Home> Sports
Advertisement

2024ರ ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾ ಪ್ರಕಟ: ಈ ಆಟಗಾರನೇ ನಾಯಕ- ರೋಹಿತ್, ಕೊಹ್ಲಿಗಿಲ್ಲ ಸ್ಥಾನ

T20 World Cup 2024 India Team: ಇನ್ನೇನು 7 ತಿಂಗಳಲ್ಲಿ ಮತ್ತೊಂದು ವಿಶ್ವಕಪ್ ಆರಂಭವಾಗುವ ದೃಷ್ಟಿಯಿಂದ ಈ ತಂಡ ರಚಿಸಿರುವ ಅವರು ಕಳೆದ ವಿಶ್ವಕಪ್ ಫ್ಲಾಪ್ ಆಟಗಾರರಿಗೆ ಸ್ಥಾನ ನೀಡಿಲ್ಲ.

2024ರ ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾ ಪ್ರಕಟ: ಈ ಆಟಗಾರನೇ ನಾಯಕ- ರೋಹಿತ್, ಕೊಹ್ಲಿಗಿಲ್ಲ ಸ್ಥಾನ

S Sreesanth Picks team for the 2024 T20 World Cup: ಭಾರತದ ಮಾಜಿ ವೇಗಿ ಎಸ್ ಶ್ರೀಶಾಂತ್ 2024ರ ಟಿ20 ವಿಶ್ವಕಪ್‌’ಗಾಗಿ ಭಾರತ ತಂಡವನ್ನು ಆರಿಸಿದ್ದಾರೆ. ಇನ್ನೇನು 7 ತಿಂಗಳಲ್ಲಿ ಮತ್ತೊಂದು ವಿಶ್ವಕಪ್ ಆರಂಭವಾಗುವ ದೃಷ್ಟಿಯಿಂದ ಈ ತಂಡ ರಚಿಸಿರುವ ಅವರು ಕಳೆದ ವಿಶ್ವಕಪ್ ಫ್ಲಾಪ್ ಆಟಗಾರರಿಗೆ ಸ್ಥಾನ ನೀಡಿಲ್ಲ.

ಶ್ರೀಶಾಂತ್ ನೀಡಿದ ಹೇಳಿಕೆಯಂತೆ, "ರೋಹಿತ್ ಶರ್ಮಾ ಆಡುತ್ತಾರೋ ಇಲ್ಲವೋ ಎಂಬುದು ಒಂದು ದೊಡ್ಡ ಪ್ರಶ್ನೆ. ಆದರೆ ಎಲ್ಲಾ ಐಪಿಎಲ್‌’ಗಳನ್ನು ಗೆದ್ದ ಕಾರಣ ಅವರು ನಾಯಕರಾಗುತ್ತಾರೆ" ಎಂದು ಯೂಟ್ಯೂಬ್ ಚಾನೆಲ್‌ ಜೊತೆಗಿನ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಭಾರತದ ಈ ಆಟಗಾರ ವಿಶ್ವದ ಅತ್ಯಂತ ನತದೃಷ್ಟ ವ್ಯಕ್ತಿ: ಟ್ರಾವಿಸ್ ಹೆಡ್ ಹೇಳಿದ್ದು ಯಾರ ಬಗ್ಗೆ?

ಶ್ರೀಶಾಂತ್ ಅವರ 2024ರ ಟಿ20 ವಿಶ್ವಕಪ್ ತಂಡದಲ್ಲಿ, 2023ರ ODI ವಿಶ್ವಕಪ್ ತಂಡದ ಬಹುತೇಕ ಆಟಗಾರರಿದ್ದಾರೆ. ಆದರೆ ಯಶಸ್ವಿ ಜೈಸ್ವಾಲ್ ಮಾತ್ರ ಹೊಸ ಬ್ಯಾಟರ್ ಆಗಿ ಸೇರ್ಪಡೆಯಾಗಿದ್ದಾರೆ. ಇನ್ನು ಶುಭ್ಮನ್ ಗಿಲ್ ಅವರನ್ನು ಹೊರಗಿಡಲಾಗಿದೆ.

"ರಿಷಭ್ ಪಂತ್ ಅವರು ಫಿಟ್ ಆಗಿದ್ದರೆ ಥರ್ಟ್ ಕೀಪರ್ ಆಗಿ ಇರಬೇಕು. ನಮಗೆ ಬೇಕಿರುವುದು ಮ್ಯಾಚ್ ವಿನ್ನರ್. ಈ ಕಾರಣದಿಂದ ಅವರನ್ನು ಥರ್ಡ್ ಆಯ್ಕೆಯಾಗಿ ಇಡಬೇಕು, ನಮಗೆ ಆಡಲು ಮತ್ತು ಗೆಲ್ಲಲು ಸಿದ್ಧವಾಗಿರುವ ಆಟಗಾರ ಬೇಕು” ಎಂದಿದ್ದಾರೆ.

ಇನ್ನು ಶ್ರೀಶಾಂತ್ ಆಯ್ಕೆ ಅನುಸಾರ 2024 ಟಿ20 ವಿಶ್ವಕಪ್’ಗೆ ತಂಡ ಹೀಗಿದೆ:

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೆಎಲ್ ರಾಹುಲ್, ರಿಷಬ್ ಪಂತ್, ಮೊಹಮ್ಮದ್ ಶಮಿ, ಬುಮ್ರಾ, ರವೀಂದ್ರ ಜಡೇಜಾ. ಮೊಹಮ್ಮದ್ ಸಿರಾಜ್.

ಇನ್ನೊಂದೆಡೆ ಕೆಲ ಮೂಲಗಳ ಪ್ರಕಾರ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿ ಮಾಡಲಾಗುತ್ತಿದ್ದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರನ್ನೇ ಹೊರಗಿಟ್ಟು ಮುಂದಿನ 7 ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್’ಗೆ ಹೊಸ ತಂಡವನ್ನು ಪ್ರಕಟಿಸಲಾಗುತ್ತಿದೆ. ಈ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದರೆ, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಇನ್ನು ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ ಮತ್ತು ರುತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಕಣಕ್ಕಿಳಿಯಬಹುದು.

ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಇದ್ದರೆ, ಹಾರ್ದಿಕ್ ಪಾಂಡ್ಯ ಮತ್ತು ರಿಂಕು ಸಿಂಗ್ ಫಿನಿಶರ್ ಆಗಿ ಮುಂದುವರೆಯುವ ಸಾಧ್ಯತೆ ಇದೆ. ಇನ್ನು ರವೀಂದ್ರ ಜಡೇಜಾ ಈ ತಂಡದಲ್ಲೂ ಸಾಧ್ಯತೆ ಪಡೆದಿದ್ದಾರೆ. ಆಲ್’ರೌಂಡರ್ ಆಗಿ ಅಕ್ಷರ್ ಪಟೇಲ್, ಶಿವಂ ದುಬೆ ಮತ್ತು ವಾಷಿಂಗ್ಟನ್ ಸುಂದರ್ ಆಲ್‌’ರೌಂಡರ್‌’ಗಳಾಗಿ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್ ರೋಗವನ್ನು ಬುಡದಿಂದಲೇ ತೊಲಗಿಸುತ್ತೆ ಈ ಬೇರು! ಹಾಲಿನೊಂದಿಗೆ ಬೆರೆಸಿ ಕುಡಿದರೆ ಶಾಶ್ವತ ಮುಕ್ತಿ ಖಚಿತ

ಒಟ್ಟಿನಲ್ಲಿ ಏಕದಿನ ವಿಶ್ವಕಪ್ ಆಡಿದ ಇಡೀ ತಂಡವೇ ಬದಲಾಗಲಿದೆ. ರೋಹಿತ್, ಕೊಹ್ಲಿ, ಶಮಿ, ಅಶ್ವಿನ್, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರಿಗೆ ಟಿ20 ತಂಡದಲ್ಲಿ ಸ್ಥಾನ ಸಿಗುವುದು ಕಷ್ಟ ಎನಿಸುತ್ತಿದೆ. 2013ರಲ್ಲಿ ಚಾಂಪಿಯನ್ಸ್​ ಟ್ರೋಫಿ ಗೆದ್ದ ಬಳಿಕ ಭಾರತ ಯಾವುದೇ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. 2014ರಿಂದ 5 ಬಾರಿ ಫೈನಲ್​ನಲ್ಲಿ, 4 ಬಾರಿ ಸೆಮಿಫೈನಲ್​ನಲ್ಲಿ ಸೋಲು ಕಂಡಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More