Home> Lifestyle
Advertisement

Shani Uday In Kumbha: ಕುಂಭ ರಾಶಿಯಲ್ಲಿ ಶನಿ ಉದಯ, ಈ 5 ರಾಶಿಯವರಿಗೆ ದೊಡ್ಡ ಗಂಡಾಂತರ!

Shani Uday In Kumbha: ನ್ಯಾಯದ ದೇವರು ಶನಿಯು ಉದಯಿಸುವ ಮೂಲಕ 5 ರಾಶಿಗಳಿಗೆ ಸಮಸ್ಯೆಗಳನ್ನು ಹೆಚ್ಚಿಸಬಹುದು ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಈ ಜನರು ಮಾರ್ಚ್ 6ರ ನಂತರ ಬಹಳ ಜಾಗರೂಕರಾಗಿರಬೇಕು. ಶನಿದೇವನು ಉದಯಿಸುವ ಮೂಲಕ ಯಾವ ರಾಶಿಯವರಿಗೆ ಕಷ್ಟ ಹೆಚ್ಚಿಸುತ್ತಾನೆ ಎಂದು ತಿಳಿಯಿರಿ.

Shani Uday In Kumbha: ಕುಂಭ ರಾಶಿಯಲ್ಲಿ ಶನಿ ಉದಯ, ಈ 5 ರಾಶಿಯವರಿಗೆ ದೊಡ್ಡ ಗಂಡಾಂತರ!

ನವದೆಹಲಿ: ಕರ್ಮವನ್ನು ಕೊಡುವ ನ್ಯಾಯದ ದೇವರು ಶನಿ ದೇವ ಹೋಳಿಗಿಂತ ಮೊದಲು ಉದಯಿಸಲಿದ್ದಾರೆ. ಮಾರ್ಚ್ 6ರಂದು ಶನಿದೇವನು ರಾತ್ರಿ 11.36ಕ್ಕೆ ಕುಂಭ ರಾಶಿಯಲ್ಲಿ ಉದಯಿಸುತ್ತಾನೆ. ನ್ಯಾಯದ ದೇವರು ಶನಿಯು ಉದಯಿಸುವ ಮೂಲಕ 5 ರಾಶಿಗಳಿಗೆ ಸಮಸ್ಯೆಗಳನ್ನು ಹೆಚ್ಚಿಸಬಹುದು ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಈ ಜನರು ಮಾರ್ಚ್ 6ರ ನಂತರ ಬಹಳ ಜಾಗರೂಕರಾಗಿರಬೇಕು. ಶನಿದೇವನು ಉದಯಿಸುವ ಮೂಲಕ ಯಾವ ರಾಶಿಯವರಿಗೆ ಕಷ್ಟ ಹೆಚ್ಚಿಸುತ್ತಾನೆ ಎಂದು ತಿಳಿಯಿರಿ.

ಮೇಷ ರಾಶಿ: ಮೇಷ ರಾಶಿಯ ಜನರು ತಮ್ಮ ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಬಹುದು. ಸಂಬಂಧಗಳ ಮೇಲೂ ಸಹ ಪರಿಣಾಮ ಬೀರುತ್ತವೆ. ನೀವು ಯಾವುದೇ ಆಸ್ತಿಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಸ್ವಲ್ಪ ದಿನ ಕಾಯಿರಿ. ಖರ್ಚು-ವೆಚ್ಚಗಳು ಹೆಚ್ಚಾಗುತ್ತವೆ ಮತ್ತು ಆದಾಯದಲ್ಲಿ ಅಡಚಣೆ ಉಂಟಾಗುತ್ತದೆ.

ಕನ್ಯಾ ರಾಶಿ: ಶನಿಯ ಉದಯವು ಕನ್ಯಾ ರಾಶಿಯವರಿಗೆ ಕಷ್ಟಗಳನ್ನು ತರುತ್ತದೆ. ವೈವಾಹಿಕ ಜೀವನದಲ್ಲಿ ಕಷ್ಟಗಳು ಹೆಚ್ಚಾಗಬಹುದು. ಕುಟುಂಬ ಸದಸ್ಯರೊಂದಿಗೆ ಮನಸ್ತಾಪ ಉಂಟಾಗಬಹುದು. ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಿ. ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿಮ್ಮ ಮಾತನ್ನು ನಿಯಂತ್ರಿಸಲು ಪ್ರಯತ್ನಿಸಿ, ಇಲ್ಲದಿದ್ದರೆ ಸಂಬಂಧವು ಹದಗೆಡುತ್ತದೆ.

ಇದನ್ನೂ ಓದಿ: ಮನೆ ಮತ್ತು ನಿಮ್ಮ ಮೇಲೆ ಸದಾ ತಾಯಿ ಲಕ್ಷ್ಮಿ ಹಾಗೂ ಧನ ಕುಬೇರನ ಕೃಪೆ ಇರಬೇಕೆ? ಈ ