ನವದೆಹಲಿ: How To Get Fast Progress In Career Business - ಉದ್ಯೋಗ-ವ್ಯವಹಾರದಲ್ಲಿ (Career) ಯಶಸ್ಸು ಮತ್ತು ಪ್ರಗತಿಗೆ ಗ್ರಹಗಳ ರಾಜ ಸೂರ್ಯನ ಅನುಗ್ರಹ ಅಗತ್ಯ. ಸೂರ್ಯನ (Surya Dev) ಕೃಪೆಯಿಂದ ಮಾತ್ರ ಜೀವನದಲ್ಲಿ ಯಶಸ್ಸು, ಗೌರವ, ಆತ್ಮಸ್ಥೈರ್ಯ, ಆರೋಗ್ಯ ಪ್ರಾಪ್ತಿಯಾಗುತ್ತದೆ. ಭಾನುವಾರ ಸೂರ್ಯ ದೇವರಿಗೆ ಸಮರ್ಪಿತ ದಿನ ಇಂತಹ ಪರಿಸ್ಥಿತಿಯಲ್ಲಿ ಈ ದಿನ ಸೂರ್ಯನನ್ನು ಪೂಜಿಸುವ ಮೂಲಕ, ಸೂರ್ಯನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದರಿಂದ ಜಾತಕದಲ್ಲಿ ಸೂರ್ಯ ಬಲ ಹೆಚ್ಚಾಗುತ್ತದೆ ಮತ್ತು ಶುಭ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ.
ವೈಫಲ್ಯಗಳ ಅಂತ್ಯ (Sunday Remedies)
ಉದ್ಯೋಗ-ವ್ಯವಹಾರ ಅಥವಾ ಜೀವನದ ಯಾವುದೇ ಕ್ಷೇತ್ರದಲ್ಲಿ ತ್ವರಿತ ಯಶಸ್ಸನ್ನು ಪಡೆಯಲು ಭಾನುವಾರದಂದು ಸೂರ್ಯನಿಗೆ ಸಂಬಂಧಿಸಿದ ಬೆಲ್ಲ, ತಾಮ್ರ, ಗೋಧಿ ಮತ್ತು ಮಸೂರಿ ಬೆಲೆಯನ್ನು ದಾನ ಮಾಡಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೀವು ಅವುಗಳ ಪ್ರಮಾಣವನ್ನು ನಿರ್ಧರಿಸಿ.
ಇದನ್ನೂ ಓದಿ-Biggest Bank Scam: 28 ಬ್ಯಾಂಕ್ಗಳಿಗೆ 22,842 ಕೋಟಿ ವಂಚಿಸಿದ ಕಂಪನಿ! ಸಿಬಿಐ ಪ್ರಕರಣ ದಾಖಲು
ಈ ರೀತಿ ದಾನ ಮಾಡಿ (Donate Grain)
ಪ್ರತಿ ಭಾನುವಾರದಂದು ಬೆಲ್ಲ, ತಾಮ್ರ, ಗೋಧಿ ಮತ್ತು ಉದ್ದಿನ ಬೇಳೆಯಿಂದ ಯಾವುದಾದರೂ ಒಂದು ವಸ್ತುವನ್ನು ದಾನ ಮಾಡಿ. ನೀವು ಬಯಸಿದರೆ, ನೀವು ಈ ವಸ್ತುಗಳನ್ನು ಒಟ್ಟಿಗೆ ದಾನ ಮಾಡಬಹುದು. ಇದಕ್ಕಾಗಿ ಬೆಳಗ್ಗೆ ಸ್ನಾನ ಮಾಡಿದ ನಂತರ ಸೂರ್ಯನನ್ನು ಪೂಜಿಸಿ, ಈ ವಸ್ತುಗಳನ್ನು ದಾನ ಮಾಡಿ. ಸಾಧ್ಯವಾದರೆ, ಭಾನುವಾರದಂದು 'ಓಂ ಘೃಣಿ ಸೂರ್ಯಾಯ ನಮಃ' ಎಂಬ ಮಂತ್ರವನ್ನು ಪಠಿಸಿ. ಪಠಣ ಮಾಡುವಾಗ, ನಿಮ್ಮ ಸಂಪೂರ್ಣ ಗಮನವನ್ನು ಸೂರ್ಯ ದೇವರ ಮೇಲೆ ಇರಿಸಿ. ಶೀಘ್ರದಲ್ಲಿಯೇ ನಿಮಗೆ ಅನುಗ್ರಹ ಪ್ರಾಪ್ತಿಯಾಗಲಿದೆ.
ಇದನ್ನೂ ಓದಿ-Suresh Rainaಗೆ ಭಾರಿ ಹಿನ್ನಡೆ, ಯಾವ ತಂಡವೂ ಕೂಡ ಖರೀದಿಗೆ ಮುಂದಾಗಲಿಲ್ಲ
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ಓದಿ-IPL 2022 Auction: 7 ಕೋಟಿಗೆ ಆರ್ಸಿಬಿ ಪಾಲಾದ ಡುಪ್ಲೆಸಿಸ್, 6.25 ಕೋಟಿಗೆ ವಾರ್ನರ್ ಸೇಲ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.