PHOTOS

ರೈತರಿಗೆ ಪ್ರತಿ ತಿಂಗಳು 3000 ರೂ. ಪಿಂಚಣಿ ಗ್ಯಾರಂಟಿ , ಹೀಗೆ ಪಡೆಯಿರಿ ಲಾಭ

ಕೇಂದ್ರ ಸರ್ಕಾರವು ರೈತರ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ನಡೆಸುತ್ತಿದೆ. ಈ ಯೋಜನೆಗಳಲ್ಲಿ ಒಂದು ಪಿಎಂ ಕಿಸಾನ್ ಮಂಧನ್ ಯೋಜನೆ. 

...
Advertisement
1/5
ಕಿಸಾನ್ ಮಾನ್ ಧನ್ ಯೋಜನೆ
ಕಿಸಾನ್ ಮಾನ್ ಧನ್ ಯೋಜನೆ

18 ರಿಂದ 40 ವರ್ಷದೊಳಗಿನ ಸಣ್ಣ ಹಿಡುವಳಿ ರೈತರು ಕೇವಲ 2 ಹೆಕ್ಟೇರ್ ಕೃಷಿ ಭೂಮಿಯನ್ನು ಹೊಂದಿರುವ PM ಕಿಸಾನ್ ಮಂಧನ್ ಯೋಜನೆಯಲ್ಲಿ ಭಾಗವಹಿಸಬಹುದು. ಈ ಯೋಜನೆಯಡಿ, ತಮ್ಮ ವಯಸ್ಸಿಗೆ ಅನುಗುಣವಾಗಿ ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳವರೆಗೆ ಮಾಸಿಕ 55 ರಿಂದ 200 ರೂ. ಪಾವತಿಸಬೇಕು. 18 ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿಕೊಂಡರೆ, ಮಾಸಿಕ ಕೊಡುಗೆ ವಾರ್ಷಿಕವಾಗಿ 55 ಆಗಿರುತ್ತದೆ. 40 ನೇ ವಯಸ್ಸಿನಲ್ಲಿ ಸೇರಿಕೊಂಡರೆ, ಮಾಸಿಕ ಕೊಡುಗೆ ವಾರ್ಷಿಕ 200 ರೂ. ಪಾವತಿಸಬೇಕಾಗುತ್ತದೆ. 

2/5
ಕಿಸಾನ್ ಮಾನ್ ಧನ್ ಯೋಜನೆ
ಕಿಸಾನ್ ಮಾನ್ ಧನ್ ಯೋಜನೆ

ಯೋಜನೆಯ ಪ್ರಕಾರ, PM ಕಿಸಾನ್ ಮಾಂಧನ್ ನಲ್ಲಿ ರೈತರ ಕೊಡುಗೆಯಷ್ಟೇ, ಸರ್ಕಾರ ಕೂಡಾ ನೀಡುತ್ತದೆ. ಇದರರ್ಥ ರೈತನ ಕೊಡುಗೆ ರೂ 55 ಆಗಿದ್ದರೆ, ಸರ್ಕಾರ ಕೂಡ 55 ರೂ. ನೀಡುತ್ತದೆ.

