Home> Sports
Advertisement

ಮಧ್ಯರಾತ್ರಿಯಲ್ಲಿ ಫೀಲ್ಡಿಂಗ್ ಕೋಚ್ ಗೆ ವಿರಾಟ್ ಕೊಹ್ಲಿ ಕರೆ ಮಾಡಿ ಹೇಳಿದ್ದೇನು?

ಭಾರತದ ಫೀಲ್ಡಿಂಗ್ ತರಬೇತುದಾರ ಆರ್.ಶ್ರೀಧರ್ ಅವರು ಭಾರತದ ನಾಯಕ ವಿರಾಟ್ ಕೊಹ್ಲಿಯಿಂದ ಸ್ವೀಕರಿಸಿದ ಅಚ್ಚರಿಯ ಮಧ್ಯರಾತ್ರಿ ಕರೆ ಹೇಗೆಲ್ಲಾ ಪಂದ್ಯದ ಕುರಿತಾಗಿ ಕಾರ್ಯಸೂಚಿಯನ್ನು ಸಿದ್ಧಪಡಿಸಲು ನೆರವಾಯಿತು ಎನ್ನುವ ವಿಚಾರದ ಕುರಿತಾಗಿ ಮಾತಾಡಿದ್ದಾರೆ.

ಮಧ್ಯರಾತ್ರಿಯಲ್ಲಿ ಫೀಲ್ಡಿಂಗ್ ಕೋಚ್ ಗೆ ವಿರಾಟ್ ಕೊಹ್ಲಿ ಕರೆ ಮಾಡಿ ಹೇಳಿದ್ದೇನು?

ನವದೆಹಲಿ: ಭಾರತದ ಫೀಲ್ಡಿಂಗ್ ತರಬೇತುದಾರ ಆರ್.ಶ್ರೀಧರ್ ಅವರು ಭಾರತದ ನಾಯಕ ವಿರಾಟ್ ಕೊಹ್ಲಿಯಿಂದ ಸ್ವೀಕರಿಸಿದ ಅಚ್ಚರಿಯ ಮಧ್ಯರಾತ್ರಿ ಕರೆ ಹೇಗೆಲ್ಲಾ ಪಂದ್ಯದ ಕುರಿತಾಗಿ ಕಾರ್ಯಸೂಚಿಯನ್ನು ಸಿದ್ಧಪಡಿಸಲು ನೆರವಾಯಿತು ಎನ್ನುವ ವಿಚಾರದ ಕುರಿತಾಗಿ ಮಾತಾಡಿದ್ದಾರೆ.

ಇದನ್ನೂ ಓದಿ: ICC Test Ranking: Rishabh Pant ವಿಶ್ವದ ಅತ್ಯಧಿಕ ಶ್ರೇಯಾಂಕ ಪಡೆದ ವಿಕೆಟ್ ಕೀಪರ್

ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ಶ್ರೀಧರ್  “ಅದು ಮಧ್ಯರಾತ್ರಿ, ಬೆಳಿಗ್ಗೆ 12.30 ರ ಸುಮಾರಿಗೆ ನಾವು ಅಡಿಲೇಡ್ ಟೆಸ್ಟ್ ಸೋತ ರಾತ್ರಿ. ವಿರಾಟ್ ಕೊಹ್ಲಿ (Virat Kholi)  ನನಗೆ ನೀವು ಏನು ಮಾಡುತ್ತಿದ್ದೀರಿ? ಎಂದು ಸಂದೇಶ ಕಳುಹಿಸಿದರು, ಆಗ ಏಕಾಏಕಿ ನನಗೆ ಈ ಸಮಯದಲ್ಲಿ ಮೆಸೇಜ್ ಏಕೆ ಕಳಿಸಿದ್ದಾರೆ ಎಂದು ಆಘಾತವಾಯಿತು.? ನಾನು ಅವರಿಗೆ ‘ಮುಖ್ಯ ತರಬೇತುದಾರ (ರವಿಶಾಸ್ತ್ರಿ), ನಾನು, ಭಾರತ್ ಅರುಣ್ ಮತ್ತು ವಿಕ್ರಮ್ ರಾಥೌರ್ ಒಟ್ಟಿಗೆ ಕುಳಿತಿದ್ದೇವೆ ಎಂದು ಹೇಳಿದೆ. ಅವರು; ನಾನು ಸಹ ನಿಮ್ಮೊಂದಿಗೆ ಸೇರುತ್ತೇನೆ  ಹೇಳಿದರು. ನಾನು, ತೊಂದರೆ ಇಲ್ಲ, ಬನ್ನಿ ಎಂದೆ.

