Home> Sports
Advertisement

IND vs SL: ಮೊದಲ ಪಂದ್ಯದಲ್ಲೆ ಅನಾಹುತ..ರವಿ ಬಿಷ್ಣೈ ಮುಖಕ್ಕೆ ಅಪ್ಪಳಿಸಿದ ಬಾಲ್‌, ಗಳಗಳನೇ ಅತ್ತ ಆಟಗಾರ..!

IND vs SL: ಶ್ರೀಲಂಕಾ ವಿರುದ್ಧ ಭಾರತ ತಂಡ ಮೊದಲ ಟಿ20 ಪಂದ್ಯವನ್ನು ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 213 ರನ್ ಕಲೆಹಾಕಿತು. ಉತ್ತಮ ಆಟವಾಡಿದ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿ ಸೇರಿದಂತೆ 58 ರನ್ ಕಲೆಹಾಕಿ ತಂಡದಕ್ಕೆ ಭಾರಿ ಮೊತ್ತ ತಂದುಕೊಡುವಲ್ಲಿ ಮುಖ್ಯ ಪಾತ್ರ ವಹಿಸಿದರು.
 

IND vs SL: ಮೊದಲ ಪಂದ್ಯದಲ್ಲೆ ಅನಾಹುತ..ರವಿ ಬಿಷ್ಣೈ ಮುಖಕ್ಕೆ ಅಪ್ಪಳಿಸಿದ ಬಾಲ್‌, ಗಳಗಳನೇ ಅತ್ತ ಆಟಗಾರ..!

IND vs SL: ಶ್ರೀಲಂಕಾ ವಿರುದ್ಧ ಭಾರತ ತಂಡ ಮೊದಲ ಟಿ20 ಪಂದ್ಯವನ್ನು ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 213 ರನ್ ಕಲೆಹಾಕಿತು. ಉತ್ತಮ ಆಟವಾಡಿದ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿ ಸೇರಿದಂತೆ 58 ರನ್ ಕಲೆಹಾಕಿ ತಂಡದಕ್ಕೆ ಭಾರಿ ಮೊತ್ತ ತಂದುಕೊಡುವಲ್ಲಿ ಮುಖ್ಯ ಪಾತ್ರ ವಹಿಸಿದರು.

ಶ್ರೀಲಂಕಾ ಪರ ಪತಿರಾನ 4 ಓವರ್‌ಗಳಲ್ಲಿ 40 ರನ್ ನೀಡಿ 4 ವಿಕೆಟ್ ಪಡೆದರು. ಇದಾದ ಬಳಿಕ ಮೈದಾನಕ್ಕಿಳಿದ ಶ್ರೀಲಂಕಾ ತಂಡದ ಬ್ಯಾಟ್ಸ್‌ಮೆನ್‌ಗಳು  ಮೊದಲ ವಿಕೆಟ್‌ಗೆ 84 ರನ್ ಕಲೆಹಾಕಿದರು. 

ಶ್ರೀಲಂಕಾ ತಂಡದ ಆರಂಭಿಕ ಆಟಗಾರ ನಿಸಂಗ 48 ಎಸೆತಗಳಲ್ಲಿ 79 ರನ್ ಗಳಿಸಿ ಔಟಾದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಕುಸಲ್ ಪೆರೆರಾ ಕೂಡ 20 ರನ್ ಗಳಿಸಿ ಔಟಾಗಿದ್ದರಿಂದ ಶ್ರೀಲಂಕಾ ತಂಡ 15 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 149 ರನ್ ಪೇರಿಸಿತ್ತು. ಇದಾದ ನಂತರ 16ನೇ ಓವರ್ ಬೌಲ್ ಮಾಡಲು ಸ್ಪಿನ್ನರ್ ರವಿ ಬಿಷ್ಣೈ ಅವರನ್ನು ಕರೆಯಲಾಯಿತು.

ಇದನ್ನೂ ಓದಿ: 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಆ ಓವರ್‌ನ ಮೊದಲ ಎಸೆತದಲ್ಲಿ ಕಮಿಂದು ಮೆಂಡಿಸ್ ಅವರ ಹೊಡೆತ ಬೌಲರ್ ರವಿ ಬಿಷ್ಣೈ ಅವರು ಹೊಡೆದ ಬಾಲ್‌ ಅನ್ನು ರವಿ ಬಿಷ್ಣೈ  ಹಿಡಿಯಲು ಪ್ರಯತ್ನಿಸಿದರು ಆದರೆ ಕ್ಯಾಚ್ ಪಡೆದು ಕೆಳಗೆ ಬಿದ್ದಾಗ ಕೈಯಲ್ಲಿದ್ದ ಚೆಂಡು ಬಿಷ್ಣೈ ಅವರ ಎಡಗಣ್ಣಿನ ಕೆಳಗೆ ಬಲವಾಗಿ ಬಡಿದಿದೆ.

ಬಾಲ್‌ ಬಡಿದ ರಬಸಕ್ಕೆ ರವಿ ಬಿಷ್ಣೈ ಪಿಚ್‌ನಲ್ಲಿ ಕಿರುಚಾಡಿದರು, ತಕ್ಷಣವೇ ಅವರ ಕೆನ್ನೆಯಿಂದ ರಕ್ತ ಹರಿಯಲು ಶುರುವಾಯಿತು. ಚೆಂಡಿನ ವೇಗವು ಮುಖಕ್ಕೆ ಬಡಿದ ಕಾರಣ, ಆಟವನ್ನು ನಿಲ್ಲಿಸಲಾಯಿತು ಮತ್ತು ಫಿಸಿಯೊ ತಕ್ಷಣ ಪಿಚ್‌ಗೆ ತೆರಳಿದರು. ಅದರ ನಂತರ ಅವರು ಐಸ್ ಪ್ಯಾಕ್ನೊಂದಿಗೆ ಕಣ್ಣುಗಳ ಕೆಳಗೆ ಬ್ಯಾಂಡ್ ಎಡ್‌ ಹಾಕಿ ಆಟಗಾರನಿಗೆ ಫೀಲ್ಡ್‌ನಲ್ಲಿ ಚಿಕಿತ್ಸೆ ನೀಡಿದರು. 

ನಂತರ ರವಿ ಬಿಷ್ಣೈ ಅವರು ದೃಷ್ಟಿ ಸಮಸ್ಯೆ ಇಲ್ಲ ಎಂದು ಖಚಿತಪಡಿಸಿದ ನಂತರ, ಆಟ ಪುನರಾರಂಭವಾಯಿತು. ಸತತ 2 ಬೌಂಡರಿ ಬಾರಿಸಿದ ರವಿ ಬಿಷ್ಣೈ ಕೊನೆಯ ಎಸೆತದಲ್ಲಿ ಅಸಲಂಗಾ ವಿಕೆಟ್ ಪಡೆಯುವ ಮೂಲಕ ಸೇಡು ತೀರಿಸಿಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More