3/5
ಕಿಸಾನ್ ಮಾನ್ ಧನ್ ಯೋಜನೆ
ಕಿಸಾನ್ ಮಾನ್ ಧನ್ ಯೋಜನೆ

ಪಿಂಚಣಿ ಯೋಜನೆಯ ಲಾಭ ಪಡೆಯಲು ರೈತ ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ಭೇಟಿ ನೀಡುವ ಮೂಲಕ ತನ್ನನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿಗಾಗಿ, ಆಧಾರ್ ಕಾರ್ಡ್ ಮತ್ತು IFSC ಕೋಡ್ ಜೊತೆಗೆ, ಉಳಿತಾಯ ಬ್ಯಾಂಕ್ ಖಾತೆ ಸಂಖ್ಯೆಯನ್ನು ತೆಗೆದುಕೊಂಡು ಹೋಗಬೇಕು. ನೋಂದಣಿಗಾಗಿ, 2 ಛಾಯಾಚಿತ್ರಗಳು ಮತ್ತು ಬ್ಯಾಂಕ್ ಪಾಸ್‌ಬುಕ್ ಸಹ ಅಗತ್ಯವಿರುತ್ತದೆ. ಆರಂಭಿಕ ಕೊಡುಗೆಯನ್ನು ವಿಎಲ್‌ಇಗೆ ಸಲ್ಲಿಸಬೇಕು. VLE ಆಧಾರ್ ಕಾರ್ಡ್ ದೃಡಿಕರಣದ ಆಧಾರದ ಮೇಲೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ಇದರಲ್ಲಿ, ಸಂಗಾತಿ ಮತ್ತು ನಾಮಿನಿ ವಿವರಗಳನ್ನು ತುಂಬಲು ಒಂದು ಆಯ್ಕೆ ಇದೆ. ನೋಂದಣಿಗಾಗಿ ರೈತ ಯಾವುದೇ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ನೋಂದಣಿ ಸಮಯದಲ್ಲಿ, ಕಿಸಾನ್ ಪಿಂಚಣಿ ಖಾತೆ ಸಂಖ್ಯೆ (KPAN) ಮತ್ತು ಕಿಸಾನ್ ಪಿಂಚಣಿ ಕಾರ್ಡ್ ಅನ್ನು ರೈತರ ಜನರೇಟ್ ಮಾಡಲಾಗುತ್ತದೆ.   

4/5
ಕಿಸಾನ್ ಮಾನ್ ಧನ್ ಯೋಜನೆ
ಕಿಸಾನ್ ಮಾನ್ ಧನ್ ಯೋಜನೆ

ಯೋಜನೆಯ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ರಾಷ್ಟ್ರೀಯ ಪಿಂಚಣಿ ಯೋಜನೆ, ಉದ್ಯೋಗಿಗಳ ರಾಜ್ಯ ವಿಮಾ ನಿಗಮ  ಯೋಜನೆ, ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಯಂತಹ ಯಾವುದೇ ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ಸಣ್ಣ  ರೈತರು ಈ ಯೋಜನೆಯಲ್ಲಿ ಸೇರಲು ಸಾಧ್ಯವಿಲ್ಲ. ಇದರ ಹೊರತಾಗಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ನಡೆಸಲ್ಪಡುವ ಪ್ರಧಾನ ಮಂತ್ರಿ ಶ್ರಮ ಯೋಗಿ ಮಧನ್ ಯೋಜನೆ ಅಥವಾ ಪ್ರಧಾನ ಮಂತ್ರಿ ಲಘು ವ್ಯಾಪಾರಿ ಮಂಧನ್ ಯೋಜನೆಯನ್ನು ಆರಿಸಿಕೊಂಡ ರೈತರಿಗೂ ಈ ಯೋಜನೆಯ ಲಾಭ ಸಿಗುವುದಿಲ್ಲ.   

5/5
ಕಿಸಾನ್ ಮಾನ್ ಧನ್ ಯೋಜನೆ
ಕಿಸಾನ್ ಮಾನ್ ಧನ್ ಯೋಜನೆ

ಯೋಜನೆಯ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ರೈತ ಯೋಜನೆಯನ್ನು ಮಧ್ಯದಲ್ಲಿ ಬಿಡಲು ಬಯಸಿದರೆ, ಆಗ ಆತನ ಹಣವು ನಷ್ಟವಾಗುವುದಿಲ್ಲ. ಅವನು ಯೋಜನೆಯನ್ನು ಬಿಡುವವರೆಗೂ ಠೇವಣಿ ಮಾಡಿದ ಹಣವು ಬ್ಯಾಂಕುಗಳ ಉಳಿತಾಯ ಖಾತೆಗೆ ಸಮನಾದ ಬಡ್ಡಿಯನ್ನುಒದಗಿಸುತ್ತದೆ.  ಪಾಲಿಸಿದಾರ ರೈತ ಸಾವನ್ನಪ್ಪಿದರೆ, ಅವನ ಸಂಗಾತಿಯು ಶೇಕಡಾ 50 ರಷ್ಟು ಮೊತ್ತವನ್ನು ಪಡೆಯುತ್ತಾರೆ. ಯೋಜನೆಯ ವಿವರಗಳನ್ನು https://maandhan.in/ ನಿಂದ ತೆಗೆದುಕೊಳ್ಳಬಹುದು.   





Read More