PHOTOS

ಮಣ್ಣು ಉಳಿಸಿ ಅಭಿಯಾನಕ್ಕಾಗಿ ಬೈಕ್‌ನಲ್ಲಿ 30 ಸಾವಿರ ಕಿಮೀ ಪ್ರಯಾಣ ಆರಂಭಿಸಿದ 64 ವರ್ಷ ವಯಸ್ಸಿನ ಸದ್ಗುರುಗಳು!

                             

...
Advertisement
1/5
ಮಣ್ಣು ಉಳಿಸಿ ಅಭಿಯಾನ ಪ್ರಯಾಣಕ್ಕೆ ಹಸಿರು ನಿಶಾನೆ
ಮಣ್ಣು ಉಳಿಸಿ ಅಭಿಯಾನ ಪ್ರಯಾಣಕ್ಕೆ ಹಸಿರು ನಿಶಾನೆ

ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಿಂದ ಸದ್ಗುರುಗಳ 30,000 ಕಿಮೀ ಬೈಕ್ ಪ್ರಯಾಣವನ್ನು ಫ್ಲ್ಯಾಗ್‌ಆಫ್ ಮಾಡಲಾಯಿತು. ಈ ಚಿತ್ರಗಳಲ್ಲಿ ಅವರು BMW K1600 GT ಮೋಟಾರ್ ಸೈಕಲ್ ಓಡಿಸುತ್ತಿರುವುದನ್ನು ಕಾಣಬಹುದು. ಪ್ರಯಾಸಕರ 100 ದಿನಗಳ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಜನರು ಅವರಿಗೆ ಶುಭ ಹಾರೈಸಲು ಜಮಾಯಿಸಿದರು.

2/5
30,000 ಕಿಮೀ ಪ್ರಯಾಣ
30,000 ಕಿಮೀ ಪ್ರಯಾಣ

64 ವರ್ಷದ ಆಧ್ಯಾತ್ಮಿಕ ಗುರು ಈ ವಾರ ಆಮ್‌ಸ್ಟರ್‌ಡ್ಯಾಮ್, ಬರ್ಲಿನ್ ಮತ್ತು ಪ್ರೇಗ್ ತಲುಪಲಿದ್ದಾರೆ. ತಮ್ಮ 100 ದಿನಗಳ ಪ್ರವಾಸದಲ್ಲಿ ಸದ್ಗುರುಗಳು 30,000 ಕಿಮೀ ಪ್ರಯಾಣಿಸಲಿದ್ದಾರೆ ಮತ್ತು ಪ್ರಪಂಚದಾದ್ಯಂತ 27 ದೇಶಗಳನ್ನು ಹಾದು ಹೋಗಲಿದ್ದಾರೆ. ಈ ಸಂದರ್ಭದಲ್ಲಿ ಅವರು ವಿಶ್ವ ನಾಯಕರು, ಮಾಧ್ಯಮಗಳು ಮತ್ತು ತಜ್ಞರನ್ನು ಭೇಟಿ ಮಾಡಿ, ಮಣ್ಣು ಉಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಒತ್ತು ನೀಡುವಂತೆ ಜಾಗೃತಿ ಮೂಡಿಸಲಿದ್ದಾರೆ. 

3/5
75 ದಿನಗಳಲ್ಲಿ ದೆಹಲಿ ತಲುಪಲಿರುವ ಸದ್ಗುರು
75 ದಿನಗಳಲ್ಲಿ ದೆಹಲಿ ತಲುಪಲಿರುವ ಸದ್ಗುರು

ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸಲು ಸದ್ಗುರುಗಳು 75 ದಿನಗಳಲ್ಲಿ ನವದೆಹಲಿಯನ್ನು ತಲುಪುವ ಗುರಿಯನ್ನು ಹೊಂದಿದ್ದಾರೆ. ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಪ್ರಕಾರ, ಭೂಮಿಯ 90% ಕ್ಕಿಂತ ಹೆಚ್ಚು ಮಣ್ಣು 2050 ರ ವೇಳೆಗೆ ಅವನತಿ ಹೊಂದಬಹುದು.

4/5
ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು
ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು

ಯಾತ್ರೆಗೆ ಹೊರಡುವ ಮುನ್ನ ಸದ್ಗುರುಗಳು ಭಾರತೀಯ ಹೈಕಮಿಷನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಈಗ ಕಾರ್ಯನಿರ್ವಹಿಸುವುದು ಬಹಳ ಮುಖ್ಯ. ನಾನು 24 ವರ್ಷಗಳಿಂದ ಈ ಬಗ್ಗೆ ಮಾತನಾಡುತ್ತಿದ್ದೇನೆ, ಆದರೆ ಪ್ರತಿ ದೇಶದಲ್ಲಿ ಸಕಾರಾತ್ಮಕ ನೀತಿ ಇದ್ದಾಗ ಮಾತ್ರ ಪರಿಹಾರವನ್ನು ಕಾಣಬಹುದು ಎಂದಿದ್ದಾರೆ. 

5/5
ಹಿಮಪಾತದಲ್ಲೂ ಪ್ರಯಾಣ
ಹಿಮಪಾತದಲ್ಲೂ ಪ್ರಯಾಣ

ಗಮನಾರ್ಹವಾಗಿ ಯೂರೋಪಿನ ಹಲವೆಡೆ ಇನ್ನೂ ಹಿಮ ಸುರಿಯುತ್ತಿದೆ, ಹೀಗಿದ್ದರೂ ಬೈಕ್ ನಲ್ಲಿ ತಮ್ಮ ಪ್ರಯಾಣ ಮುಂದುವರೆಯಲಿದೆ ಎಂದು ಸದ್ಗುರುಗಳು ತಿಳಿಸಿದ್ದಾರೆ. ಈ ವಯಸ್ಸಿನಲ್ಲಿ ಬೈಕ್ ಓಡಿಸುವುದು ಅಷ್ಟು ಆರಾಮದಾಯಕವಲ್ಲ. ಆದಾಗ್ಯೂ, ನಾನು ಇದನ್ನು ಮಾಡುತ್ತಿದ್ದೇನೆ. ಏಕೆಂದರೆ ಕಳೆದ 20 ವರ್ಷಗಳಲ್ಲಿ 3,00,000 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ನಡೆಯುತ್ತಿದೆ.  'ಮಣ್ಣಿನ ಅಳಿವು' ಇದೀಗ ನಾಗರೀಕತೆಗೆ ಗಂಭೀರ ಸವಾಲಾಗಿದೆ, ಏಕೆಂದರೆ ನಮ್ಮ ಪ್ರಪಂಚವು ತ್ವರಿತವಾದ ಮಣ್ಣಿನ ಅವನತಿಯಿಂದಾಗಿ ಆಹಾರವನ್ನು ಬೆಳೆಯುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ. ನನ್ನ ಮುಖ್ಯ ಕಾಳಜಿಯೆಂದರೆ ಮಣ್ಣನ್ನು ಪುನರುಜ್ಜೀವನಗೊಳಿಸಲು ಮತ್ತು ಇನ್ನಷ್ಟು ಮಣ್ಣಿನ ಅವನತಿಯನ್ನು ತಡೆಯಲು ನೀತಿ-ಚಾಲಿತ ಕ್ರಮವನ್ನು ಪ್ರಾರಂಭಿಸಲು ಸರ್ಕಾರಗಳಿಗೆ ಪ್ರೋತ್ಸಾಹ ನೀಡುವುದಾಗಿದೆ ಎಂದರು.





Read More