Home> Spiritual
Advertisement

Laxmi Narayan Yog: ವರ್ಷದ ಬಳಿಕ ಈ ನಾಲ್ಕು ರಾಶಿಯವರಿಗೆ ಅದ್ಭುತ ಯೋಗ, ಅದೃಷ್ಟವೇ ಬದಲು

Laxmi Narayan Yog: ವೃಷಭ ರಾಶಿಯಲ್ಲಿ ಬುಧ-ಶುಕ್ರರು ಒಟ್ಟಿಗೆ ಕೂಡಿದ್ದು ಇದರಿಂದಾಗಿ ಅತ್ಯಂತ ಮಂಗಳಕರ ಲಕ್ಷ್ಮೀನಾರಾಯಣ ಯೋಗ ರೂಪುಗೊಂಡಿದೆ. ಇದರ ಪರಿಣಾಮವಾಗಿ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ. 

Laxmi Narayan Yog: ವರ್ಷದ ಬಳಿಕ ಈ ನಾಲ್ಕು ರಾಶಿಯವರಿಗೆ ಅದ್ಭುತ ಯೋಗ, ಅದೃಷ್ಟವೇ ಬದಲು

Mercury Venus Conjunction: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇತ್ತೀಚೆಗಷ್ಟೇ ಮಾತು, ಬುದ್ದಿ, ಸಂವಹನಕಾರಕ ಬುಧನು ವೃಷಭ ರಾಶಿಯ್ಗೆ ಪ್ರವೇಶಿಸಿದ್ದಾನೆ. ಸಂಪತ್ತು, ವೈಭವ,ಐಷಾರಾಮಿ ಜೀವನಕಾರಕನಾದ ಶುಕ್ರನು ಕೂಡ ಇದೇ ರಾಶಿಚಕ್ರ ಚಿಹ್ನೆಯಲ್ಲಿ ಇರುವುದರಿಂದ ವೃಷಭ ರಾಶಿಯಲ್ಲಿ ಬುಧ-ಶುಕ್ರರ ಯುತಿಯಿಂದ ಲಕ್ಷ್ಮೀನಾರಾಯಣ ಯೋಗ ನಿರ್ಮಾಣವಾಗಿದೆ. ವೃಷಭ ರಾಶಿಯಲ್ಲಿ ಶುಕ್ರನ ಪ್ರವೇಶದಿಂದ ಮಾಲವ್ಯ ರಾಜಯೋಗ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ, ವೃಷಭ ರಾಶಿಯಲ್ಲಿ ಸೂರ್ಯನೂ ಇರುವುದರಿಂದ ಬುಧ-ಸೂರ್ಯರ ಸಂಯೋಗದಿಂದ ಬುಧಾದಿತ್ಯ ಯೋಗ ರೂಪುಗೊಂಡಿದೆ. ಹೀಗೆ ವೃಷಭ ರಾಶಿಯಲ್ಲಿ ಹಲವು ಶುಭ ಯೋಗಗಳ ನಿರ್ಮಾಣದಿಂದ ಕೆಲವು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ. 

ವೃಷಭ ರಾಶಿಯಲ್ಲಿ ಮೂರು ರಾಜ ಯೋಗಗಳ ನಿರ್ಮಾಣ: 

ವೃಷಭ ರಾಶಿಯಲ್ಲಿ ನಿರ್ಮಾಣವಾಗಿರುವ ಮಾಲವ್ಯ ರಾಜಯೋಗ (Malavya Rajyog), ಬುಧಾದಿತ್ಯ ರಾಜಯೋಗ (Budhaditya Rajyog) ಮತ್ತು ಲಕ್ಷ್ಮೀ ನಾರಾಯಣ ಯೋಗಗಳು (Laxmi Narayan Yog)  12ನೇ ಜೂನ್ 2024 ರವರೆಗೆ ಇರಲಿದ್ದು, ಈ ಸಮಯದಲ್ಲಿ ಕೆಲವು ರಾಶಿಯವರು ಜೀವನದಲ್ಲಿ ಭಾರೀ ಸುಖ-ಸಂಪತ್ತು, ಕೀರ್ತಿ, ಯಶಸ್ಸನ್ನು ಗಳಿಸುತ್ತಾರೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಮೇಷ ರಾಶಿ: 
ವೃಷಭ ರಾಶಿಯಲ್ಲಿ ನಿರ್ಮಾಣವಾಗಿರುವ ಮೂರು ಶುಭ ಯೋಗಗಳು (Shubh Yog) ಮೇಷ ರಾಶಿಯವರಿಗೆ ಸಂಪತ್ತನ್ನು ಹೆಚ್ಚಿಸುವುವರ ಜೊತೆಗೆ ಅಪಾರ ಕೀರ್ತಿಯನ್ನು, ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಕೂಡ ನೀಡಲಿದೆ. ಮಕ್ಕಳ ಕಡೆಯಿಂದ ಶುಭ ವಾರ್ತೆಯನ್ನು ನಿರೀಕ್ಷಿಸಬಹುದು. 

