Home> Spiritual
Advertisement

Ugadi 2023 Horoscope: ಈ ವರ್ಷ ಯುಗಾದಿ ಯಾರಿಗೆ ಸಿಹಿ? ಯಾರಿಗೆ ಕಹಿ? ತಿಳಿಯಿರಿ

Ugadi 2023 Horoscope Predictions: ಹಿಂದೂ ಸಂಪ್ರದಾಯದ ಹೊಸ ವರ್ಷ ಶೋಭಕೃತ್ ನೂತನ ನಾಮ ಸಂವತ್ಸರ ಯುಗಾದಿ ಹಿಂದೂಗಳ ಅತ್ಯಂತ ದೊಡ್ಡ ಹಬ್ಬ. ಈ ನೂತನ ಸಂವತ್ಸರ ಯಾರ ಬಾಳಲ್ಲಿ ಸಿಹಿ ತರಲಿದೆ, ಯಾರ ಜೀವನದಲ್ಲಿ ಕಹಿ ತರಲಿದೆ ಎಂದು ತಿಳಿಯೋಣ. 
 

Ugadi 2023 Horoscope: ಈ ವರ್ಷ ಯುಗಾದಿ ಯಾರಿಗೆ ಸಿಹಿ? ಯಾರಿಗೆ ಕಹಿ? ತಿಳಿಯಿರಿ

Ugadi 2023 Horoscope Predictions In Kannada: 

ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ

ನಕ್ಷತ್ರಾದ್ಫರತೇ ಪಾಪಂ ಯೋಗಾದ್ರೋಗ ನಿವಾರಣಂ 
ಕರಣಾತ್ಕಾರ್ಯ ಸಿದ್ದಿಂಚ ಪಂಚಾಂಗ ಫಲಮುತ್ತಮಂ||

ಅರ್ಥ- ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಆ ವರ್ಷದ ರಾಜ, ಮಂತ್ರಿ ಮೊದಲಾದ ಪಂಚಾಂಗದಲ್ಲಿನ ಫಲಗಳನ್ನು ಯಾರು ಕೇಳುವರೋ ಅಂತಹವರು ಪಾಪ ಫಲಗಳಿಂದ ಮುಕ್ತರೂ, ದೀರ್ಘಾಯುಷ್ಯವಂತರೂ, ಐಶ್ವರ್ಯವಂತರೂ, ಕೀರ್ತಿವಂತರೂ, ಅತಿಶಯವಾದ ಸುಖಾನುಭವಿಗಳೂ, ಪುತ್ರ ಪೌತ್ರಭಿ ವೃದ್ಧಿಯುಳ್ಳವರೂ ಆಗುತ್ತಾರೆ. ತಿಥಿಯಿಂದ ಐಶ್ವರ್ಯ, ವಾರದಿಂದ ಆರ್ಯವೃದ್ಧಿ, ನಕ್ಷತ್ರದಿಂದ ಪಾಪ ಪರಿಹಾರ, ಯೋಗದಿಂದ ರೋಗ ನಿವಾರಣೆ, ಕಾರಣದಿಂದ ಕಾರ್ಯ ಸಿದ್ಧಿ ಮೊದಲಾದ ಶುಭ ಫಲಗಳು ಪಂಚಾಂಗದಿಂದ ಲಭಿಸುತ್ತದೆ. 

ಹಿಂದೂ ಸಂಪ್ರದಾಯದ ಹೊಸ ವರ್ಷ ಶೋಭಕೃತ್ ನೂತನ ನಾಮ ಸಂವತ್ಸರ ಯುಗಾದಿ ಹಿಂದೂಗಳ ಅತ್ಯಂತ ದೊಡ್ಡ ಹಬ್ಬ. ಈ ನೂತನ ಸಂವತ್ಸರ ಯಾರ ಬಾಳಲ್ಲಿ ಸಿಹಿ ತರಲಿದೆ, ಯಾರ ಜೀವನದಲ್ಲಿ ಕಹಿ ತರಲಿದೆ ಎಂದು ತಿಳಿಯೋಣ. 

