PHOTOS

Vastu Tips: ತುಳಸಿಯೊಂದಿಗೆ ಈ ಗಿಡಗಳನ್ನು ನೆಟ್ಟರೆ ಪ್ರತಿಯೊಂದು ಸಮಸ್ಯೆಗೂ ಪರಿಹಾರ ದೊರೆಯುತ್ತದೆ!

Vastu Tips for House: ಧಾರ್ಮಿಕ ನಂಬಿಕೆಗಳ ಪ್ರಕಾರ ಕಪ್ಪು ಧಾತುರಾವು ಭಗವಾನ್‌ ಶಿವನ ವಾಸಸ್ಥಾನವಾಗಿದೆ. ಈ ಕಾರಣಕ್ಕಾಗಿ ಮನೆಯಲ್ಲಿ ಕ...

Advertisement
1/5
ತುಳಸಿ ಗಿಡ
ತುಳಸಿ ಗಿಡ

ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ತುಳಸಿ ಗಿಡವು ಅತ್ಯಂತ ಪವಿತ್ರ ಮತ್ತು ಪೂಜನೀಯವಾಗಿದೆ. ಈ ಸಸ್ಯವು ಬಹುತೇಕ ಎಲ್ಲಾ ಹಿಂದೂ ಮನೆಗಳಲ್ಲಿ ನೆಡಲಾಗುತ್ತದೆ. ತಾಯಿ ಲಕ್ಷ್ಮಿದೇವಿ ತುಳಸಿ ಗಿಡದಲ್ಲಿ ನೆಲೆಸಿದ್ದಾಳೆಂದು ನಂಬಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಬಳಿ ಈ ಕೆಲವು ಗಿಡಗಳನ್ನು ನೆಡುವುದರಿಂದ ಜೀವನದಲ್ಲಿ ಅನೇಕ ಪ್ರಯೋಜನಗಳು ದೊರೆಯುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡದ ಬಳಿ ಯಾವ ಗಿಡಗಳನ್ನು ನೆಡಬಹುದು ಎಂದು ತಿಳಿಯಿರಿ. 

2/5
ಕಪ್ಪು ಧಾತುರಾ
ಕಪ್ಪು ಧಾತುರಾ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಳಸಿ ಗಿಡದ ಬಳಿ ಕಪ್ಪು ಧಾತುರಾವನ್ನು ನೆಟ್ಟರೆ ಶುಭ ಫಲ ಸಿಗುತ್ತದೆ. ಕಪ್ಪು ಧಾತುರಾ ಶಿವನಿಗೆ ತುಂಬಾ ಪ್ರಿಯ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶಿವನು ಕಪ್ಪು ಧಾತುರಾದಲ್ಲಿ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಮನೆಯಲ್ಲಿ ಕಪ್ಪು ಧಾತುರಾವನ್ನು ನೆಡುವುದರಿಂದ ಶಿವನ ವಿಶೇಷ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ ಇದನ್ನು ಮನೆಯಲ್ಲಿ ನೆಡುವುದರಿಂದ ವೈವಾಹಿಕ ಸಂಬಂಧಗಳು ಗಟ್ಟಿಯಾಗುತ್ತವೆ. ಅದೇ ರೀತಿ ಕೆಲಸದ ಸ್ಥಳದಲ್ಲಿ ಲಾಭ ಮತ್ತು ಪ್ರಗತಿಯ ಸಾಧ್ಯತೆಗಳಿರುತ್ತವೆ. 

