Home> Lifestyle
Advertisement

Astro Tips: ಭಾನುವಾರ ರಾತ್ರಿ ಈ ಒಂದು ಕೆಲಸ ಮಾಡಿದ್ರೆ ಸಾಕು ಜೀವನವಿಡೀ ಹಣದ ಮಳೆಯಾಗಲಿದೆ!

ಭಾನುವಾರ ಸೂರ್ಯ ದೇವರಿಗೆ ಸಮರ್ಪಿತವಾಗಿದೆ. ಭಾನುವಾರ ಕೆಲವು ಕೆಲಸಗಳನ್ನು ಮಾಡುವುದರಿಂದ ಸೂರ್ಯ ದೇವರ ವಿಶೇಷ ಆಶೀರ್ವಾದವು ನಿಮಗೆ ದೊರೆಯುತ್ತದೆ. ಜ್ಯೋತಿಷ್ಯದಲ್ಲಿ ಸೂರ್ಯ ದೇವರ ಕೆಲವು ಕ್ರಮಗಳ ಬಗ್ಗೆ ಹೇಳಲಾಗಿದೆ, ಇದನ್ನು ಸಂಜೆ ಮಾಡಬೇಕು. ಇದರಿಂದ ನಿಮಗೆ ಸಂಪತ್ತು, ವೈಭವ ಮತ್ತು ಸಮೃದ್ಧಿ ದೊರೆಯುತ್ತದೆ.

Astro Tips: ಭಾನುವಾರ ರಾತ್ರಿ ಈ ಒಂದು ಕೆಲಸ ಮಾಡಿದ್ರೆ ಸಾಕು ಜೀವನವಿಡೀ ಹಣದ ಮಳೆಯಾಗಲಿದೆ!

ನವದೆಹಲಿ: ಹಿಂದೂ ಧರ್ಮದಲ್ಲಿ ಪ್ರತಿ ದಿನವೂ  ದೇವ-ದೇವತೆಗಳಿಗೆ ಸಮರ್ಪಿತವಾಗಿದೆ. ಅದೇ ರೀತಿ ಭಾನುವಾರ ಸೂರ್ಯ ದೇವರಿಗೆ ಸಮರ್ಪಿಸಲಾಗಿದೆ. ಈ ದಿನ ಸೂರ್ಯ ದೇವರನ್ನು ಪೂಜಿಸಿ ಉಪವಾಸ ವ್ರತವನ್ನು ಮಾಡುವುದರಿಂದ ವ್ಯಕ್ತಿಯ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಈ ದಿನ ಅರ್ಘ್ಯವನ್ನು ಅರ್ಪಿಸುವುದರಿಂದ ಸೂರ್ಯದೇವನು ಪ್ರಸನ್ನನಾಗುತ್ತಾನೆ.

ಜ್ಯೋತಿಷ್ಯದಲ್ಲಿ ಭಾನುವಾರದಂದು ಮಾಡುವ ಕೆಲವು ಪರಿಹಾರಗಳ ಬಗ್ಗೆ ಹೇಳಲಾಗಿದೆ. ಈ ಕೆಲಸವನ್ನು ಬೆಳಗಿನ ಬದಲು ಸಂಜೆ ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ವ್ಯಕ್ತಿಯು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾನೆ. ನೀವು ಸಹ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದರೆ ಭಾನುವಾರ ಸಂಜೆ ಈ ಪರಿಹಾರಗಳನ್ನು ಮಾಡಿಬೇಕು.

ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ಯಶಸ್ಸು ಸಿಗಲಿದೆ, ಆಸೆಗಳು ಈಡೇರುತ್ತವೆ

ಭಾನುವಾರದಂದು ಈ ಪರಿಹಾರ ಮಾಡಿ

ಅರಳಿ ಮರದ ಕೆಳಗೆ ದೀಪ ಬೆಳಗಿಸಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರ ಸಂಜೆ ಅರಳಿ ಮರದ ಕೆಳಗೆ ದೀಪವನ್ನು ಬೆಳಗಿಸಬೇಕು. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಆದರೆ ಭಾನುವಾರ ಸಂಜೆಯೂ ಸಹ ಅರಳಿ ಮರದ ಕೆಳಗೆ ಎಣ್ಣೆಯ ದೀಪವನ್ನು ಬೆಳಗಿಸಿದರೆ ಮನೆಯಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಇದರೊಂದಿಗೆ ವ್ಯಕ್ತಿಯ ಸ್ಥಾನಮಾನವು ಹೆಚ್ಚಾಗುತ್ತದೆ ಮತ್ತು ಅನೇಕ ರೀತಿಯ ಪ್ರಯೋಜನಗಳು ಸಹ ದೊರೆಯುತ್ತವೆ.