ಇದನ್ನೂ ಓದಿ- ಶನಿ ವಕ್ರಿ ಯಿಂದ ಈ 3 ರಾಶಿಗಳಿಗೆ ಅದೃಷ್ಟ.. ಧನ ಸಂಪತ್ತಿನ ಸುರಿಮಳೆ, ಪ್ರತಿ ಕೆಲಸದಲ್ಲೂ ಜಯ, ಐಷಾರಾಮಿ ಜೀವನ.. ಬಡವನೂ ರಾಜನಾಗುವ ಕಾಲ !

ವೃಷಭ ರಾಶಿ : 
ಸ್ವ ರಾಶಿಯಲ್ಲಿ ನಿರ್ಮಾಣವಾಗಿರುವ ಮಾಲವ್ಯ ರಾಜಯೋಗ, ಬುಧಾದಿತ್ಯ ರಾಜಯೋಗ ಮತ್ತು ಲಕ್ಷ್ಮೀ ನಾರಾಯಣ ಯೋಗಗಳು  ಈ ರಾಶಿಯವರಿಗೆ ಬಂಪರ್ ಲಾಭವನ್ನು ನೀಡಲಿದ್ದು, ನಿಮ್ಮ ಬಹುದಿನಗಳ ಕನಸುಗಳು ನನಸು ಮಾಡಲಿವೆ. ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದ್ದು, ವ್ಯಾಪಾರ-ವ್ಯವಹಾರ ಮಾಡುವವರಿಗೆ ಸಂಪತ್ತು ವೃದ್ಧಿಯಾಗಲಿದೆ. 

ತುಲಾ ರಾಶಿ : 
ಈ ಮೂರು ರಾಜಯೋಗಗಳು ತುಲಾ ರಾಶಿಯ ಜನರಿಗೆ ವರದಾನವಿದ್ದಂತೆ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಆದಾಯದ ಮೂಲಗಳು ವೃದ್ಧಿಯಾಗಲಿದೆ. ಹೂಡಿಕೆಯಿಂದ ಲಾಭವನ್ನು ನಿರೀಕ್ಷಿಸಬಹುದು. 

ಇದನ್ನೂ ಓದಿ- Significance of Jupiter: ಗುರು ಗ್ರಹದ ಅನುಗ್ರಹಕ್ಕಾಗಿ ಯಾವ ಮಂತ್ರ ಪಠಿಸಬೇಕು..?

ವೃಶ್ಚಿಕ ರಾಶಿ: 
ಲಕ್ಷ್ಮಿನಾರಾಯಣ ಯೋಗವು ವೃಶ್ಚಿಕ ರಾಶಿಯ ಜನರಿಗೆ ಉದ್ಯೋಗದಲ್ಲಿ ಯಶಸ್ಸಿನ ಜೊತೆಗೆ ಬಂಪರ್ ಧನಲಾಭವನ್ನು ಕೂಡ ನೀಡಲಿದೆ. ರಾಜಕಾರಣಿಗಳಿಗೆ ಸಮಯ ಅತ್ಯುತ್ತಮವಾಗಿದೆ. ನಿರುದ್ಯೋಗಿಗಳಿಗೆ ನಿಮ್ಮ ನೆಚ್ಚಿನ ಉದ್ಯೋಗ ದೊರೆಯುವ ಸಾಧ್ಯತೆ ಇದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More