Home> Sports
Advertisement

ಆಸಿಸ್‌ ಮಾಧ್ಯಮದ ವಿರುದ್ಧ ಸುನಿಲ್‌ ಗವಾಸ್ಕರ್‌ ಫುಲ್‌ ಗರಂ..?

Sunil Gavaskar: ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಅಮೋಘ ಕ್ಯಾಚ್ ಪಡೆಯುವ ಮೂಲಕ ಟೀಂ ಇಂಡಿಯಾ ಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೀಗ ಈ ಕ್ಯಾಚ್‌ ವಿವಾದಕ್ಕಿಡಾಗಿದೆ. ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
 

ಆಸಿಸ್‌ ಮಾಧ್ಯಮದ ವಿರುದ್ಧ ಸುನಿಲ್‌ ಗವಾಸ್ಕರ್‌ ಫುಲ್‌ ಗರಂ..?

Sunil Gavaskar: ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಅಮೋಘ ಕ್ಯಾಚ್ ಪಡೆಯುವ ಮೂಲಕ ಟೀಂ ಇಂಡಿಯಾ ಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೀಗ ಈ ಕ್ಯಾಚ್‌ ವಿವಾದಕ್ಕಿಡಾಗಿದೆ. ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಅಮೋಘ ಕ್ಯಾಚ್ ವಿವಾದಕ್ಕೀಡಾಗಿದ್ದಕ್ಕಾಗಿ ಆಸ್ಟ್ರೇಲಿಯಾದ ಮಾಧ್ಯಮಳು ಮಾಡಿದ ಟೀಕೆಗಳ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂರ್ಯ ಅವರ ಕ್ಯಾಚ್‌ನತ್ತ ಬೆರಳು ತೋರಿಸುವ ಮೊದಲು, ತಮ್ಮತ್ತ ಒಮ್ಮೆ ಆಸಿಸ್‌ ನೋಡಿಕೊಳ್ಳಲಿ. ಅವರು ಮಾಡಿರುವ ಮೋಸಗಳು ಎಲ್ಲರಿಗೂ ಗೊತ್ತಿದೆ ಎಂದು ಭಾರತದ ಗೆಲುವಿನ ಬಗ್ಗೆ ಆಸ್ಟ್ರೇಲಿಯಾ ಮಾಧ್ಯಮಗಳು ಮಾಡುತ್ತಿರುವ ಟೀಕೆಗಳನ್ನು ಸುನಿಲ್‌ ಗವಾಸ್ಕರ್ ಅಲ್ಲಗಳೆದರು.

ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ರೋಚಕ ಫೈನಲ್‌ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.  ಆದರೆ ಸೂರ್ಯ ಹಿಡಿದ ಅದ್ಭುತ ಕ್ಯಾಚ್ ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. ದಕ್ಷಿಣ ಆಫ್ರಿಕಾ ಗೆಲುವಿಗೆ 6 ಎಸೆತಗಳಲ್ಲಿ 15 ರನ್ ಅಗತ್ಯವಿತ್ತು.. ಹಾರ್ದಿಕ್ ಅವರ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಲಾಂಗ್ ಆಫ್ ಕಡೆಗೆ ಹೊಡೆದರು. ಬಹುತೇಕ ಸಿಕ್ಸರ್ ಆಗಿದ್ದ ಈ ಚೆಂಡನ್ನು ಬೌಂಡರಿ ಗೆರೆಯಲ್ಲಿ ನಿಂತಿದ್ದ ಸೂರ್ಯ ಜಾಣ್ಮೆಯಿಂದ ಕ್ಯಾಚ್‌ ಹಿಡಿದರು. 

ಇದನ್ನೂ ಓದಿ: IND vs Zimbabwe: ಜಿಂಬಾಬ್ವೆ ಪ್ರವಾಸಕ್ಕೆ ಅಂತಿಮ ಪ್ಲೇಹಿಂಗ್‌ XI ಪಟ್ಟಿ ರಿಲೀಸ್‌..? ರುತುರಾಜ್‌ಗೆ ನಿರಾಸೆ..!

ಮೊದಲು ಸಿಕ್ಸರ್ ತಡೆದ ಸೂರ್ಯ ನಂತರ ಸಮನ್ವಯ ಕಳೆದುಕೊಂಡು ಚೆಂಡನ್ನು ಗಾಳಿಗೆ ಎಸೆದರು. ಬೌಂಡರಿ ಹಗ್ಗ ದಾಟಿ ಮತ್ತೆ ಮೈದಾನಕ್ಕೆ ಜಿಗಿದಿ ಚೆಂಡನ್ನು ಹಿಡಿಯುವಲ್ಲಿ ಯಶಸ್ವಿಯಾದರು, ಈ ಕ್ಯಾಚ್ ಪಂದ್ಯಕ್ಕೆ ತಿರುವು ನೀಡಿತು. ಆದರೆ ಆಸ್ಟ್ರೇಲಿಯದ ಮಾಧ್ಯಮಗಳು ಈ ಬಗ್ಗೆ ಗಲಾಟೆ ಮಾಡುತ್ತಿದ್ದು, ಈ ಎಲ್ಲಾ ಟೀಕೆಗಳನ್ನು ಕಂಡು ಸುನಿಲ್‌ ಗವಾಸ್ಕರ್‌ ಫುಲ್‌ ಗರಂ ಆಗಿದ್ದಾರೆ. 

ಫೈನಲ್‌ನಲ್ಲಿ ಡೇವಿಡ್ ಮಿಲ್ಲರ್‌ರನ್ನು ಅದ್ಭುತ ಕ್ಯಾಚ್‌ ಮೂಲಕ ಸೂರ್ಯಕುಮಾರ್ ಔಟ್ ಮಾಡಿದರು. ಆದರೆ ಇದನ್ನು ನ್ಯಾಯಯುತವಾಗಿ ನಿರ್ಧರಿಸಲಾಗಿಲ್ಲ ಎಂದು ಆಸ್ಟ್ರೇಲಿಯಾದ ಪತ್ರಿಕೆಗಳು ವರದಿ ಮಾಡಿವೆ. ಈ ಕುರಿತು ಮಾತನಾಡಿದ ಸುನಿಲ್‌ ಗವಾಸ್ಕರ್‌ "ಸೂರ್ಯಕುಮಾರ್ ಕಡೆಗೆ ಬೆರಳು ತೋರಿಸುವ ಮೊದಲು ಆಸ್ಟ್ರೇಲಿಯಾ ಮಾಡಿದ 10 ಅತ್ಯಂತ ಘೋರ ವಂಚನೆಗಳ ವಿಡಿಯೋಗಳನ್ನು ವೀಕ್ಷಿಸಬೇಕಿತ್ತು" ಎಂದು ಆಸಿಸ್‌ ಮಾದ್ಯಮದ ವಿರುದ್ಧ ಕಿಡಿ ಕಾರಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More