ಯುಗಾದಿ 2023 ಭವಿಷ್ಯ- ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ:-
ಮೇಷ ರಾಶಿ:

ಮೇಷ ರಾಶಿಯವರಿಗೆ ದುರ್ಜನರ ಸಹವಾಸದಿಂದ ಕೆಟ್ಟ ಚಟಗಳು ಕಾಡಬಹುದು.  ವರಮಾನದಲ್ಲಿ ಹೆಚ್ಚಳ ಸಾಧ್ಯತೆ. ಕುಟುಂಬದಲ್ಲಿ ಬಿರುಕು ಬಿಡುವ ಸಂದರ್ಭಗಳು ಎದುರಾಗಬಹುದು. ಇದಲ್ಲದೆ, ವಿರೋಧಿಗಳ ಕೈ ಮೇಲಾಗುವ ಸಾಧ್ಯತೆಯಿದ್ದು ಮನಸ್ಸಿನಲ್ಲಿ ತಳಮಳ. ದ್ರವ್ಯ ಲಾಭ.

ವೃಷಭ ರಾಶಿ: 
ವೃಷಭ ರಾಶಿಯವರಿಗೆ ವೃತ್ತಿಯಲ್ಲಿ, ವಹಿವಾಟಿನಲ್ಲಿ ಏರುಪೇರು, ರಾಜಕೀಯದಲ್ಲಿ ಆಸಕ್ತಿ, ಸಂಚಾರದಲ್ಲಿ ಅಪಾಯದ ಭಯ. ಆಪ್ತರ ಮೇಲೆಯೇ ಸಂಶಯ ಪದ್ವ ಸಂಭವ. ಗುಪ್ತ ರೋಗಗಳು ಕಾಡುವ ಸಾಧ್ಯತೆ. 

ಮಿಥುನ ರಾಶಿ: 
ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋಗಬಹುದು. ಕುಟುಂಬದಲ್ಲಿ ಕಲಹ. ಮನರಂಜನಾ ರಂಗದಲ್ಲಿರುವವರಿಗೆ ಲಾಭ. ದೂರ ದೇಶ ಪ್ರಯಾಣ. ನಿಮ್ಮ ಆಪ್ತರ ಬಗ್ಗೆ ಆಶುಭ ಸುದ್ದಿ ಕೇಳುವ ಸಾಧ್ಯತೆ.

ಕರ್ಕಾಟಕ ರಾಶಿ:
ಧರ್ಮ ಕಾರ್ಯಗಳಲ್ಲಿ ಅಡಚಣೆಗಳು, ಮನಸ್ತಾಪದಿಂದ ಸಂಬಂಧಗಳಲ್ಲಿ ಆಸಕ್ತಿ ಕಡಿಮೆ. ಕಾರಣವಿಲ್ಲದೆ ಭಯಪಡುವ ಪರಿಸ್ಥಿತಿ. ವ್ಯಾಸಂಗದಲ್ಲಿ ಅಡಚಣೆ, ತಂದೆ ಸಮಾನರಿಗೆ ಅನಿರೀಕ್ಷಿತ ಆರೋಗ್ಯ ಸಮಸ್ಯೆ. 

ಇದನ್ನೂ ಓದಿ- ಹೊಸ ವರ್ಷದ ಆರಂಭಕ್ಕೆ ನಾಂದಿ ಹಾಡುವ ಯುಗಾದಿ ಹಬ್ಬ .. ಏನಿದರ ಮಹತ್ವ?

ಸಿಂಹ ರಾಶಿ: 
ಸಂಗಾತಿಯಿಂದ ದೂರವಾಗುವ ಸಾಧ್ಯತೆ. ಸಹೋದರರಿಗೆ ಸಹಾಯ ಮಾಡುವ ಅವಕಾಶ. ಹೊಸ ಯೋಜನೆಗೆ ಚಾಲನೆ. ಆರ್ಥಿಕ ವೃದ್ಧಿ.

ಕನ್ಯಾ ರಾಶಿ: 
ಸಂಶೋಧನೆ ಮಾಡುವ ಮನೋಭಾವ, ಕೆಲಸದ ನಿಮಿತ್ತ ದೂರ ಪ್ರದೇಶಕ್ಕೆ ಪ್ರಯಾಣ. ಅನಿರೀಕ್ಷಿತ ಧನಲಾಭ. ಸಜ್ಜನರ ಸ್ನೇಹಕ್ಕೆ ಪಟ್ಟುಬೀಳುವ ಸಾಧ್ಯತೆ. ಹಲ್ಲು ನೋವು ಕಾಡಬಹುದು. 

