actor accident: ಕಿರುತೆರೆ ನಟ ಆಕಾಶ್ ಚೌಧರಿ ಅವರ ಕಾರು ಅಪಘಾತಕ್ಕೀಡಾಗಿದೆ. ಆಕಾಶ್ ಶನಿವಾರ ತನ್ನ ಕಾರಿನಲ್ಲಿ ಲೋನಾವಾಲಾಗೆ ಹೋಗುತ್ತಿದ್ದಾಗ ಇದ್ದಕ್ಕ...
ಹಿಂದಿಯ 'ಭಾಗ್ಯಲಕ್ಷ್ಮಿ' ಸೀರಿಯಲ್ ಮೂಲಕ ಖ್ಯಾತರಾಗಿದ್ದ ನಟ ಆಕಾಶ್ ಚೌಧರಿ ವೀಕೆಂಡ್ ಟ್ರಿಪ್ ತೆರಳಿದ್ದ ವೇಳೆ ಆಕ್ಸಿಡೆಂಟ್ ನಡೆದಿದೆ. ಅಪಘಾತದಲ್ಲಿ ನಟ ಆಕಾಶ್ ಚೌಧರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
ನಟ ಆಕಾಶ್ ಚೌಧರಿ ಅವರು ತಮ್ಮ ಸಾಕು ನಾಯಿಯೊಂದಿಗೆ ಲೋನಾವಾಲಾಗೆ ಹೋಗುತ್ತಿದ್ದಾಗ ಟ್ರಕ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ಅವರು ಸುರಕ್ಷಿತವಾಗಿದ್ದಾರೆ. ಆದರೆ, ಈ ಘಟನೆ ಅವರನ್ನು ಬೆಚ್ಚಿಬೀಳಿಸಿದೆ.
"ಟ್ರಕ್ ನಮ್ಮನ್ನು ಡಿಕ್ಕಿ ಹೊಡೆದಾಗ, ಏನಾಯಿತು ಎಂದು ನನಗೆ ತಿಳಿದಿರಲಿಲ್ಲ. ನಾವು ಪಾರಾಗಿ ಹೊರಬಂದೆವು, ಆದರೆ ಘಟನೆಯು ನನ್ನನ್ನು ಬೆಚ್ಚಿಬೀಳಿಸಿತು" ಎಂದು ಆಕಾಶ್ ಹೇಳಿದ್ದಾರೆ.
ಆಕಾಶ್ ಹಿಂದಿ ಸೀರಿಯಲ್ ಭಾಗ್ಯಲಕ್ಷ್ಮಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಟಿವಿ ಶೋಗಳ ಹೊರತಾಗಿ ಆಕಾಶ್ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ.