Diabetes Home Remedies: ನಿಯಮಿತವಾಗಿ ಸಿಹಿಗುಂಬಳಕಾಯಿ ಸೇವಿಸಿದರೆ ಮಧುಮೇಹ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು. ಪ್ರತಿದಿನ ಖರ್ಜೂ...
ನಿಯಮಿತವಾಗಿ ನೆಲ್ಲಿಕಾಯಿ ಸೇವಿಸುವುದರಿಂದ ಮಧುಮೇಹ ಸಮಸ್ಯೆ ದೂರವಾಗುತ್ತದೆ. ನೆಲ್ಲಿಕಾಯಿಯನ್ನು ನುಣ್ಣಗೆ ಅರೆದು ಸಕ್ಕರೆ ಬೆರೆಸಿ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.
ಬೇಯಿಸಿದ ಹುರುಳಿ ಕಾಳನ್ನು ಬಸಿದು ಸಾರು ತಯಾರಿಸಿ ಸೇವಿಸಿದರೆ ಮಧುಮೇಹ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ದಿನನಿತ್ಯ ಕಡಲೆಕಾಯಿಯ ಸೇವನೆ ಮಾಡುವುದರಿಂದಲೂ ಸಕ್ಕರೆ ಕಾಯಿಲೆ ನಿವಾರಣೆಯಾಗುತ್ತದೆ.
ರಾಗಿ ಹಿಟ್ಟಿನಲ್ಲಿ ಮುದ್ದೆ ಮಾಡಿ ಸೇವಿಸಿದರೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು. ಹಸಿ ರಾಗಿತೆನೆ ಸುಟ್ಟು ಕಾಳುಗಳನ್ನು ಉದುರಿಸಿ ಅದಕ್ಕೆ ಕೊಬ್ಬರಿ, ಬೆಲ್ಲ ಸೇರಿಸಿ ಸೇವಿಸಿದರೆ ಮಧುಮೇಹದಿಂದ ಮುಕ್ತಿ ದೊರೆಯುತ್ತದೆ.
ನಿಯಮಿತವಾಗಿ ಹಾಗಲಕಾಯಿ ರಸ ಕುಡಿಯುವುದರಿಂದ ರಕ್ತದಲ್ಲಿನ ಅಧಿಕ ಸಕ್ಕರೆ ಪ್ರಮಾಣವು ನಿಯಂತ್ರಣಕ್ಕೆ ಬರುತ್ತದೆ. ೩ ತಿಂಗಳವರೆಗೆ ೮-೧೦ ಕರಿಬೇವಿನ ಸೊಪ್ಪು ತಿನ್ನುವವ ಅಭ್ಯಾಸ ರೂಢಿಸಿಕೊಂಡರೆ ಮಧುಮೇಹದಿಂದ ಮುಕ್ತಿ ಹೊಂದಬಹುದು.
ನಿಯಮಿತವಾಗಿ ಸಿಹಿಗುಂಬಳಕಾಯಿ ಸೇವಿಸಿದರೆ ಮಧುಮೇಹ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು. ಪ್ರತಿದಿನ ಖರ್ಜೂರ ತಿನ್ನುವುದರಿಂದಲೂ ಸಹ ಮಧುಮೇಹ ರೋಗವು ಗುಣವಾಗುತ್ತದೆ.