Home> Sports
Advertisement

ಆಸಿಸ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಆಕಾಶ್ ಚೋಪ್ರಾ ಹೇಳಿದ್ದೇನು?

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸುತ್ತಿರುವ ಟೀಮ್ ಇಂಡಿಯಾ ಸಜ್ಜಾಗಿದ್ದು, ಈ ಸಂದರ್ಭದಲ್ಲಿ ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಮೊದಲ ಪಂದ್ಯಕ್ಕೂ ಮುನ್ನ ಕೆಲವು ಸವಾಲುಗಳ ಕುರಿತಾಗಿ ಸುದೀರ್ಘವಾಗಿ ಮಾತನಾಡಿದ್ದಾರೆ.

ಆಸಿಸ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಆಕಾಶ್ ಚೋಪ್ರಾ ಹೇಳಿದ್ದೇನು?

ನವದೆಹಲಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸುತ್ತಿರುವ ಟೀಮ್ ಇಂಡಿಯಾ ಸಜ್ಜಾಗಿದ್ದು, ಈ ಸಂದರ್ಭದಲ್ಲಿ ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ ಮೊದಲ ಪಂದ್ಯಕ್ಕೂ ಮುನ್ನ ಕೆಲವು ಸವಾಲುಗಳ ಕುರಿತಾಗಿ ಸುದೀರ್ಘವಾಗಿ ಮಾತನಾಡಿದ್ದಾರೆ.

ಹಲವಾರು ಆಟಗಾರರು ಆರಂಭಿಕ ಸ್ಥಳಕ್ಕಾಗಿ ಬಾಗಿಲು ಬಡಿಯುತ್ತಿರುವುದರಿಂದ 11 ಆಟಗಾರರನ್ನು ಅಂತಿಮವಾಗಿ ಆಯ್ಕೆ ಮಾಡಿರುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಕೆಎಲ್ ರಾಹುಲ್, ಶಿಖರ್ ಧವನ್, ಮತ್ತು ವಿರಾಟ್ ಕೊಹ್ಲಿ ಅವರಂತಹವರು ಭಾರತವನ್ನು ಉತ್ತಮ ಆರಂಭಕ್ಕೆ ತರುವ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದರಿಂದ ಅವರ ಆಟದ ಮೇಲೆ ಪಂದ್ಯದ ಚಿತ್ರಣ ಅವಲಂಭಿತವಾಗಿರಲಿದೆ.

ಕ್ರಿಕೆಟ್ ನಲ್ಲಿನ ಸ್ವಜನಪಕ್ಷಪಾತದ ಬಗ್ಗೆ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದೇನು?

ಟಾಸ್ ಗೆದ್ದರೆ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡುವುದನ್ನು ನೋಡುತ್ತೇನೆ. ಭಾರತ ಈಗ ದೀರ್ಘಕಾಲದವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡದ ನಂ .6 ರಲ್ಲಿ ಹಾರ್ದಿಕ್ ಅವರನ್ನು ಹೊಂದಿದ್ದಾರೆ. ಆದ್ದರಿಂದ ಅವರು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯ ಇದು ”ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ.

ನಾನು ಕುಂಬ್ಳೆಗೆ ವಿಕೆಟ್ ಒಪ್ಪಿಸುವುದಿಲ್ಲ ಎಂದು ವಕಾರ್ ಗೆ ಹೇಳಿದ್ದೆ ! ..ಅಕ್ರಮ್ ಹೇಳಿದ ರೋಚಕ ಕಥೆ

ಬುಮ್ರಾ ಮತ್ತು ಶಮಿ ಅವರೊಂದಿಗೆ ಅವರು ಪೂರ್ಣ ಐದು ಬೌಲರ್‌ಗಳನ್ನು ಹೊಂದಿದ್ದಾರೆ. ನಾನು ನಿಜವಾಗಿ ಮೊದಲು ಬ್ಯಾಟಿಂಗ್ ಮಾಡುತ್ತೇನೆ. ಅವರು ಪಿಚ್ ಅನ್ನು ನಿರ್ಣಯಿಸಬೇಕು ಮತ್ತು 280-300 ರನ್ ಗಳಿಸಲು ಪ್ರಯತ್ನಿಸಬೇಕು. ಕೊಹ್ಲಿಗೆ ಉತ್ತಮ ದಿನವಿದ್ದರೆ, ಭಾರತವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಕೊಹ್ಲಿ  ವೈಫಲ್ಯವದಲ್ಲಿ ತಂಡದಲ್ಲಿ ಕೆಲವು ಸಂಗತಿಗಳು ಬದಲಾಗುತ್ತವೆ ಎಂದು ಹೇಳಿದರು.
 

Read More