ಭಾನುವಾರ ಚೌಕಾಕಾರದ ದೀಪ ಬೆಳಗಿಸಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರ ಸಂಜೆ ಅರಳಿ ಮರದ ಕೆಳಗೆ 4 ಮುಖದ ದೀಪವನ್ನು ಬೆಳಗಿಸಿದರೆ, ಆ ವ್ಯಕ್ತಿಗೆ ಗೌರವ ಸಿಗುತ್ತದೆ. ಇದರೊಂದಿಗೆ ಕಚೇರಿಯಲ್ಲಿ ಪ್ರಗತಿಯ ಹೊಸ ಮಾರ್ಗಗಳು ವ್ಯಕ್ತಿಗೆ ತೆರೆದುಕೊಳ್ಳುತ್ತವೆ.

ಕಪ್ಪು ವಸ್ತುಗಳನ್ನು ದಾನ ಮಾಡಿ

ಕೆಟ್ಟ ಕರ್ಮಗಳ ಪರಿಣಾಮಗಳನ್ನು ಕಡಿಮೆ ಮಾಡಲು ಅಥವಾ ಮೋಕ್ಷ ಪಡೆಯಲು ಕಪ್ಪು ವಸ್ತುಗಳನ್ನು ದಾನ ಮಾಡುವ ವಿಧಾನವನ್ನು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಇದಕ್ಕಾಗಿ ಭಾನುವಾರ ಸಂಜೆ ಕಪ್ಪು ಎಳ್ಳು, ಕಪ್ಪು ಬಟ್ಟೆ ಅಥವಾ ಕರಿಮೆಣಸನ್ನು ದಾನ ಮಾಡುವುದರಿಂದ ವ್ಯಕ್ತಿಯ ಕೆಟ್ಟ ಕರ್ಮಗಳು ನಿವಾರಣೆಯಾಗುತ್ತವೆ.

ಇದನ್ನೂ ಓದಿ: Mangal Margi 2023: ವೃಷಭ ರಾಶಿಯೆಡೆಗೆ ಮಂಗಳ ಮಾರ್ಗಿ, ಈ ರಾಶಿಗಳಿಗೆ ಸುಖ-ಸಂಪತ್ತು ಸಿಗಲಿದೆ!

ಮಲಗಿರುವಾಗ ಈ ಪರಿಹಾರ ಮಾಡಿ

ನೀವು ದೀರ್ಘಕಾಲದವರೆಗೆ ಹಣದ ಕೊರತೆಯಿಂದ ಬಳಲುತ್ತಿದ್ದರೆ, ಭಾನುವಾರ ಸಂಜೆ ಈ ಕೆಲಸ ಮಾಡಬೇಕು. ಮಲಗುವಾಗ ತಲೆಯ ಬಳಿ ಒಂದು ಲೋಟ ಹಾಲನ್ನು ಇಟ್ಟು ಭಾನುವಾರ ಬೆಳಗ್ಗೆ ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡಿ ಎಕ್ಕದ ಮರಕ್ಕೆ ಅರ್ಪಿಸಬೇಕು. ನೀವು ಇದನ್ನು ಸತತ 11 ಭಾನುವಾರಗಳ ಕಾಲ ಮಾಡಬೇಕು. ಇದರಿಂದ ವ್ಯಕ್ತಿಯು ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತನಾಗುತ್ತಾನೆ.

ಚರ್ಮ ರೋಗದ ಮುಕ್ತಿಗೆ ಈ ಕೆಲಸ ಮಾಡಿ  

ಭಾನುವಾರದಂದು ಸೂರ್ಯನನ್ನು ಆರಾಧಿಸುವುದರಿಂದ ವ್ಯಕ್ತಿಯ ಗೌರವ ಮತ್ತು ಸ್ಥಾನಮಾನವು ಹೆಚ್ಚಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದರೊಂದಿಗೆ ನಿತ್ಯವೂ ಸೂರ್ಯನನ್ನು ಪೂಜಿಸುವುದರಿಂದ ಕಣ್ಣು ಮತ್ತು ಚರ್ಮ ಸಂಬಂಧಿ ಸಮಸ್ಯೆಗಳು ದೂರವಾಗುತ್ತವಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More