Home> Sports
Advertisement

IPL 2023 : ಈ ಬಾರಿಯೂ ʼRCBʼ ಗೆಲ್ಲೋದು ಡೌಟ್‌..! ಮಾಜಿ ಕ್ರಿಕೆಟಿಗನ ಶಾಕಿಂಗ್‌ ಭವಿಷ್ಯ

IPL 2023 RCB : ಆರ್‌ಸಿಬಿ ಕಳೆದ 15 ವರ್ಷಗಳಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿಯೂ ಬೆಂಗಳೂರು ಅಗ್ರ-3 ಸ್ಥಾನಕ್ಕೇರುವುದಿಲ್ಲ ಎಂದು ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಬೌಲರ್‌ಗಳ ಪ್ರದರ್ಶನವು ತಂಡವು ಎಲ್ಲಿಗೆ ಹೋಗಬೇಕು ಎಂಬುದನ್ನು ನಿರ್ಧರಿಸುತ್ತದೆ. ಏಕೆಂದರೆ ಅದು ಬ್ಯಾಟಿಂಗ್‌ಕಿಂತ ಬಲಿಷ್ಠವಾಗಿರುತ್ತದೆ. ವನಿಂದು ಹಸರಂಗ ನಿರ್ಣಾಯಕವಾಗುವ ಸಾಧ್ಯತೆ ಇದೆ. ಜೋಶ್ ಹೇಜಲ್‌ವುಡ್‌ ಆಡದೇ ಇದ್ದರೆ ಆರ್‌ಸಿಬಿಗೆ ದೊಡ್ಡ ಹಿನ್ನಡೆಯಾಗಲಿದೆ ಚೋಪ್ರಾ ಅಭಿಪ್ರಾಯ ಪಟ್ಟಿದ್ದಾರೆ.

IPL 2023 : ಈ ಬಾರಿಯೂ ʼRCBʼ ಗೆಲ್ಲೋದು ಡೌಟ್‌..! ಮಾಜಿ ಕ್ರಿಕೆಟಿಗನ ಶಾಕಿಂಗ್‌ ಭವಿಷ್ಯ

Aakash Chopra on RCB : ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಮುಗಿದಿದ್ದು, ಎಲ್ಲಾ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈಗ ಐಪಿಎಲ್‌ಗಾಗಿ ಎದುರು ನೋಡುತ್ತಿದ್ದಾರೆ. ಮಾರ್ಚ್ 31 ರಿಂದ ಐಪಿಎಲ್ ಸೀಸನ್ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಈ ಬಾರಿ 12 ಕ್ರೀಡಾಂಗಣಗಳಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಯಾವ ತಂಡ ಫೈನಲ್ ತಲುಪಲಿದೆ..? ಯಾವ ತಂಡ ಪ್ರಶಸ್ತಿ ಗೆಲ್ಲಲಿದೆ..? ಈ ಬಾರಿ ಯಾರು ಚೆನ್ನಾಗಿ ಆಡುತ್ತಾರೆ ಎಂದು ಮಾಜಿಗಳು ಭವಿಷ್ಯ ನುಡಿದಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಈ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆರ್‌ಸಿಬಿ ಕಳೆದ 15 ವರ್ಷಗಳಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿಯೂ ಬೆಂಗಳೂರು ಅಗ್ರ-3 ಸ್ಥಾನಕ್ಕೇರುವುದಿಲ್ಲ ಎಂದು ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಬೆಂಗಳೂರು ತಂಡ ಪ್ರಶಸ್ತಿ ಗೆಲ್ಲಬೇಕು ಎಂಬ ಆಸೆ ನನಗೂ ಇದೆ.. ಆದರೆ ಬಹುಶಃ ಈ ಬಾರಿ ಟಾಪ್-3ಗೆ ಬರದೇ ಇರಬಹುದು ಎಂದರು. ನಾಲ್ಕಾರು ಕಡೆ ಈ ಸೀಸನ್ ಮುಗಿಸುವ ಸಾಧ್ಯತೆ ಇದೆ ಅಂತ ತಿಳಿಸಿದ್ರು.

ಇದನ್ನೂ ಓದಿ: ಬ್ರಾವೋಗೆ ಶಿಳ್ಳೆ ಹೊಡೆಯೋದು ಹೇಗೆ ಅಂತ ಹೇಳಿಕೊಟ್ಟ ಕ್ಯಾಪ್ಟನ್‌ MSD..! ಫನ್ನಿ ವಿಡಿಯೋ ನೋಡಿ

RCB ಬೌಲರ್‌ಗಳ ಬಗ್ಗೆ ಮಾತನಾಡಿದ ಆಕಾಶ್ ಚೋಪ್ರಾ, ಬೌಲರ್‌ಗಳ ಪ್ರದರ್ಶನವು ತಂಡವು ಎಲ್ಲಿಗೆ ಹೋಗಬೇಕು ಎಂಬುದನ್ನು ನಿರ್ಧರಿಸುತ್ತದೆ. ಏಕೆಂದರೆ ಅದು ಬ್ಯಾಟಿಂಗ್‌ಕಿಂತ ಬಲಿಷ್ಠವಾಗಿರುತ್ತದೆ. ವನಿಂದು ಹಸರಂಗ ನಿರ್ಣಾಯಕವಾಗುವ ಸಾಧ್ಯತೆ ಇದೆ. ಜೋಶ್ ಹೇಜಲ್‌ವುಡ್‌ ಆಡದೇ ಇದ್ದರೆ ಆರ್‌ಸಿಬಿಗೆ ದೊಡ್ಡ ಹಿನ್ನಡೆಯಾಗಲಿದೆ. ಜೋಶ್ ಹ್ಯಾಜಲ್‌ವುಡ್ ಅವರಿಲ್ಲದೆ ತಂಡದ ಬೌಲಿಂಗ್ ದುರ್ಬಲವಾಗಲಿದೆ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಯಿಂದ ಹ್ಯಾಜಲ್ ವುಡ್ ಗಾಯಗೊಂಡು ಹೊರಗುಳಿದಿರುವುದು ಗೊತ್ತೇ ಇದೆ. ಅವರು ಐಪಿಎಲ್‌ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗುವ ನಿರೀಕ್ಷೆಯಿದೆ. ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮೊಹಮ್ಮದ್ ಸಿರಾಜ್, ಸಿದ್ಧಾರ್ಥ್ ಕೌಲ್, ಹರ್ಷಲ್ ಪಟೇಲ್, ಕರಣ್ ಶರ್ಮಾ, ಆಕಾಶದೀಪ್ ಅವರಂತಹ ಬೌಲರ್‌ಗಳಿದ್ದರೂ ಜೋಶ್ ಹ್ಯಾಜಲ್‌ವುಡ್ ಇಲ್ಲದಿರುವುದು ತಂಡವನ್ನು ತುಂಬಾ ದುರ್ಬಲಗೊಳಿಸುತ್ತದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More