Home> Spiritual
Advertisement

Mangala Gochara: ಮುಂದಿನ 45 ದಿನಗಳವರೆ ಈ ರಾಶಿಯವರಿಗೆ ಒಲಿದು ಬರಲಿದೆ ಭಾರೀ ಸುಖ-ಸಂಪತ್ತು

Mangala Gochara: ಮಂಗಳನ ರಾಶಿಚಕ್ರ ಬದಲಾವಣೆಯು ಎಲ್ಲಾ ರಾಶಿಯವಾರ ವೃತ್ತಿ ಬದುಕಿನ ಮೇಲೆ, ಆರ್ಥಿಕ ವಿಷಯದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಇತ್ತೀಚೆಗಷ್ಟೇ ಸಿಂಹ ರಾಶಿಯನ್ನು ಪ್ರವೇಶಿಸಿರುವ ಮಂಗಳನು ಕೆಲವು ರಾಶಿಯವರ ಜೀವನದಲ್ಲಿ ಮಹತ್ವದ ಪರಿಣಾಮವನ್ನು ಬೀರಲಿದ್ದಾನೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...  

Mangala Gochara: ಮುಂದಿನ 45 ದಿನಗಳವರೆ ಈ ರಾಶಿಯವರಿಗೆ ಒಲಿದು ಬರಲಿದೆ ಭಾರೀ ಸುಖ-ಸಂಪತ್ತು

Mangala Rashi Parivartane: ಜ್ಯೋತಿಷ್ಯ ಶಾಸ್ತ್ರದಲ್ಲಿ, ಧೈರ್ಯ-ಶೌರ್ಯ, ಭೂಮಿ, ದಾಂಪತ್ಯಕ್ಕೆ ಮಂಗಳ ಕಾರಕ ಹಾಗೂ ಕಮಾಂಡರ್ ಗ್ರಹ ಎಂದು ಕರೆಯಲ್ಪಡುವ ಮಂಗಳನು ಇತ್ತೀಚೆಗಷ್ಟೇ ರಾಶಿ ಪರಿವರ್ತನೆ ಹೊಂದಿದ್ದಾನೆ. ಜುಲೈ 1, 2023 ರಂದು, ಸಿಂಹ ರಾಶಿಯನ್ನು ಪ್ರವೇಶಿಸಿರುವ ಮಂಗಳನು ಆಗಸ್ಟ್ 18, 2023ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಮಂಗಳನ ಈ ರಾಶಿ ಪರಿವರ್ತನೆಯು ದ್ವಾದಶ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಈ ಸಮಯವನ್ನು ಕೆಲವು ರಾಶಿಯವರ ದೃಷ್ಟಿಯಿಂದ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. 

ವೈದಿಕ ಜ್ಯೋತಿಷ್ಯದ ಪ್ರಕಾರ, ಸಿಂಹ ರಾಶಿಯಲ್ಲಿ ಮಂಗಳನ ಸಂಚಾರವು ನಾಲ್ಕು ರಾಶಿಯವರ ಬದುಕಿನಲ್ಲಿ ಹೊನ್ನ ಮಳೆಯನ್ನೇ ಸುರಿಸಲಿದೆ. ಮುಂದಿನ 45 ದಿನಗಳವರೆಗೆ ಈ ರಾಶಿಯವರ ಬದುಕೇ ಬಂಗಾರ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಮಂಗಳ ರಾಶಿ ಪರಿವರ್ತನೆಯಿಂದಾಗಿ ಇನ್ನೂ ಒಂದೂವರೆ ತಿಂಗಳು ಈ ರಾಶಿಯವರಿಗಿಲ್ಲ ಹಣಕಾಸಿನ ಚಿಂತೆ, ವೃದ್ಧಿಯಾಗಲಿದೆ ಸಂಪತ್ತು:- 
ಮಿಥುನ ರಾಶಿ: 

ಮಂಗಳ ರಾಶಿ ಪರಿವರ್ತನೆಯು ಮಿಥುನ ರಾಶಿಯವರಿಗೆ ಬಹಳಷ್ಟು ಆರ್ಥಿಕ  ಲಾಭಗಳನ್ನು ನೀಡುತ್ತದೆ. ಮಾತ್ರವಲ್ಲ ಈ ಸಮಯದಲ್ಲಿ ನಿಮ್ಮ ಆರೋಗ್ಯವೂ ಉತ್ತಂವಾಗಿರಲಿದೆ. ವ್ಯಾಪಾರ-ವ್ಯವಹಾರ ವೃದ್ಧಿಯಾಗಲಿದ್ದು, ಉದ್ಯೋಗಸ್ಥರಿಗೂ ಶುಭ ವಾರ್ತೆ ದೊರೆಯಲಿದೆ. ದಾಂಪತ್ಯ ಜೀವನದಲ್ಲಿ ಮೂಡಿದ್ದ ವಿರಸ ದೂರವಾಗಲಿದೆ. 

