ೆ ಏರಿಕೆಯಾಗುತ್ತಲೇ ಇದೆ. ಆಗೊಂದು ಕಾಲದಲ್ಲಿ ಸಿಲಿಂಡರ್ ಅನ್ನು ಬಳಸುವವರ ಸಂಖ್ಯೆ ಬಹಳ ಕಡಿಮೆ ಇತ್ತು. ಒಲೆಯಲ್ಲಿ ಅಡುಗೆ ಬೇಯಿಸಿ ತಿನ್ನುತ್ತದ್ದ ಕಾಲವೊಂದಿತ್ತು. ...
ಕಾಲ ಬದಲಾದಂತೆ ಬೆಲೆ ಏರಿಕೆಯಾಗುತ್ತಲೇ ಇದೆ. ಆಗೊಂದು ಕಾಲದಲ್ಲಿ ಸಿಲಿಂಡರ್ ಅನ್ನು ಬಳಸುವವರ ಸಂಖ್ಯೆ ಬಹಳ ಕಡಿಮೆ ಇತ್ತು. ಒಲೆಯಲ್ಲಿ ಅಡುಗೆ ಬೇಯಿಸಿ ತಿನ್ನುತ್ತದ್ದ ಕಾಲವೊಂದಿತ್ತು. ಆದರೆ ಈಗ ಆಗಲ್ಲ ಪ್ರತಿಯೊಬ್ಬರ ಮನೆಯಲ್ಲಿಯೂ ಸಿಲಿಂಡರ್ ಇದ್ದೆ ಇದೆ. ಈ ಸಿಲಿಂಡರ್ಗೆ ಡಿಮ್ಯಾಂಡ್ ಜಾಸ್ತಿ ಆಗುತ್ತಿದ್ದಂತೆ, ಬೆಲೆ ಏರಿಕೆಯೂ ಅಷ್ಟೆ ಆಗುತ್ತಿದೆ.
ಭಾರತದಲ್ಲಿ ಸದ್ಯ ಸಿಲಿಂಡರ್ ಬಳಸದೆ ಒಲೆಯಲ್ಲಿ ಆಹಾರ ಬೇಯಿಸಿ ತಿನ್ನುವವರ ಸಂಕ್ಯೆ ಬಹಳ ಕಡಿಮೆ. ನಗರಗಳಲ್ಲಿ ಅಷ್ಟೆ ಅಲ್ಲ ದೇಶದ ಮೂಲೆ ಮೂಲೆಯಲ್ಲೂ ಸಿಲಿಂಡರ್ ಬಳಕೆಯಾಗುವುದನ್ನು ನಾವು ಕಾಣ ಬಹುದು.
ಸೀಮೆ ಎಣ್ಣೆ ಸುರಿಸಿ ಒಲೆಯಲ್ಲಿ ಅಡುಗೆ ಮಾಡುತ್ತಿದ್ದ ಕಾಲವೊಂದಿತ್ತು. ಕಟ್ಟಿಗೆ ಕತ್ತರಿಸಿ ತಂದು ಒಲೆ ಉರಿಸಿ ಜನ ಅಡುಗೆ ಬೇಯಿಸುತ್ತಿದ್ದರು.
ಆದರೆ ಕಾಲ ಬದಲಾದಂತೆ ಜನರು ಕೂಡ ಸಿಲಿಂಡರ್ಗೆ ಬದಲಾಗುತ್ತಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿಯೂ ಸಿಲಿಂಡರ್ ಬಳಕೆಯನ್ನು ನಾವು ಇಂದು ಕಾನ ಬಹುದು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ತಂದ ಉಜ್ವಲ ಯೋಜನೆಯಡಿ ದೇಶದ ಮೂಲೆ ಮೂಲೆಯಲ್ಲಿಯೂ ಸಿಲಿಂಡರ್ ಬಳಕೆಯಾಗುತ್ತಿದೆ.
ಉಜ್ವಲ ಯೋಜನೆಯಡಿ ಸಿಲಿಂಡರ್ ಪಡೆಯುತ್ತಿದ್ದವರಿಗೆ ಸಿಲಿಂಡರ್ ಕೇವಲ 300 ರೂ ಗೆ ನೀಡಲಾಗುತ್ತಿದ್ದು, ಸಾಮಾನ್ಯ ಜನರಿಗೆ 903 ರೂ. ನೀಡಲಾಗುತ್ತಿತ್ತು.
ಹರಿಯಾಣ ಮುಖ್ಯಮಂತ್ರಿ ನಯೆಬ್ ಸೈನಿ ಅವರ ರಾಜ್ಯದ ಜನರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅವರು ಮಾಡಿರುವ ಈ ಹೊಸ ಘೋಷಣೆಯಲ್ಲಿ ಉಜ್ವಲ ಯೋಜನೆಯಡಿ ಪ್ರತಿ ಮನೆಗೆ 500 ರೂ. ಗೆ ಸಿಲಿಂಡರ್ ನೀಡಲಿದ್ದಾರೆ ಎಂದು ಘೋಷಣೆ ಹೊರಡಿಸಿದ್ದಾರೆ.
ವಾರ್ಷಿಕ ಆದಾಯ ರೂ. 1.80 ಲಕ್ಷಕ್ಕಿಂತ ಕಡಿಮೆ ಇರುವವರು. ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.
ಹರಿಯಾಣ ಮುಖ್ಯಮಂತ್ರಿ ನಯೆಬ್ ಸೈನಿ ಮಾಡಿರುವ ಈ ಘೋಷಣೆಯಿಂದ ರಾಜ್ಯದಲ್ಲಿ 4.6 ಮಿಲಿಯನ್ ಕುಟುಂಬಗಳು ಇದರ ಲಾಭ ಪೆಡೆಯಲಿವೆ.