Home> Spiritual
Advertisement

ಇನ್ನು ರಾಜರಂತೆ ಬದುಕುತ್ತಾರೆ ಈ ರಾಶಿಯವರು ! ಹರಿದು ಬರುವ ಸಂಪತ್ತಿಗೆ ಲೆಕ್ಕವೇ ಇಲ್ಲ

4 ರಾಶಿಯವರ ಜೀವನದ ಮೇಲೆ ಶುಕ್ರನ ನೇರ ನಡೆ ತುಂಬಾ ಮಂಗಳಕರ ಪರಿಣಾಮವನ್ನೇ ಬೀರಲಿದೆ. ಈ ರಾಶಿಯ ಜನರಿಗೆ ಶುಕ್ರನು ಬಹಳಷ್ಟು ಪ್ರಯೋಜನಗಳನ್ನು ನೀಡುತ್ತಾನೆ.
 

ಇನ್ನು ರಾಜರಂತೆ ಬದುಕುತ್ತಾರೆ ಈ ರಾಶಿಯವರು  ! ಹರಿದು ಬರುವ ಸಂಪತ್ತಿಗೆ ಲೆಕ್ಕವೇ ಇಲ್ಲ

ಬೆಂಗಳೂರು : ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂಪತ್ತು, ಐಷಾರಾಮಿ, ವೈಭವ ಮತ್ತು ಪ್ರೀತಿಯ ಅಂಶವೆಂದು ಪರಿಗಣಿಸಲಾಗಿದೆ. ಆದ್ದರಿಂದ ಶುಕ್ರನನ್ನು ಮಂಗಳಕರ ಗ್ರಹವೆಂದೇ ಕರೆಯಲಾಗುತ್ತದೆ. ಶುಕ್ರನ ಸಂಚಾರ ಮತ್ತು ನಡೆಯಲ್ಲಿನ ಬದಲಾವಣೆಯು ರಾಶಿಗನುಗುಣವಾಗಿ ಎಲ್ಲಾ ರಾಶಿಯವರ ಜೀವನದ ಮೇಲೆ ಮಂಗಳಕರ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಶುಕ್ರ ಗ್ರಹವು ಸೆಪ್ಟೆಂಬರ್ 4 ರಿಂದ  ನೇರ ನಡೆಗೆ ಮರಳಿದ್ದಾನೆ. ಶುಕ್ರನ ಚಲನೆಯಲ್ಲಿನ ಬದಲಾವಣೆಯು ಎಲ್ಲಾ ರಾಶಿಯವರ ಜೀವನದ ಮೇಲೆ ದೊಡ್ಡ ಪರಿಣಾಮವನ್ನೇ ಬೀರಲಿದೆ.  4 ರಾಶಿಯವರ ಜೀವನದ ಮೇಲೆ ಶುಕ್ರನ ನೇರ ನಡೆ ತುಂಬಾ ಮಂಗಳಕರ ಪರಿಣಾಮವನ್ನೇ ಬೀರಲಿದೆ. ಈ ರಾಶಿಯ ಜನರಿಗೆ ಶುಕ್ರನು ಬಹಳಷ್ಟು ಪ್ರಯೋಜನಗಳನ್ನು ನೀಡುತ್ತಾನೆ.

ಈ ರಾಶಿಯವರನ್ನು ಸುಖದ ಸುಪ್ಪತ್ತಿಯಲ್ಲಿ ಇರಿಸುತ್ತಾನೆ ಶುಕ್ರ : 
ವೃಷಭ ರಾಶಿ : ವೃಷಭ ರಾಶಿಯವರಿಗೆ ಶುಕ್ರನ ನೇರ ನಡೆ ಆರ್ಥಿಕ ಲಾಭವನ್ನು ತರಲಿದೆ. ಈ ಜನರ ಆದಾಯ ಹೆಚ್ಚಾಗುತ್ತದೆ. ಸಾಲದಿಂದ ಮುಕ್ತಿ ಸಿಗಲಿದೆ. ಸಾಕಷ್ಟು ಶಾಪಿಂಗ್ ಮಾಡಬಹುದು. ಜೀವನ ಮಟ್ಟ ಉತ್ತಮವಾಗಿರುತ್ತದೆ. ಈ ಸಮಯವನ್ನು ಪೂರ್ಣವಾಗಿ ಆನಂದಿಸುವಿರಿ. 

ಇದನ್ನೂ ಓದಿ : ಇನ್ನೇನಿದ್ದರೂ ಸುಖದ ಸುಪ್ಪತ್ತಿಗೆಯಲ್ಲೇ ಜೀವನ ಈ ರಾಶಿಯವರದ್ದು: ಒಂದೂವರೆ ವರ್ಷ ಕೈಹಿಡಿದು ನಡೆಸುವಳು ತಾಯಿ ಸೌಭಾಗ್ಯಲಕ್ಷ್ಮೀ

ಮಿಥುನ ರಾಶಿ : ಶುಕ್ರನ ನೇರ ನಡೆ ಮಿಥುನ ರಾಶಿಯವರಿಗೆ ಉತ್ತಮ ಲಾಭವನ್ನು ತರುತ್ತಿದೆ. ಹೆಚ್ಚಿನ ಪ್ರಮಾಣದ ಸಂಪತ್ತು ಪ್ರಾಪ್ತಿಯಾಗುವುದು. ಆಸ್ತಿಯಿಂದ ಲಾಭವಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಹಳೆಯ ಸಮಸ್ಯೆಗಳಿಂದ ಮುಕ್ತಿ ಸಿಗುವುದು. ನಿಮ್ಮ ಶ್ರಮದ ಸಂಪೂರ್ಣ ಲಾಭವನ್ನು ಪಡೆಯುವುದು ಸಾಧ್ಯವಾಗುವುದು. ಪ್ರೇಮ ಜೀವನ, ವೈವಾಹಿಕ ಜೀವನ ಉತ್ತಮವಾಗಿರುತ್ತದೆ. 

ತುಲಾ ರಾಶಿ : ಶುಕ್ರನು ತುಲಾರಾಶಿಯ ಅಧಿಪತಿ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಸಾಲದಿಂದ ಮುಕ್ತಿ ಸಿಗುವುದು. ಯಾವುದೇ ರೀತಿಯ ದೊಡ್ಡ ಆಸೆ ಈಡೇರುವುದು. ಹೊಸ ಕೆಲಸ ಆರಂಭಿಸಬಹುದು. ಕೆಲವು ಪ್ರಮುಖ ಕೆಲಸಗಳಲ್ಲಿ ಯಶಸ್ಸನ್ನು ಪಡೆಯಬಹುದು. ಉದ್ಯೋಗ ಹುಡುಕಾಟ ಪೂರ್ಣಗೊಳ್ಳುತ್ತದೆ. 

ಇದನ್ನೂ ಓದಿ : ದಶಮುಖಿ ರುದ್ರಾಕ್ಷ ಧರಿಸುವುದರಿಂದಾಗುವ ಲಾಭಗಳು ನಿಮಗೆ ಗೊತ್ತೇ?

ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಶುಕ್ರನು ಭಾರೀ ಲಾಭವನ್ನು ನೀಡುತ್ತಾನೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಹೊಸ ಹೊಸ ಮೂಲಗಳಿಂದ ಹಣ ಬರಲಿದೆ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ವ್ಯಾಪಾರ ಬಹಳ ಚೆನ್ನಾಗಿ ನಡೆಯಲಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಹಳೆಯ ಹೂಡಿಕೆಯಿಂದ ಲಾಭವಾಗಲಿದೆ. 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More