ಇದನ್ನೂ ಓದಿ- Budha Gochara: ಬುಧ ಸಂಚಾರದಿಂದ ಭದ್ರ ರಾಜಯೋಗ, ಈ ರಾಶಿಯವರಿಗೆ ಶ್ರೀಮಂತರಾಗುವ ಯೋಗ

ಸಿಂಹ ರಾಶಿ: 
ಸ್ವ ರಾಶಿಯಲ್ಲಿಯೇ ಮಂಗಳನ ಸಂಚಾರ ಈ ರಾಶಿಯವರ ಧೈರ್ಯ, ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಇದರಿಂದಾಗಿ ವ್ಯಾಪಾರದಲ್ಲಿ ಪ್ರಗತಿ, ಉದ್ಯೋಗದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವ ಅವಕಾಶಗಳಿವೆ. ನಿಮ್ಮ ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದ್ದು, ಮನಃ ಶಾಂತಿ ಲಭಿಸಲಿದೆ. ಪ್ರೇಮಿಗಳಿಗೆ ಮನೆಯವರ ಒಪ್ಪಂದ ಸಿಕ್ಕಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸುಯೋಗವೂ ಇದೆ. 

ತುಲಾ ರಾಶಿ: 
ಮಂಗಳ ರಾಶಿ ಪರಿವರ್ತನೆಯು ತುಲಾ ರಾಶಿಯ ಜನರಿಗೆ ಸಂಪತ್ತಿನ ಹೊಳೆಯನ್ನೇ ಹರಿಸಲಿದೆ.  ಹಣಕಾಸಿನ ಲಾಭದಿಂದಾಗಿ ಆರ್ಥಿಕ ಸಂಕಷ್ಟಗಳು ಬಗೆಹರಿಯಲಿವೆ. ಉದ್ಯೋಗಸ್ಥರಿಗೆ ಸಂಬಳ ಹೆಚ್ಚಾಗಲಿದೆ. ಇದೇ ವೇಳೆ ವ್ಯಾಪಾರಸ್ಥರಿಗೂ ಬಂಪರ್ ಲಾಭವಾಗಲಿದೆ. ಇದಲ್ಲದೆ, ನೀವು ದೀರ್ಘ ಸಮಯದಿಂದ ಅನುಭವಿಸುತ್ತಿದ್ದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. 

ಇದನ್ನೂ ಓದಿ- ಈ ರಾಶಿಯವರ ಐಶಾರಾಮಿ ಬದುಕು ಇನ್ನು ಆರಂಭ! ಹಣದ ಹೊಳೆ ಹರಿಸುವನು ಶುಕ್ರ

ಧನು ರಾಶಿ: 
ಮಂಗಳ ರಾಶಿ ಬದಲಾವನೆಯು ಧನು ರಾಶಿಯವರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಈ ಸಂದರ್ಭದಲ್ಲಿ ವೃತ್ತಿ ಬದುಕಿನಲ್ಲಿ ಉನ್ನತ ಹುದ್ದೆ ಅಲಂಕರಿಸುವ ಯೋಗವಿದೆ. ಮಾತ್ರವಲ್ಲ, ವ್ಯಾಪಾರ-ವ್ಯವಹಾರದಲ್ಲಿಯೂ ನಿರೀಕ್ಷೆಗಿಂದ ಹೆಚ್ಚಿನ ಲಾಭವಾಗಲಿದೆ. ಇದರಿಂದಾಗಿ ಬಂಪರ್ ಹಣಕಾಸಿನ ಹರಿವಿನಿಂದಾಗಿ ಭೂಮಿ, ವಾಹನ ಖರೀದಿ ಯೋಗವೂ ಇದೆ.  

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More