ದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ 18, 2023 ರಂದು ಭೂಮಿ ಪುತ್ರ ಮತ್ತು ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದರ...
ಆಗಸ್ಟ್ 18, 2023 ರಂದು ಮಂಗಳ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಇದು ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ಆದರೆ, 3 ರಾಶಿಗಳ ಜಾತಕದವರಿಗೆ ಆಸ್ತಿ-ಧನಲಾಭ ಉಂಟಾಗುವ ಸಾಧ್ಯತೆ ಇದೆ. ಬನ್ನಿ ಆ ಮೂರು ರಾಶಿಗಳು ಯಾವುವು ತಿಳಿದುಕೊಳ್ಳೋಣ (Astrology News In Kannada),
ವೃಶ್ಚಿಕ ರಾಶಿ- ವೃಶ್ಚಿಕ ಜಾತಕದವರ ಪಾಲಿಗೆ ಮಂಗಳನ ಕನ್ಯಾ ಗೋಚರ ಅತ್ಯಂತ ಶುಭ ಫಲದಾಯಿ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಆದಾಯ ಭಾವದಲ್ಲಿ ಈ ಗೋಚರ ನೆರವೇರುತ್ತಿದೆ. ಸಾಮಾನ್ಯವಾಗಿ ನಿಮ್ಮ ಜಾತಕದ ಲಗ್ನ ಹಾಗೂ ಶಷ್ಟಮ ಭಾವಕ್ಕೆ ಮಂಗಳ ಅಧಿಪತಿಯಾಗಿರುವ ಕಾರಣ. ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸುವ ಸಾಧ್ಯತೆ ಇದೆ. ಇದಲ್ಲದೆ ನಿಮಗಾಗಿ ಆದಾಯದ ಹೊಸ ಮೂಲಗಳು ಕೂಡ ಸೃಷ್ಟಿಯಾಗಲಿವೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸದಲ್ಲಿ ಅಪಾರ ಹೆಚ್ಚಳ ಉಂಟಾಗಲಿದೆ. ಕೋರ್ಟ್ ಕಚೇರಿ ವಿಷಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಹಳೆ ಹೂಡಿಕೆಯಿಂದ ನಿಮಗೆ ಲಾಭ ಉಂಟಾಗಲಿದೆ . ಆಸ್ತಿ ಖರೀದಿ ಮಾರಾಟದಿಂದ ನಿಮಗೆ ಲಾಭ ಉಂಟಾಗುವ ಎಲ್ಲಾ ಸಾಧ್ಯತೆಗಳಿವೆ.
ಸಿಂಹ ರಾಶಿ- ಮಂಗಳನ ಈ ಕನ್ಯಾ ಗೋಚರ ಸಿಂಹ ರಾಶಿಯ ಜಾತಕದವರ ಪಾಲಿಗೆ ಅಂತ್ಯಂತ ಅನುಕೂಲಕರ ಸಿದ್ಧ ಸಾಬೀತಾಗಲಿದೆ. ನಿಮ್ಮ ಗೋಚರ ಜಾತಕದ ಧನಭಾವದಲ್ಲಿ ಮಂಗಳನ ಈ ಗೋಚರ ಸಂಭವಿಸುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ಬಲವಾಗಿರಲಿದೆ. ಆಕಸ್ಮಿಕ ಧನಲಾಭದ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ. ದೀರ್ಘಕಾಲದಿಂದ ನಿಂತುಹೋದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಇದರಿಂದ ಜನರು ನಿಮ್ಮ ಹತ್ತಿರಕ್ಕೆ ಬರುವರು. ಈ ಅವಧಿಯಲ್ಲಿ ನಿಮಗೆ ನಿಮ್ಮ ಮಾತಿನ ಪ್ರಭಾವ ಹೆಚ್ಚಾಗಿರುವುದು ಕಂಡುಬರಲಿದೆ. ಮಾಧ್ಯಮ, ಮಾರ್ಕೆಟಿಂಗ್, ಶಿಕ್ಷಣ ಹಾಗೂ ಸಂವಹನ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ಸಾಕಷ್ಟು ಅದ್ಭುತವಾಗಿದೆ.
ಮಕರ ರಾಶಿ- ಮಂಗಳನ ಕನ್ಯಾ ರಾಶಿ ಪ್ರವೇಶ ಮಕರ ಜಾತಕದವರಿಗೆ ಸಾಕಷ್ಟು ಲಾಭವನ್ನು ತಂದುಕೊಡಲಿದೆ. ನಿಮ್ಮ ಗೋಚರ ಜಾತಕದಲ್ಲಿ ಮಂಗಳ ಈ ಅವಧಿಯಲ್ಲಿ ನವಮೇಶನಾಗಿರಲಿದ್ದಾನೆ. ಹಾಗೆ ನೋಡಿದರೆ ನಿಮ್ಮ ಜಾತಕದ ಚತುರ್ಥ ಹಾಗೂ ಆದಾಯ ಭಾವಕ್ಕೆ ಮಂಗಳ ಅಧಿಪತಿಯಾಯಿರುವ ಕಾರಣ, ಈ ಸಮಯದಲ್ಲಿ ವಾಹನ-ಆಸ್ತಿ ಖರೀದಿಗೆ ನೀವು ಮನಸ್ಸನ್ನು ಮಾಡಬಹುದು. ಇದಲ್ಲದೆ ಈ ಅವಧಿಯಲ್ಲಿ ನಿಮ್ಮ ಆದಾಯವೂ ಕೂಡ ದುಪ್ಪಟ್ಟಾಗಲಿದೆ. ಅಂದರೆ, ಹಲವು ಮೂಲಗಳಿಂದ ನೀವು ಹಣವನ್ನು ಗಳಿಸುವಲ್ಲಿ ಯಶಸ್ವಿಯಾಗುವಿರಿ.. ಇನ್ನೊಂದೆಡೆ ಈ ಅವಧಿಯಲ್ಲಿ ನೀವು ಎಲ್ಲಾ ರೀತಿಯ ಭೌತಿಕ ಸುಖಗಳನ್ನು ಪ್ರಾಪ್ತಿ ಮಾಡುವಲ್ಲಿ ಯಶಸ್ಸನ್ನು ಪಡೆಯುವಿರಿ. ಅದೃಷ್ಟದ ಬೆಂಬಲ ನಿಮಗೆ ಸಿಗಲಿದ್ದು, ಧಾರ್ಮಿಕ ಕಾರ್ಯಗಳತ್ತ ನಿಮ್ಮ ಒಲವು ಹೆಚ್ಚಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)