ಹೆಚ್ಚು ಹೇಳಬೇಕೆಂದಿಲ್ಲ. ಜೀವನದಲ್ಲಿ ಕಡು ಬಡತನವನ್ನು ಕಂಡ ಇವರು ಇಂದು ಎಲ್ಲಾ ರೀತಿಯ ಐಶಾರಾಮ ಅನುಭವಿಸುವ ಮಟ್ಟಿಗ...
ನಿರೂಪಕಿ ಅನುಶ್ರೀ ಯಶಸ್ಸಿನ ಬಗ್ಗೆ ಹೆಚ್ಚು ಹೇಳಬೇಕೆಂದಿಲ್ಲ. ಜೀವನದಲ್ಲಿ ಕಡು ಬಡತನವನ್ನು ಕಂಡ ಇವರು ಇಂದು ಎಲ್ಲಾ ರೀತಿಯ ಐಶಾರಾಮ ಅನುಭವಿಸುವ ಮಟ್ಟಿಗೆ ಬೆಳೆದು ನಿಂತಿದ್ದಾರೆ.
ತನ್ನ ಪ್ರತಿಭೆ, ಪರಿಶ್ರಮದ ಮೂಲಕ ಇಂದು ರಾಜ್ಯದ ನಂಬರ್ ಒನ್ ನಿರೂಪಕಿಯ ಪಟ್ಟಕ್ಕೆ ಏರಿದ್ದಾರೆ.
ಅನುಶ್ರೀಗೆ ತನ್ನ ತಾಯಿಯೇ ಎಲ್ಲಾ. ಯಾವ ಸಭೆ ಸಮಾರಂಭವೇ ಇರಲಿ ಅವರು ತನ್ನ ತಾಯಿ ಬಗ್ಗೆ ಒಂದೆರಡು ಮಾತು ಆಡಿಯೇ ಆಡುತ್ತಾರೆ. ಆದರೆ, ತಾಯಿಯಂತೆ ಮುಖ್ಯವಾದ ಮತ್ತೊಬ್ಬ ವ್ಯಕ್ತಿ ಇವರ ಬದುಕಿನಲ್ಲಿದ್ದಾರೆ.
ತನ್ನ ವೃತ್ತಿ ಬದುಕಿನಲ್ಲಿ ಅನುಶ್ರೀ ಇಷ್ಟು ಎತ್ತರಕ್ಕೆ ಬೆಳೆಯುವುದಕ್ಕೆ ಅವರೂ ಕಾರಣವಂತೆ. ತಾನು ಬೆಂಗಳೂರಿನಲ್ಲಿದ್ದಾಗ ತಾಯಿಯನ್ನು ಕಣ್ಣ ರೆಪ್ಪೆಯಂತೆ ನೋಡಿಕೊಂಡ ಕಾರಣ,ಕೆಲಸದತ್ತ ಸಂಪೂರ್ಣ ಗಮನ ಹರಿಸುವುದು ಸಾಧ್ಯವಾಯಿತು ಎಂದು ಅನುಶ್ರೀಯೇ ಹಲವಾರು ಬಾರಿ ಹೇಳಿದ್ದಾರೆ.
ನಾವಿಲ್ಲಿ ಹೇಳುತ್ತಿರುವುದು ಅನುಶ್ರೀ ಸಹೋದರ ಅಭಿಜಿತ್ ಬಗ್ಗೆ.ಅಭಿಜಿತ್ ಸಹೋದರ ಅನ್ನುವುದಕ್ಕಿಂತ ಅನುಶ್ರೀಗೆ ಹೆಚ್ಚು ಬೆಸ್ಟ್ ಫ್ರೆಂಡ್ ಎನ್ನುವುದನ್ನು ಅನುಶ್ರೀ ಅನೇಕ ಕಾರ್ಯಕ್ರಮಗಳಲ್ಲಿ ಅಭಿಜಿತ್ ಬಗ್ಗೆ ಹೇಳಿಕೊಂಡಿದ್ದಾರೆ.