಯ ಮೂಲಕ ಹೋಗಬೇಕಾಗುತ್ತದೆ. ಇದಕ್ಕಾಗಿ, ಗ್ರಾಹಕರು ತಮ್ಮ ಗುರುತು ಮತ್ತು ವಿಳಾಸ ಪರಿಶೀಲನಾ ದಾಖಲೆಗಳೊಂದಿಗೆ ಅಂಗಡಿಗೆ ಹೋಗಬೇಕು. ಇದೀಗ ಹೊಸ ನಿಯಮ ಜಾರಿಯಿಂದಾಗಿ ಗ್ರಾಹಕರಿಗೆ ಹೊಸ ಸಂಪರ್ಕ ಪಡೆಯುವಲ್ಲಿ ಅನುಕೂಲವಾಗಲಿದೆ.

ಗಮನಾರ್ಹವಾಗಿ, ಕರೋನಾ ಯುಗದಲ್ಲಿ, ಗ್ರಾಹಕರ ಅನುಕೂಲಕ್ಕಾಗಿ ಮತ್ತು ಸುಲಭವಾಗಿ ವ್ಯಾಪಾರ ಮಾಡಲು ಸಂಪರ್ಕವಿಲ್ಲದ ಸೇವೆಯನ್ನು ಉತ್ತೇಜಿಸುವ ಅವಶ್ಯಕತೆ ಇದೆ ಎಂದು ಈ ಮೊದಲು ಟೆಲಿಕಾಂ ಇಲಾಖೆಯು  (Telecom Department) ಹೇಳಿಕೆಯೊಂದರಲ್ಲಿ ಹೇಳಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More