3/5
ಎಕ್ಕದ ಗಿಡ
ಎಕ್ಕದ ಗಿಡ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಕ್ಕದ ಗಿಡವನ್ನು ಶಿವನಿಗೆ ಅರ್ಪಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಎಕ್ಕದ ಗಿಡವನ್ನು ನೆಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಅದೇ ರೀತಿ ತುಳಸಿ ಗಿಡವನ್ನು ನೆಟ್ಟರೆ ಶಿವನ ಜೊತೆಗೆ ತಾಯಿ ಲಕ್ಷ್ಮಿದೇವಿಯ ಆಶೀರ್ವಾದವೂ ಸಿಗುತ್ತದೆ. ಮನೆಯಲ್ಲಿ ಎಕ್ಕದ ಗಿಡವನ್ನು ನೆಟ್ಟರೆ ಶುಭ ಫಲಗಳು ಸಿಗುತ್ತವೆ ಮತ್ತು ಸಾಧಕನಿಗೆ ಅದರಿಂದ ಬಹುಮುಖ ಲಾಭಗಳು ಸಿಗುತ್ತವೆ. ಇದನ್ನು ಮನೆಯ ಅಂಗಳದಲ್ಲಿ ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ ಮತ್ತು ತುಳಸಿ ಗಿಡದ ಬಳಿ ನೆಟ್ಟರೆ ಲಾಭದಾಯಕವೆಂದು ಪರಿಗಣಿಸಲಾಗಿದೆ. ಇದರೊಂದಿಗೆ ನೀವು ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. 

4/5
ಪಿತೃದೋಷ
ಪಿತೃದೋಷ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ನೀವು ಪಿತೃದೋಷದಿಂದ ಬಳಲುತ್ತಿದ್ದರೆ, ಕಪ್ಪು ಧಾತುರಾ ನಿಮಗೆ ಶೀಘ್ರದಲ್ಲೇ ಪರಿಹಾರವನ್ನು ನೀಡುತ್ತವೆ. ಇದಕ್ಕಾಗಿ ಪ್ರತಿದಿನ ಎದ್ದು ಸ್ನಾನ ಮಾಡಿ ಎಕ್ಕ ಮತ್ತು ಕಪ್ಪು ಧಾತುರಾ ಗಿಡಗಳಿಗೆ ನೀರು ಬೆರೆಸಿದ ಹಾಲನ್ನು ಅರ್ಪಿಸಿ. ಇದರೊಂದಿಗೆ ಮನೆಯಲ್ಲಿ ಕಪ್ಪು ಧಾತುರಾ ಗಿಡವನ್ನು ನೆಟ್ಟು ನಿಯಮಿತವಾಗಿ ಪೂಜಿಸುವುದರಿಂದ ಜಾತಕದಲ್ಲಿರುವ ಪಿತೃ ದೋಷದಿಂದ ಪರಿಹಾರವನ್ನು ನೀಡುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ನಂಬಲಾಗಿದೆ. 

5/5
ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ
ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ

ಮನೆಯಲ್ಲಿರುವ ತುಳಸಿ ಗಿಡದ ಬಳಿ ಕಪ್ಪು ಧಾತುರಾ ಮತ್ತು ಎಕ್ಕದ ಗಿಡವನ್ನು ನೆಟ್ಟರೆ ತಾಯಿ ಲಕ್ಷ್ಮಿದೇವಿ ಮತ್ತು ಶಿವನ ಆಶೀರ್ವಾದ ಸಿಗುತ್ತದೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿದೇವಿಯು ತುಳಸಿ ಗಿಡದಲ್ಲಿ ನೆಲೆಸಿದ್ದಾಳೆಂದು ನಂಬಲಾಗಿದೆ. ಅದೇ ರೀತಿ ಶಿವನು ಕಪ್ಪು ಧಾತುರಾ ಮತ್ತು ಎಕ್ಕದ ಸಸ್ಯಗಳಲ್ಲಿ ನೆಲೆಸಿದ್ದಾನೆಂದು ಹೇಳಲಾಗಿದೆ. ತುಳಸಿಯನ್ನು ನಿಯಮಿತವಾಗಿ ಪೂಜಿಸುವುದರಿಂದ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವುದಿಲ್ಲವೆಂದು ಹೇಳಲಾಗಿದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಇದನ್ನು ದೃಢಪಡಿಸುವುದಿಲ್ಲ.)





Read More