ತುಲಾ ರಾಶಿ: 
ಒಡಹುಟ್ಟಿದವರೊಂದಿಗೆ ಕಲಹ, ಮನೆಯಲ್ಲಿ ನೆಮ್ಮದಿ ಇಲ್ಲದಿರುವುದು. ದುರ್ಬಲ ಮನಸ್ಸು, ಆದಾಯದಲ್ಲಿ ವೃದ್ಧಿ, ಮಾನಹಾನಿ, ಸಂಗಾತಿಯೊಂದಿಗೆ ಘರ್ಷಣೆ.

ವೃಶ್ಚಿಕ ರಾಶಿ: 
ಮಕ್ಕಳ ವಿಚಾರವಾಗಿ ಗೊಂದಲ, ಹೆದರಿಕೆಯ ವಾತಾವರಣದಿಂದಾಗಿ ಆತ್ಮ ವಿಶ್ವಾಸದಲ್ಲಿ ಕೊರತೆ. ಆರೋಗ್ಯದಲ್ಲಿ ಏರುಪೇರು. ವಾಸಸ್ಥಾನದಲ್ಲಿ ಪ್ರಾಣಿಗಳಿಂದ ತೊಂದರೆ.

ಇದನ್ನೂ ಓದಿ- ಉತ್ತರ ಕರ್ನಾಟಕದ ಯುಗಾದಿ ಹಬ್ಬದ ವಿಶೇಷ ತಿಂಡಿ ತಿನಿಸುಗಳು..!

ಧನು ರಾಶಿ: 
ಉದ್ಯಮದಲ್ಲಿ ಅನಿರೀಕ್ಷಿತ ನಷ್ಟ. ಸಹೋದರರೊಂದಿಗೆ ಮನಸ್ಥಾಪ. ಕಳ್ಳತನದ ಭಯ. ಸಣ್ಣ ಶಸ್ತ್ರಚಿಕಿತ್ಸೆ. ಮಕ್ಕಳ ಬಗ್ಗೆ ಅಸಹಜವಾದ ಚಿಂತೆ. 

ಮಕರ ರಾಶಿ:
ಕೊರಗುವ ಮನೋಭಾವ, ಕೆಲಸ ಕಳೆದುಕೊಳ್ಳುವ ಸಾಧ್ಯತೆ. ಮನೆ ಬದಲಾಯಿಸುವ ಸಾಧ್ಯತೆ. ಸಣ್ಣ ಪ್ರಯಾಣಗಳು, ತಾಯಿ ಕಡೆಯವರಿಂದ ತೊಂದರೆ. ಒಂಟಿತನ ಕಾಡಬಹುದು.

ಕುಂಭ ರಾಶಿ: 
ಧನ ಲಾಭ, ಬಂಧು ವರ್ಗದವರಿಂದ ಸಹಾಯ. ವೃತ್ತಿಯಲ್ಲಿ ತೃಪ್ತಿ. ದೊಡ್ಡ ವೇಡಿಕೆಗಳಲ್ಲಿ ಅವಕಾಶ. ಉತ್ತಮ ಭೋಜನ ಕೂಟಗಳಿಗೆ ಆಹ್ವಾನ. ಸಹೋದರರಿಗೆ ಶುಭ ಸುದ್ದಿ. 

ಮೀನ ರಾಶಿ: 
ಹಣಕಾಸಿನ ವ್ಯವಹಾರಗಳಲ್ಲಿ ಯಾಮಾರುವ ಸಾಧ್ಯತೆ. ಪ್ರಭಾವಶಾಲಿ ವ್ಯಕ್ತಿಗಳ ಭೇಟಿ. ಮಾನಹಾನಿಯಾಗುವ ಭಯ. ಆಲಸ್ಯ, ಕಾಲುಗಳಿಗೆ ತೊಂದರೆ. 

- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More