PHOTOS

Photos: ಸಾಧಕರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

   

...
Advertisement
1/5
ಮಹಾಶಯ ಧರ್ಮ ಪಾಲ್ ಗುಲಾಟಿ
ಮಹಾಶಯ ಧರ್ಮ ಪಾಲ್ ಗುಲಾಟಿ

ಭಾರತೀಯ ಆಹಾರ ಉದ್ಯಮದ ಐಕಾನ್, ಎಂಡಿಹೆಚ್ ಮಸಾಲಾ ಕಂಪನಿಯ ಮುಖ್ಯಸ್ಥ ಮಹಾಶಯ ಧರ್ಮ ಪಾಲ್ ಗುಲಾಟಿ ಅವರು ವಾಣಿಜ್ಯ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. (ಪೋಟೋ ಕೃಪೆ: Twitter/@rashtrapatibhvn​)

2/5
ದರ್ಶನ್ ಲಾಲ್ ಜೈನ್
ದರ್ಶನ್ ಲಾಲ್ ಜೈನ್

ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸರಸ್ವತಿ ನಿಧಿ ಶೋಧ್ ಸಂಸ್ಥಾನದ ಅಧ್ಯಕ್ಷರಾದ ದರ್ಶನ್ ಲಾಲ್ ಜೈನ್ ಅವರು ಸಮಾಜದ ಕಲ್ಯಾಣಕ್ಕಾಗಿ ಮಾಡಿರುವ ಅವಿರತ ಸೇವೆಯನ್ನು ಪರಿಗಣಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. (ಪೋಟೋ ಕೃಪೆ: Twitter/@rashtrapatibhvn​)

3/5
ಶಂಕರಲಿಂಗಮ್ ನಂಬಿ ನಾರಾಯಣನ್
ಶಂಕರಲಿಂಗಮ್ ನಂಬಿ ನಾರಾಯಣನ್

ಇಸ್ರೋ ವಿಜ್ಞಾನಿ ಶಂಕರಲಿಂಗಮ್ ನಂಬಿ ನಾರಾಯಣನ್ ಅವರು ವಿಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. (ಪೋಟೋ ಕೃಪೆ: Twitter/@ANI)

4/5
ಬಚೇಂದ್ರಿ ಪಾಲ್
ಬಚೇಂದ್ರಿ ಪಾಲ್

ಹಿಮಾಲಯ ಪರ್ವತವನ್ನು ಏರಿದ ಮೊಟ್ಟ ಮೊದಲ ಮಹಿಳೆ ಹಾಗೂ ಪರ್ವತಾರೋಹಣ ಮತ್ತು ಸಾಹಸ ಕ್ರೀಡೆಗಳಲ್ಲಿ ಮಹಿಳಾ ವಿಭಾಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಬಚೇಂದ್ರಿ ಪಾಲ್ ಅವರಿಗೆ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. (ಪೋಟೋ ಕೃಪೆ: Twitter/@rashtrapatibhvn)

5/5
ವಿಜಯಕೃಷ್ಣನ್ ಶುಂಗ್ಲು
ವಿಜಯಕೃಷ್ಣನ್ ಶುಂಗ್ಲು

ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ ನಿವೃತ್ತ ಐಎಎಸ್ ಅಧಿಕಾರಿ ವಿಜಯಕೃಷ್ಣನ್ ಶುಂಗ್ಲು ಅವರಿಗೆ ನಾಗರಿಕ ಸೇವಾ ವಲಯದಲ್ಲಿ ಮಾಡಿದ ಸಾಧನೆಗಾಗಿ ರಾಷ್ಟ್ರಪತಿ ಕೋವಿಂದ್ ಅವರು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. (ಪೋಟೋ ಕೃಪೆ: Twitter/@rashtrapatibhvn​)





Read More