PHOTOS

Diwali 2022: ದೀಪಾವಳಿಯ ಬಳಿಕ ಈ ರಾಶಿಗಳ ಜನರ ಮನೆಗೆ ತಾಯಿ ಲಕ್ಷ್ಮಿಯ ಪ್ರವೇಶ, ಬಂಪರ್ ಲಾಭ ನೀಡಲಿದ್ದಾನೆ ಬೃಹಸ್ಪತಿ

iter Transit After Diwali 2022: ಜೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ ಗ್ರಹಗಳ ನಡೆ ವ್ಯಕ್ತಿಯ ಜೀವನದ ಮೇಲೆ ವಿಶೇಷ ಪ್ರಭಾವ ಬೀರುತ್ತವೆ. ಯಾವುದೇ ಒ...

Advertisement
1/4

ಕುಂಭ ರಾಶಿ- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರುವು ಕುಂಭ ರಾಶಿಯ ದ್ವಿತೀಯ ಭಾವದಲ್ಲಿ ಸಾಗಲಿದ್ದಾನೆ, ಇದು ಈ ಸ್ಥಳೀಯ ಜಾತಕದವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಅವಧಿಯಲ್ಲಿ ನೀವು ಸಾಕಷ್ಟು ಹಣವನ್ನು ಗಳಿಸುವಿರಿ. ಕೆಲಸದ ಸ್ಥಳದಲ್ಲಿ ಪ್ರಶಂಸೆ ವ್ಯಕ್ತವಾಗಲಿದೆ. ಈ ಸಮಯದಲ್ಲಿ, ಬೋಧನೆ ಮತ್ತು ಮಾರುಕಟ್ಟೆ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಒಳ್ಳೆಯ ಸಮಾಚಾರ ಪಡೆಯಬಹುದು.  

2/4

ಕರ್ಕ ರಾಶಿ- ಈ ರಾಶಿಚಕ್ರದ ನವಮ ಭಾವದಲ್ಲಿ ಗುರುವು ನೇರನಡೆ ಅನುಸರಿಸಲಿದ್ದಾನೆ.  ಈ ಕಾರಣದಿಂದಾಗಿ, ನೀವು ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುವಿರಿ. ಈ ರಾಶಿಯ ಜನರ ದೀರ್ಘ ಕಾಲದಿಂದ ನಿಂತುಹೋಗಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ವ್ಯಾಪಾರಸ್ಥರು ವ್ಯಾಪಾರ ಪ್ರವಾಸಕ್ಕೆ ಹೋಗಬಹುದು. ಈ ಅವಧಿಯಲ್ಲಿ ನೀವು ಉತ್ತಮ ಲಾಭ ಪಡೆಯುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ವಿದೇಶಿ ವ್ಯಾಪಾರಕ್ಕೆ ಸಂಬಂಧಿಸಿದ ಜನರು ಸಹ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ.  

3/4

ಮಿಥುನ ರಾಶಿ- ಜ್ಯೋತಿಷ್ಯದ ಪ್ರಕಾರ, ಈ ರಾಶಿಚಕ್ರದ ಧಶಮ ಭಾವದಲ್ಲಿ, ಗುರು ಚಲಿಸಲಿದ್ದಾನೆ. ಇದರೊಂದಿಗೆ, ಈ ರಾಶಿಯ ಜನರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಬಹುದು. ಇದೇ ವೇಳೆ ನಿಮಗೆ ಹೊಸ ಉದ್ಯೋಗ ಪ್ರಸ್ತಾಪವು ಬರುವ ಸಾಧ್ಯತೆ ಇದೆ. ಬಡ್ತಿ ಸಿಗುವ ಎಲ್ಲ ಸಾಧ್ಯತೆಗಳಿವೆ. ವ್ಯಾಪಾರಸ್ಥರಿಗೆ ಹೊಸ ಆರ್ಡರ್ ಸಿಗಬಹುದು ಮತ್ತು ಅದರಿಂದ ನೀವು ಸಾಕಷ್ಟು ಆದಾಯ ಗಳಿಸಬಹುದು.  

4/4

ವೃಷಭ ರಾಶಿ-  ಈ ರಾಶಿಯ ಏಕಾದಶ ಭಾವದಲ್ಲಿ ಗುರುವಿನ ಈ ಸಂಕ್ರಮಣ ನಡೆಯಲಿದೆ. ಇದು ಆದಾಯ ಮತ್ತು ಹಣದ ಲಾಭದಲ್ಲಿ ಯಶಸ್ಸನ್ನು ತರಲಿದೆ. ವೃಷಭ ರಾಶಿಯವರಿಗೆ ಆದಾಯ ಹೆಚ್ಚಾಗುತ್ತದೆ. ಅಲ್ಲದೆ, ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಅಲ್ಲದೆ, ವ್ಯಾಪಾರದಲ್ಲಿ ಲಾಭವೂ ಇರಲಿದೆ. ಈ ರಾಶಿಯ ಜನರು ವಾಹನ ಅಥವಾ ಆಸ್ತಿಯನ್ನು ಖರೀದಿಸುವುದನ್ನು ಪರಿಗಣಿಸಬಹುದು.





Read More