Surya Gochar: ಗ್ರಹಗಳ ರಾಜ ಸೂರ್ಯದೇವ ಇಂದು (ಜುಲೈ 16) ಕರ್ಕಾಟಕ ರಾಶಿಗೆ ಸಾಗಲಿದ್ದಾನೆ. ಇದರಿಂದಾಗಿ ಅಶುಭಕರ ಷಡಷ...
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದು (ಜುಲೈ 16) ಗ್ರಹಗಳ ರಾಜ ಸೂರ್ಯದೇವ ಮಿಥುನ ರಾಶಿಯನ್ನು ತೊರೆದು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ.
ಕರ್ಕಾಟಕ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದಾಗಿ ಸೂರ್ಯ ಶನಿಯ ಸಂಯೋಗದಿಂದ ಷಡಷ್ಟಕ ಯೋಗವು ರೂಪುಗೊಳ್ಳುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಷಡಷ್ಟಕ ಯೋಗವನ್ನು ಅತ್ಯಂತ ಅಶುಭ ಯೋಗ ಎಂದು ಹೇಳಲಾಗುತ್ತದೆ.
ಷಡಷ್ಟಕ ಯೋಗದ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಯೋಗವು ಕೆಲವು ರಾಶಿಯ ಜನರಲ್ಲಿ ದುಃಖ, ರೋಗ, ಸಾಲ, ಚಿಂತೆಯನ್ನು ಹೆಚ್ಚಿಸಲಿದೆ ಎನ್ನಲಾಗುತ್ತಿದೆ. ಆ ರಾಶಿಗಳೆಂದರೆ...
ಸ್ವ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದ ಈ ನಿರ್ಮಾಣವಾಗಿರುವ ಷಡಷ್ಟಕ ಯೋಗವು ಈ ಜನರಿಗೆ ಕೆಲಸದಲ್ಲಿ ಒತ್ತಡವನ್ನು ಹೆಚ್ಚಿಸಲಿದೆ. ಯಾವುದೇ ರೀತಿಯ ಆತುರದ ನಿರ್ಧಾರದಿಂದ ಭಾರೀ ನಷ್ಟ ಉಂಟಾಗಬಹುದು. ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು.
ಈ ವೇಳೆ ನಿಮ್ಮ ಚಿಂತೆಗಳು ಹೆಚ್ಚಾಗಬಹುದು. ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವಾಗ ತುಂಬಾ ಚಿಂತನಾಶೀಲರಾಗಿ ಎಲ್ಲಾ ಆಯಾಮಗಳಲ್ಲೂ ಯೋಚಿಸಿ ನಿರ್ಧರಿಸಿ.
ಶತ್ರು ಬಾಧೆ ಹೆಚ್ಚಾಗಬಹುದು. ಈ ಬಗ್ಗೆ ವಿಶೇಷ ಗಮನಹರಿಸಿ. ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸಿ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವ ತಪ್ಪನ್ನು ಮಾಡದಿರಿ. ವಾಹನ ಚಲಾಯಿಸುವ ವೇಳೆ ಎಚ್ಚರಿಕೆ ಅಗತ್ಯ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.