Home> Sports
Advertisement

ಆಘಾತಕಾರಿ ಸುದ್ದಿ ಪ್ರಕಟಿಸಿದ ರೋಹಿತ್ ಶರ್ಮಾ ! ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ

Rohith Sharma Announcement : ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದ್ದಕ್ಕಿದ್ದಂತೆ ಕೆಟ್ಟ ಸುದ್ದಿಯೊಂದನ್ನು ಪ್ರಕಟಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳಲ್ಲಿ ಇದು ನಿರಾಸೆ ಮೂಡಿಸಿದೆ. 

ಆಘಾತಕಾರಿ ಸುದ್ದಿ ಪ್ರಕಟಿಸಿದ ರೋಹಿತ್ ಶರ್ಮಾ ! ಕ್ರಿಕೆಟ್ ಅಭಿಮಾನಿಗಳಲ್ಲಿ  ನಿರಾಸೆ

 Rohith Sharma Announcement : ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದ್ದಕ್ಕಿದ್ದಂತೆ ಕೆಟ್ಟ ಸುದ್ದಿಯೊಂದನ್ನು ಪ್ರಕಟಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳಲ್ಲಿ ಇದು ನಿರಾಸೆ ಮೂಡಿಸಿದೆ. ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ ಸದ್ಯಕ್ಕೆ ತಂಡಕ್ಕೆ ಮರಳುವುದಿಲ್ಲ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಆದರೆ, 2023 ರ ವಿಶ್ವಕಪ್‌ಗೆ ಮೊದಲು ಅವರು ತಂಡಕ್ಕೆ ಮರಳುವ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಚೇತರಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ ರೋಹಿತ್ ಶರ್ಮಾ ಇದೀಗ ಎಲ್ಲವೂ ಸಕಾರಾತ್ಮಕವಾಗಿ ಕಾಣುತ್ತಿದೆ. ಆದರೆ ಐರ್ಲೆಂಡ್‌ನಲ್ಲಿ ನಡೆಯಲಿರುವ ಟಿ 20 ಸರಣಿಯನ್ನು ಆಡುತ್ತಾರೆ  ಎನ್ನುವ ಬಗ್ಗೆ ಖಾತರಿ ಇಲ್ಲ ಎಂದಿದ್ದಾರೆ. 

ಬುಮ್ರಾ ಬಗ್ಗೆ ರೋಹಿತ್ ಹೇಳಿಕೆ : 
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬುಮ್ರಾ ಅಪಾರ ಅನುಭವ ಹೊಂದಿರುವ ಆಟಗಾರ. ಗಂಭೀರ ಗಾಯಗೊಂಡ ನಂತರ ತಂಡದಿಂದ ಹೊರಗುಳಿದಿದ್ದ ಬುಮ್ರಾ, ಇದೀಗ ಚೇತರಿಸಿಕೊಂಡಿದ್ದಾರೆ.  ಆದರೆ  ಐರ್ಲೆಂಡ್‌ ಸರಣಿಗೆ ಅವರು ತಂಡದಲ್ಲಿ ಇರುತ್ತಾರೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ ಎಂದಿದ್ದಾರೆ.  ಆದರೆ ವಿಶ್ವಕಪ್‌ಗೂ ಮುನ್ನ ಅವರು ತಂಡಕ್ಕೆ ಮರಳುತ್ತಾರೆ ಎಂದು ನೀರೀಕ್ಷಿಸುತ್ತಿದ್ದೇನೆ ಎಂದಿದ್ದಾರೆ. 

ಇದನ್ನೂ ಓದಿ : ODIನಲ್ಲಿ ಇತಿಹಾಸ ಸೃಷ್ಟಿಸಲು ಇನ್ನೊಂದೇ ಹೆಜ್ಜೆ ಬಾಕಿ! ವಿಶ್ವದಲ್ಲಿ ನಾಲ್ವರು ಬರೆದ ಆ ದಾಖಲೆ ಮುಟ್ಟುತ್ತಾರಾ ವಿರಾಟ್?

ಕ್ರಿಕೆಟ್ ಅಭಿಮಾನಿಗಳಲ್ಲಿ ಆವರಿಸಿದ ನಿರಾಸೆ :  
ಬೆನ್ನು ನೋವಿನ ಕಾರಣದಿಂದ ಬುಮ್ರಾ ಮಾರ್ಚ್ 2023 ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ವರ್ಷ ಸೆಪ್ಟೆಂಬರ್ 2022 ರಲ್ಲಿ ಆಸ್ಟ್ರೇಲಿಯಾ ವಿರುದ್ಧ T20 ನಲ್ಲಿ ಆಡಿರುವುದೇ ಅವರ ಕೊನೆಯ ಪಂದ್ಯ. ಐರ್ಲೆಂಡ್ ಸರಣಿಯ ಬಳಿಕ  ಭಾರತವು ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ ಅನ್ನು ಆಡಬೇಕಾಗಿದೆ. ಇದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

ವಿಶ್ವಕಪ್ ಮೊದಲು ಕೆಟ್ಟ ಸುದ್ದಿ : 
 ಒಂದು ವೇಳೆ ಬುಮ್ರಾ  ಐರ್ಲೆಂಡ್ ಸರಣಿ ಮತ್ತು ಏಷ್ಯಾ ಕಪ್ ಆಡದಿದ್ದರೆ,  ವಿಶ್ವಕಪ್‌ಗೆ ಮುನ್ನ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನು ಆಡಲಿದ್ದಾರೆ. ನಮ್ಮ ತಂಡದ ಹಲವು ಆಟಗಾರರು ಗಾಯಗೊಂಡಿದ್ದಾರೆ ಆದರೆ ವಿಶ್ವಕಪ್‌ನಲ್ಲಿ ಯಾರು ಆಡುತ್ತಾರೆ ಎಂಬುದನ್ನು  ಕಾದು ನೋಡಬೇಕಿದೆ. ಉಆರು ಯಾವಾಗ ಬೇಕಾದರೂ ಗಾಯಗೊಳ್ಳಬಹುದಾಗಿರುವ ಕಾರಣ   15-20 ಆಟಗಾರರ ಪೂಲ್ ಮಾಡಬೇಕಾಗಿದೆ  ಎಂದಿದ್ದಾರೆ. 

ಇದನ್ನೂ ಓದಿ :  ODI Asia Cup ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಗೆಲುವು ಕಂಡ Team India ನಾಯಕ ಯಾರು ಗೊತ್ತಾ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More