PHOTOS

Vastu Tips: ಬಡತನವನ್ನು ತಪ್ಪಿಸಲು ಮನೆಯ ಈ ದಿಕ್ಕಿನಿಂದ ತಕ್ಷಣವೇ ಈ ಗಿಡ ತೆಗೆದುಹಾಕಿ

                           

...
Advertisement
1/6
ಈ ದಿಕ್ಕಿನಲ್ಲಿ ಮಂಗಳಕರ ಗಿಡ ನೆಡುವುದು ಶುಭವಲ್ಲ
ಈ ದಿಕ್ಕಿನಲ್ಲಿ ಮಂಗಳಕರ ಗಿಡ ನೆಡುವುದು ಶುಭವಲ್ಲ

ಈ ದಿಕ್ಕಿನಲ್ಲಿ ಮಂಗಳಕರ ಗಿಡ ನೆಡುವುದು ಶುಭವಲ್ಲ : ಮನೆಯ ದಕ್ಷಿಣ ದಿಕ್ಕನ್ನು ಪೂರ್ವಜರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ದಿಕ್ಕಿಗೆ ಮಂಗಳಕರ ಗಿಡಗಳನ್ನು ನೆಡುವುದು ಒಳ್ಳೆಯದಲ್ಲ. ವಿಶೇಷವಾಗಿ ಅಂತಹ ಸಸ್ಯಗಳನ್ನು ಪೂಜ್ಯವೆಂದು ಪರಿಗಣಿಸಲಾಗುತ್ತದೆ. ಇಲ್ಲದಿದ್ದರೆ, ಮನೆಯ ಸಂತೋಷ ಮತ್ತು ಶಾಂತಿ ಕೆಡುತ್ತದೆ ಎಂದು ಹೇಳಲಾಗುತ್ತದೆ.

2/6
ತುಳಸಿಯನ್ನು ದಕ್ಷಿಣ ದಿಕ್ಕಿನಲ್ಲಿ ನೆಟ್ಟರೆ ಅಶುಭ
ತುಳಸಿಯನ್ನು ದಕ್ಷಿಣ ದಿಕ್ಕಿನಲ್ಲಿ ನೆಟ್ಟರೆ ಅಶುಭ

ತುಳಸಿಯನ್ನು ದಕ್ಷಿಣ ದಿಕ್ಕಿನಲ್ಲಿ ನೆಟ್ಟರೆ ಅಶುಭ : ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಅದನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಟ್ಟರೆ ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಪೂರ್ವಜರ ದಿಕ್ಕಿನಲ್ಲಿ ಪೂಜ್ಯ ಸಸ್ಯವನ್ನು ನೆಡುವುದು ಜೀವನದಲ್ಲಿ ಅನೇಕ ದುಃಖಗಳನ್ನು ಆಹ್ವಾನಿಸುತ್ತದೆ ಎಂದು ಹೇಳಲಾಗುತ್ತದೆ.

3/6
ಮನಿ ಪ್ಲಾಂಟ್ ಈ ದಿಕ್ಕಿನಲ್ಲಿದ್ದರೆ ಧನಹಾನಿ
ಮನಿ ಪ್ಲಾಂಟ್ ಈ ದಿಕ್ಕಿನಲ್ಲಿದ್ದರೆ ಧನಹಾನಿ

ಮನಿ ಪ್ಲಾಂಟ್ ಈ ದಿಕ್ಕಿನಲ್ಲಿದ್ದರೆ ಧನಹಾನಿ :  ಆರ್ಥಿಕ ಸ್ಥಿತಿಯ ದೃಷ್ಟಿಯಿಂದ ಮನಿ ಪ್ಲಾಂಟ್ ಅನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಸರಿಯಾದ ರೀತಿಯಲ್ಲಿ ಈ ಗಿಡವನ್ನು ನೆಡುವುದರಿಂದ ಜೀವನದಲ್ಲಿ ಬಹಳಷ್ಟು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಆದರೆ ಮನೆಯ ದಕ್ಷಿಣ ದಿಕ್ಕಿಗೆ ಹಾಕಿದರೆ ಧನಹಾನಿ ಉಂಟಾಗುತ್ತದೆ. 

4/6
ಕ್ರಾಸ್ಸುಲಾ ಸಸ್ಯ ಈ ದಿಕ್ಕಿನಲ್ಲಿದ್ದರೆ ಶುಭ
ಕ್ರಾಸ್ಸುಲಾ ಸಸ್ಯ ಈ ದಿಕ್ಕಿನಲ್ಲಿದ್ದರೆ ಶುಭ

ಕ್ರಾಸ್ಸುಲಾ ಸಸ್ಯ ಈ ದಿಕ್ಕಿನಲ್ಲಿದ್ದರೆ ಶುಭ : ಕ್ರಾಸ್ಸುಲಾ ಸಸ್ಯವು ಮ್ಯಾಗ್ನೆಟ್ನಂತೆ ಹಣವನ್ನು ಆಕರ್ಷಿಸುತ್ತದೆ. ನೀವು ಶ್ರೀಮಂತರಾಗಲು ಬಯಸಿದರೆ, ಮನೆಯಲ್ಲಿ ಕ್ರಾಸ್ಸುಲಾ ಸಸ್ಯವನ್ನು ನೆಡುವುದು ಅದ್ಭುತ ಫಲಿತಾಂಶಗಳನ್ನು ನೀಡುತ್ತದೆ. ಆದರೆ ಮನೆಯ ದಕ್ಷಿಣ ದಿಕ್ಕಿನಲ್ಲಿ ಅದನ್ನು ನೆಡಬೇಡಿ. ಇದನ್ನು ಉತ್ತರ ಅಥವಾ ಈಶಾನ್ಯದಲ್ಲಿ ಇಡುವುದು ಶುಭ. 

5/6
ವಾಸ್ತುದೋಷ ನಿವಾರಣೆಗೆ ಮನೆಯ ಈ ದಿಕ್ಕಿನಲ್ಲಿರಲಿ ಶಮಿ ಸಸ್ಯ
ವಾಸ್ತುದೋಷ ನಿವಾರಣೆಗೆ ಮನೆಯ ಈ ದಿಕ್ಕಿನಲ್ಲಿರಲಿ ಶಮಿ ಸಸ್ಯ

ವಾಸ್ತುದೋಷ ನಿವಾರಣೆಗೆ ಮನೆಯ ಈ ದಿಕ್ಕಿನಲ್ಲಿರಲಿ ಶಮಿ ಸಸ್ಯ: ಶಮಿ ಸಸ್ಯವು ಶನಿ ದೇವನಿಗೆ ಸಂಬಂಧಿಸಿದೆ. ಈ ಸಸ್ಯವನ್ನು ಮನೆಯ ಪೂರ್ವ ಅಥವಾ ಈಶಾನ್ಯದಲ್ಲಿ ನೆಟ್ಟರೆ, ಇದು ಅನೇಕ ವಾಸ್ತು ದೋಷಗಳನ್ನು ನಿವಾರಿಸುತ್ತದೆ, ಆದರೆ ದಕ್ಷಿಣ ದಿಕ್ಕಿನಲ್ಲಿ ಇದನ್ನು ನೆಡುವುದರಿಂದ ವಾಸ್ತು ದೋಷಗಳು ಉಂಟಾಗುತ್ತವೆ. ಮನೆಯಲ್ಲಿ ಶನಿ ಗಿಡವನ್ನು ನೆಟ್ಟರೆ ಶನಿದೇವನ ಕೋಪ ಹೋಗಲಾಡಿಸಲು ತುಂಬಾ ಒಳ್ಳೆಯದು. 

6/6
ಬಾಳೆಗಿಡವನ್ನು ಈ ದಿಕ್ಕಿನಲ್ಲಿ ನೆಡುವುದನ್ನು ತಪ್ಪಿಸಿ
ಬಾಳೆಗಿಡವನ್ನು ಈ ದಿಕ್ಕಿನಲ್ಲಿ ನೆಡುವುದನ್ನು ತಪ್ಪಿಸಿ

ಬಾಳೆಗಿಡವನ್ನು ಈ ದಿಕ್ಕಿನಲ್ಲಿ ನೆಡುವುದನ್ನು ತಪ್ಪಿಸಿ : ಬಾಳೆ ಮರ ಮತ್ತು ಸಸ್ಯವು ವಿಷ್ಣುವಿಗೆ ಸಂಬಂಧಿಸಿದೆ. ಇದನ್ನು ಪೂಜಿಸುವುದರಿಂದ ಭಗವಾನ್ ವಿಷ್ಣುವಿನ ಆಶೀರ್ವಾದ ದೊರೆಯುತ್ತದೆ, ಜೊತೆಗೆ ಜಾತಕದಲ್ಲಿ ಗುರು ಗ್ರಹವು ಬಲಗೊಳ್ಳುತ್ತದೆ. ಗುರು ಗ್ರಹವು ಅದೃಷ್ಟದ ಅಂಶವಾಗಿದೆ. ಈ ಮಂಗಳಕರವಾದ ಗಿಡವನ್ನು ಕೂಡ ದಕ್ಷಿಣ ದಿಕ್ಕಿನಲ್ಲಿ ನೆಡುವುದು ಒಳ್ಳೆಯದಲ್ಲ. ಇದನ್ನು ಈಶಾನ್ಯ ದಿಕ್ಕಿನಲ್ಲಿ ಇಡುವುದು ಅತ್ಯಂತ ಮಂಗಳಕರ. ಈ ದಿಕ್ಕಿನಲ್ಲಿ ಬಾಲೆ ಗಿಡವನ್ನು ನೆಟ್ಟರೆ ವಿಷ್ಣು ಮತ್ತು ಲಕ್ಷ್ಮಿಯ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More