PHOTOS

Mangal Dosh Upay: ಮಂಗಳ ದೋಷ ಪರಿಹಾರಕ್ಕಾಗಿ ಇಂದು ಈ ವಸ್ತುಗಳನ್ನು ತಪ್ಪದೇ ದಾನ ಮಾಡಿ

Mangal Dosh Upay: ಜ್ಯೋತಿಷ್ಯದ ಪ್ರಕಾರ, ಮಂಗಳವಾರದಂದು ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಜಾತಕದಲ್ಲಿ ಮಂಗಳ ಗ್ರಹವನ್ನು ಬಲಪಡಿಸಬಹುದು. ಮಾತ್ರವಲ್ಲಿ ಇದರ...

Advertisement
1/5
ಚಿನ್ನದ ದಾನ
ಚಿನ್ನದ ದಾನ

ಚಿನ್ನದ ದಾನ: ನೀವು ಯಾವುದೇ ಕೆಲಸದಲ್ಲಿ ಪದೇ ಪದೇ ಅಡೆತಡೆಗಳನ್ನು ಎದುರಿಸುತ್ತಿದ್ದರೆ ಮಂಗಳವಾರದಂದು ಅಗತ್ಯವಿರುವ ವ್ಯಕ್ತಿ ಅಥವಾ ದೇವಸ್ಥಾನಕ್ಕೆ ಚಿನ್ನವನ್ನು ದಾನ ಮಾಡಿ. ಇದರಿಂದ ಹನುಮಂತನ ಆಶೀರ್ವಾದ ದೊರೆಯುವುದರ ಜೊತೆಗೆ, ಮಂಗಳ ದೋಷದಿಂದಲೂ ಪರಿಹಾರ ದೊರೆಯುತ್ತದೆ ಎಂದು ಹೇಳಲಾಗುತ್ತದೆ.  

2/5
ತಾಮ್ರದ ದಾನ
ತಾಮ್ರದ ದಾನ

ತಾಮ್ರದ ದಾನ: ಮಂಗಳವಾರ ದಾನ ಮಾಡುವ ವಸ್ತುಗಳಲ್ಲಿ ತಾಮ್ರವೂ ಸೇರಿದೆ. ಈ ದಿನ ತಾಮ್ರವನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ತಾಮ್ರವನ್ನು ದಾನ ಮಾಡುವುದರಿಂದ ಮಂಗಳದೋಷದಿಂದ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ. 

3/5
ಬೆಂಕಿ ಕಡ್ಡಿ
ಬೆಂಕಿ ಕಡ್ಡಿ

ಬೆಂಕಿ ಕಡ್ಡಿ: ಮಂಗಳವಾರದಂದು ಕೈಗೊಳ್ಳುವ ಕೆಲವು ವಿಶೇಷ ಕ್ರಮಗಳಿಂದಾಗಿ ಹನುಮಂತನ ಆಶೀರ್ವಾದ ಪಡೆಯಬಹುದು.  ಈ ದಿನ ಬೆಂಕಿಕಡ್ಡಿಗಳನ್ನು ದಾನ ಮಾಡುವುದು ಶ್ರೇಯಸ್ಕರ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಮಂಗಳವಾರದಂದು ನೀವು ದೇವಸ್ಥಾನಕ್ಕೆ ಹೋಗಿ ಬೆಂಕಿಕಡ್ಡಿಗಳನ್ನು ದಾನ ಮಾಡಬಹುದು. ಇದು ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹವನ್ನು ಬಲಪಡಿಸುತ್ತದೆ. 

4/5
ಬೆಲ್ಲದ ದಾನ
ಬೆಲ್ಲದ ದಾನ

ಬೆಲ್ಲದ ದಾನ: ಜ್ಯೋತಿಷ್ಯ ಶಾಸ್ತ್ರದಲ್ಲೂ ಬೆಲ್ಲದ ವಿಶೇಷ ಮಹತ್ವವನ್ನು ಹೇಳಲಾಗಿದೆ. ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹವು ದುರ್ಬಲವಾಗಿದ್ದರೆ, ಅವರು ಮಂಗಳವಾರ ಬೆಲ್ಲವನ್ನು ದಾನ ಮಾಡಬೇಕು. ಈ ರೀತಿ ಮಾಡುವುದರಿಂದ ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹವು ಬಲಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.

5/5
ಗೋಧಿ
ಗೋಧಿ

ಗೋಧಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿದಿನ ಕೆಲವು ವಿಶೇಷ ವಸ್ತುಗಳನ್ನು ದಾನ ಮಾಡುವುದರಿಂದ, ವ್ಯಕ್ತಿಯು ಕಷ್ಟಗಳನ್ನು ತೊಡೆದುಹಾಕಲು ಸಹಾಯಕವಾಗುತ್ತದೆ. ಮಂಗಳವಾರ ಗೋಧಿಯನ್ನು ದಾನ ಮಾಡುವುದರಿಂದ ಮಂಗಳದೋಷದಿಂದ ಮುಕ್ತಿ ದೊರೆಯುತ್ತದೆ. ಈ ದಿನ ನಿರ್ಗತಿಕರಿಗೆ ಗೋಧಿಯನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಈ ದಿನ ಗೋಧಿಯಿಂದ ತಯಾರಿಸಿದ ಖಾದ್ಯಗಳನ್ನು ಗೋ ಮಾತೆಗೆ ತಿನ್ನಿಸುವುದರಿಂದಲೂ ವಿಶೇಷ ಫಲ ಲಭ್ಯವಾಗಲಿದೆ ಎನ್ನಲಾಗುವುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 





Read More