PHOTOS

ತುಳಸಿ ಗಿಡಕ್ಕೆ ಪೂಜೆ ಮಾಡುವ ಮುಂಚೆ ಈ ಸಲಹೆಗಳನ್ನು ತಪ್ಪದೆ ಪಾಲಿಸಿ! ಇಲ್ಲವಾದಲ್ಲಿ ಮನೆಯಲ್ಲಿ ಕಷ್ಟಗಳು ಎದುರಾಗುತ್ತವೆ !

ತುಳಸಿ ಗಿಡವನ್ನು ಲಕ್ಷ್ಮಿ ದೇವಿ ಎಂದು ಪರಿಗಣಿಸಲಾಗುತ್ತದೆ.  ಭಗವಾನ್ ವಿಷ್ಣುವು ಲಕ್ಷ್ಮಿ ದೇವಿಯ ಜೊತೆಗೆ ತುಳಸಿಯಲ್ಲಿ ನೆಲೆಸಿದ್ದಾನೆ ...

Advertisement
1/8

ತುಳಸಿ ಗಿಡವನ್ನು ಲಕ್ಷ್ಮಿ ದೇವಿ ಎಂದು ಪರಿಗಣಿಸಲಾಗುತ್ತದೆ.  ಭಗವಾನ್ ವಿಷ್ಣುವು ಲಕ್ಷ್ಮಿ ದೇವಿಯ ಜೊತೆಗೆ ತುಳಸಿಯಲ್ಲಿ ನೆಲೆಸಿದ್ದಾನೆ ಎನ್ನುವ ನಂಬಿಕೆ  ಇದೆ. 

2/8

ಹಿಂದೂ ಧರ್ಮಗ್ರಂಥಗಳಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಧರ್ಮಗ್ರಂಥಗಳಲ್ಲಿ ತುಳಸಿ ಗಿಡ ಅತ್ಯಂತ ಪವಿತ್ರವಾದದ್ದು. ಲಕ್ಷ್ಮಿ ದೇವಿಯು ತುಳಸಿ ಗಿಡದಲ್ಲಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ.  ತುಳಸಿ ಗಿಡದ ನಿಯಮಿತ ಪೂಜೆಯು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡುತ್ತದೆ ಎಂದು ಹೇಳಲಾಗುತ್ತದೆ.

3/8

ಶ್ರೀ ಹರಿಯ ಪೂಜೆ ತುಳಸಿ ಇಲ್ಲದೆ ಅಪೂರ್ಣ ಎಂದು ಪರಿಗಣಿಸಲಾಗುತ್ತದೆ.

4/8

ಆಯುರ್ವೇದದಲ್ಲಿ ಕೂಡ ತುಳಸಿ ಗಿಡಕ್ಕೆ ಬಹಳ ಮಹತ್ವವಿದೆ. ಇದನ್ನು ಅನೇಕ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಆದರೆ ತುಳಸಿ ಗಿಡಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಾವು ತಿಳಿದೋ ತಿಳಿಯದೆಯೋ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತೇವೆ.

5/8

ನಾವು ಮಾಡುವ ಈ ಸಣ್ಣ ತಪ್ಪುಗಳಿಂದ ಲಕ್ಷ್ಮಿ ದೇವಿಯನ್ನು ಅಸಮಾಧಾನಗೊಳ್ಳುತ್ತಾಳೆ. ತುಳಸಿ ಗಿಡದಲ್ಲಿ ಎಲೆಗಳನ್ನು ಕೀಳುವುದು ಒಳ್ಳೆಯದ್ದಲ್ಲ, ಈ ರೀತಿ ಮಾಡುವುದರಿಂದ ಶೀಘ್ರವೇ ಆ ವ್ಯಕ್ತಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾನೆ. 

6/8

ಏಕಾದಶಿಯಂದು ತುಳಸಿ ಎಲೆಗಳನ್ನು ಕೀಳಬೇಡಿ, ವಾಸ್ತವವಾಗಿ, ಏಕಾದಶಿಯಂದು ತುಳಸಿ ಇಲ್ಲದೆ ಪೂಜೆಯನ್ನು ಸಂಪೂರ್ಣವೆಂದು ಪರಿಗಣಿಸಲಾಗುವುದಿಲ್ಲ. ಆದರೆ ಈ ದಿನ ತುಳಸಿ ಎಲೆಗಳನ್ನು ಕೀಳುವ ಬದಲು ಒಂದು ದಿನ ಮುಂಚಿತವಾಗಿ  ಎಂದರೆ ದಶಮಿ ತಿಥಿಯಂದು ಎಲೆಗಳನ್ನು ಕೀಳುವುದು ಉತ್ತಮ.

7/8

ಭಾನುವಾರ ಆಗಲಿ ಚಂದ್ರ ಅಥವಾ ಸೂರ್ಯಗ್ರಹಣದಂದು ತುಳಸಿ ಎಲೆಗಳನ್ನು ಕೀಳಬಾರದು, ಈ ದಿನದಂದು ತುಳಸಿ ಎಲೆಗಳನ್ನು ಕೀಳುವುದರಿಂದ ಮನೆಯಲ್ಲಿ ದುರದೃಷ್ಟ ಎದುರಾಗುತ್ತದೆ.   

8/8

ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಕೀಳಲೇಬೇಡಿ, ತುಳಸಿ ಎಲೆಗಳನ್ನು ಕೀಳುವಾಗ ಮೊದಲು ಕೈಮುಗಿದು ನಮಸ್ಕಾರ ಮಾಡಿ. ಅಲ್ಲದೆ, ಉಗುರುಗಳ ಸಹಾಯದಿಂದ ತುಳಸಿ ಎಲೆಗಳನ್ನು ಕೀಳುವ ತಪ್ಪು ಮಾಡಲೇಬೇಡಿ.  





Read More