ಶಸ್ಸನ್ನು ಸಾಧಿಸುವಲ್ಲಿ ವಾಸ್ತು ಶಾಸ್ತ್ರದ ಪಾತ್ರ ಮಹತ್ವದ್ದು. ವಾಸ್ತು ಶಾಸ್ತ್ರದಲ್ಲಿ ಹೇಳಲಾದ ನಿಯಮಗಳನ್ನು ಪಾಲಿಸಿದರೆ ದೊಡ್ಡ ಮಟ್ಟದ ಲಾಭವಾಗುವುದು. ವಾ...
ಅಡುಗೆಮನೆಯಲ್ಲಿ ಹಿಟ್ಟು ಖಾಲಿಯಾಗಲು ಬಿಡಬಾರದು. ಹಿತ್ತು ಖಾಲಿಯಾಗುತ್ತದೆ ಎಂದಾದರೆ ಅದು ಬಡತನ ಬಂದೊದಗುವ ಲಕ್ಷಣ ತೋರಿಸುತ್ತದೆ. ಹಿಟ್ಟು ಖಾಲಿಯಾದರೆ ಇದು ಮನೆಯಲ್ಲಿ ವಾಸ್ತು ದೋಷಗಳನ್ನು ಸೃಷ್ಟಿಸುತ್ತದೆ.
ಅರಿಶಿನವು ಭಾರತೀಯ ಆಹಾರದಲ್ಲಿ ಬಳಸುವ ಪ್ರಮುಖ ಮಸಾಲೆಯಾಗಿದೆ. ಅರಿಶಿನವನ್ನು ಧಾರ್ಮಿಕ ಮತ್ತು ಶುಭ ಕಾರ್ಯಗಳಲ್ಲಿಯೂ ಬಳಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ಪೂಜೆಯಲ್ಲಿ ಅರಿಶಿನವನ್ನು ಬಳಸುತ್ತಾರೆ. ಅಡುಗೆಮನೆಯಲ್ಲಿ ಅರಿಶಿನ ಖಾಲಿಯಾದರೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟ ಕೂಡಾ ಮರೆಯಾಗುತ್ತದೆಯಂತೆ.
ಅಕ್ಕಿ ತಾಯಿ ಲಕ್ಷ್ಮಿ ಮತ್ತು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಶುಕ್ರನು ಸಂಪತ್ತು, ಸಮೃದ್ಧಿ ಮತ್ತು ಐಷಾರಾಮಿ ಅಂಶವಾಗಿದೆ. ಮನೆಯಲ್ಲಿ ಅಕ್ಕಿ ಮುಗಿದರೆ ಮನೆಯ ಸುಖ ಸಮೃದ್ಧಿ ಹಾಳಾಗುತ್ತದೆ.
ಜ್ಯೋತಿಷ್ಯದಲ್ಲಿ ಉಪ್ಪನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಉಪ್ಪು ಖಾಲಿಯಾದರೆ ರಾಹು ದೋಷ ಉಂಟಾಗುತ್ತದೆ. ಇದು ನಿಮ್ಮ ಕೆಲಸವನ್ನು ಹಾಳು ಮಾಡುತ್ತದೆ ಮತ್ತು ನಿಮ್ಮನ್ನು ಬಡವರನ್ನಾಗಿ ಮಾಡುತ್ತದೆ.
ಸಾಸಿವೆ ಎಣ್ಣೆ ಶನಿ ದೇವರಿಗೆ ಸಂಬಂಧಿಸಿದೆ. ಮನೆಯಲ್ಲಿ ಸಾಸಿವೆ ಖಾಲಿಯಾಗಲು ಬಿಡಬೇಡಿ. ಇದು ಶನಿದೇವರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಶನಿದೇವನ ಕೋಪವು ಮನೆಯಲ್ಲಿ ಬಿಕ್ಕಟ್ಟು, ಬಡತನ ಮತ್ತು ಸಮಸ್ಯೆಗಳನ್ನು ತರುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)