ಜನವರಿ 26 ರಂದು, ಅಂದರೆ ನಾಳೆ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಪರೇಡ್ ನಡೆಯಲಿದೆ. ಈ ಪರೇಡ್ನಲ್ಲಿ ಭಾರತೀಯ ಸೇನೆಯ ಶಕ್ತಿಯ ಪ್ರದರ್ಶನವಾಗಲಿದೆ.
...ಭಾರತೀಯ ಸೇನೆಯ ಹೇಳಿಕೆಯ ಪ್ರಕಾರ, ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಗಣರಾಜ್ಯೋತ್ಸವ ಪರೇಡ್ನಲ್ಲಿ ಅರ್ಜುನ್ ಟ್ಯಾಂಕ್, ನಾಗ್ ಮಿಸೈಲ್ ಸಿಸ್ಟಮ್, ಕೆ9 ವಜ್ರ ಮತ್ತು ಆಕಾಶ್ ವೆಪನ್ ಸಿಸ್ಟಮ್ ಅನ್ನು ಪ್ರದರ್ಶಿಸಲಾಗುವುದು. ಈ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ.
DRDO ಪ್ರಕಾರ, ಅರ್ಜುನ್ ಟ್ಯಾಂಕ್ ಅತ್ಯಾಧುನಿಕ ಟ್ಯಾಂಕ್ ಆಗಿದೆ. MBT ಅರ್ಜುನ್ನ ಹನ್ನೆರಡು Mk 1 ಮಾದರಿಗಳನ್ನು ನಿರ್ಮಿಸಲಾಗಿದೆ. ಇದು 120 ಎಂಎಂ ಗನ್ ಅನ್ನು ಹೊಂದಿದ್ದು, ಟ್ಯಾಂಕ್ನಲ್ಲಿ ಬಳಸುವ ರಕ್ಷಾ ಕವಚವನ್ನು ಹೊಡೆದುರುಳಿಸುತ್ತದೆ.
ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ನಾಗ ಮಿಸೈಲ್ ಸಿಸ್ಟಮ್ ಈ ಬಾರಿ ಕರ್ತವ್ಯ ಪಥದಲ್ಲಿ ಸಾಗಲಿದೆ. ಇದರ ವಿಶೇಷತೆಯೆಂದರೆ ಇದನ್ನು BMP 2ಕ್ಯಾರಿಯರ್ ನಲ್ಲಿ ಅಳವಡಿಸಲಾಗಿದೆ. ಇದು ಫೈರ್ ಅಂಡ್ ಫರ್ಗೆಟ್ ಟಾಪ್ ಟೆಕ್ನಿಕ್ ಅನ್ನು ಆಧರಿಸಿದೆ. 4 ಕಿಲೋಮೀಟರ್ ಪರಿದಿಯಲ್ಲಿರುವ ಟ್ಯಾಂಕ್ಗಳನ್ನು ಸ್ಫೋಟಿಸುವುದು ಇದಕ್ಕೆ ಸಾಧ್ಯ.
ಈ ಬಾರಿ ಗಣರಾಜ್ಯೋತ್ಸವ ಪರೇಡ್ನ ಕರ್ತವ್ಯ ಪಥದಲ್ಲಿ ಕೆ9 ವಜ್ರವೂ ರಾರಾಜಿಸಲಿದೆ. K-9 ನ ಫೈರ್ಪವರ್ ಅತ್ಯದ್ಭುತವಾಗಿದೆ. ದಾಳಿಯ ನಂತರ ತಕ್ಷಣವೇ ತನ್ನ ಸ್ಥಳವನ್ನು ಬದಲಾಯಿಸುತ್ತದೆ. ಈ ಕಾರಣಕ್ಕಾಗಿ, ಇದು ಶತ್ರುಗಳ ಪ್ರತೀಕಾರದಿಂದ ತಪ್ಪಿಸಿಕೊಳ್ಳುತ್ತದೆ. ಕೆ-9 ವಜ್ರವು 40 ಮೀಟರ್ ದೂರದಲ್ಲಿದಲ್ಲಿರುವ ಶತ್ರುಗಳನ್ನು ನಾಶಮಾಡುವ ಶಕ್ತಿಯನ್ನು ಹೊಂದಿದೆ.
ಈ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪರೇಡ್ನಲ್ಲಿ ಆಕಾಶ್ ಕ್ಷಿಪಣಿ ವ್ಯವಸ್ಥೆಯು ಕಾಣಿಸಿಕೊಳ್ಳಲಿದೆ. ಇದು ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದೆ. ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ DRDO ಮತ್ತು ಭಾರತ್ ಡೈನಾಮಿಕ್ಸ್ ಇದನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದೆ.