Netra Jadhav: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಭಾರೀ ಜನಮೆಚ್ಚುಗೆ ಪಡೆದಿದೆ. ಅದರಲ್ಲೂ ಈ ಧಾರವಾಹಿ...
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಭಾರೀ ಜನಮೆಚ್ಚುಗೆ ಪಡೆದಿದೆ. ಅದರಲ್ಲೂ ಈ ಧಾರವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಬಣ್ಣಹಚ್ಚಿದ್ದ ಶಾರ್ವರಿ ಎಲ್ಲೆಡೆ ಮನೆ ಮಾತಾಗಿದ್ದರು.
ಆದರೆ ಇದೀಗ ಶಾರ್ವರಿ ಪಾತ್ರಧಾರಿ ನೇತ್ರಾ ಜಾಧವ್ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಿಂದ ಹೊರಬಂದಿದ್ದಾರೆ.
ಅಂದಹಾಗೆ ಯಾವ ಕಾರಣಕ್ಕೆ ನೇತ್ರಾ ಅವರು ಸೀರಿಯಲ್ ಬಿಟ್ಟು ಹೊರಬಂದಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಹೊಸ ಆಫರ್ ಸಿಕ್ಕಿದೆಯೇನೋ ಅಥವಾ ವೈಯಕ್ತಿಕ ಕಾರಣಗಳಿಂದ ಹೊರಗಡೆ ಬಂದಿರಬಹುದು ಎಂದು ಕೆಲ ಮೂಲಗಳು ಮಾಹಿತಿ ನೀಡಿವೆ.
ಶ್ರೀರಸ್ತು ಶುಭಮಸ್ತು ಧಾರಾವಾಹಿ ಪ್ರಾರಂಭವಾದಾಗಿನಿಂದ ನೇತ್ರಾ ಅವರೇ ಶಾರ್ವರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ನೇತ್ರಾ ಜಾಧವ್ ಪಾತ್ರಕ್ಕೆ ನಟಿ ಸ್ವಪ್ನಾ ದೀಕ್ಷಿತ್ ಜೀವ ತುಂಬುತ್ತಿದ್ದಾರೆ.
ಅಕ್ಟೋಬರ್ 2022ರಿಂದ ಈ ಸೀರಿಯಲ್ ಪ್ರಸಾರ ಆಗುತ್ತಲಿದೆ. ಸುದೇಶ್ ಕೆ ರಾವ್ ನಿರ್ದೇಶನದ ಈ ಧಾರಾವಾಹಿಯಲ್ಲಿ ನಟಿ ಸುಧಾರಾಣಿ, ಅಜಿತ್ ಹಂದೆ, ಲಾವಣ್ಯಾ ಭಾರದ್ವಾಜ್ ಮುಂತಾದವರು ನಟಿಸುತ್ತಿದ್ದಾರೆ.