ಇದನ್ನು ಓದಿ- Virushka ಮಗಳಿಗೆ ನಾಮಕರಣ ಮಾಡುವ ಸಂತ ಇವರು..! ಆ ಸಿದ್ದಪುರುಷ ಯಾರು..?

ಅವರು ಅಲ್ಲಿಗೆ ಬಂದರು ಮತ್ತು ನಾವೆಲ್ಲರೂ ಚರ್ಚಿಸಲು ಪ್ರಾರಂಭಿಸಿದೆವು. ಅಲ್ಲಿಯೇ ‘ಮಿಷನ್ ಮೆಲ್ಬೋರ್ನ್’ ಪ್ರಾರಂಭವಾಯಿತು. ಆಗ ಶಾಸ್ತ್ರಿ ಅಲ್ಲಿ ಒಂದು ವಿಷಯವನ್ನು ಹೇಳಿದರು: ‘ಈ 36, ಅದನ್ನು ಬ್ಯಾಡ್ಜ್‌ನಂತೆ ಧರಿಸಿ! ಈ 36 ಈ ತಂಡವನ್ನು ಶ್ರೇಷ್ಠರನ್ನಾಗಿ ಮಾಡುತ್ತದೆ 'ಎಂದು ಶ್ರೀಧರ್ ಹೇಳಿದರು.ಸರಣಿಯ ಉಳಿದ ಭಾಗಕ್ಕೆ ತಂಡಕ್ಕೆ ಮುಂದಿನ ದಾರಿ ಏನು ಎಂಬ ಬಗ್ಗೆ ಕೊಹ್ಲಿ ಮತ್ತು ರಹಾನೆ ಚರ್ಚೆ ನಡೆಸಿದ್ದಾರೆ ಎಂದು ಶ್ರೀಧರ್ ನೆನಪಿಸಿಕೊಂಡರು.'

ಇದನ್ನು ಓದಿ- ICC Awards Of Decade: ಈ ದಶಕದ T20 ಹಾಗೂ ODI ತಂಡಕ್ಕೆ ಕ್ಯಾಪ್ಟನ್ ಕೂಲ್ MSD ನಾಯಕ

"ನಾವು ಸ್ವಲ್ಪ ಗೊಂದಲಕ್ಕೊಳಗಾಗಿದ್ದೇವೆ ಆದರೆ ನಂತರ ನಾವು ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದೆವು. ನಂತರ ವಿರಾಟ್ ಮರುದಿನ ಬೆಳಿಗ್ಗೆ ಅಜಿಂಕ್ಯನನ್ನು ಕರೆದು ನಾವು ಬಹಳ ಒಳ್ಳೆಯ ಚರ್ಚೆ ನಡೆಸಿದೆವು. 36ಕ್ಕೆ ಆಲ್ ಔಟ್ ನಂತರ, ಸಾಮಾನ್ಯವಾಗಿ, ತಂಡಗಳು ತಮ್ಮ ಬ್ಯಾಟಿಂಗ್ ಅನ್ನು ಬಲಪಡಿಸುತ್ತವೆ. ಆದರೆ ರವಿಶಾಸ್ತ್ರಿ, ವಿರಾಟ್ ಮತ್ತು ಅಜಿಂಕ್ಯ ಬೌಲಿಂಗ್ ಅನ್ನು ಬಲಪಡಿಸಲು ನಿರ್ಧರಿಸಿದರು. ನಾವು ವಿರಾಟ್ ಅವರನ್ನು ರವೀಂದ್ರ ಜಡೇಜಾ ಅವರೊಂದಿಗೆ ಬದಲಾಯಿಸಿದ್ದೇವೆ, ಮತ್ತು ಇದು ಮಾಸ್ಟರ್ ಸ್ಟ್ರೋಕ್ ಆಗಿತ್ತು ”ಎಂದು ಶ್ರೀಧರ್ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More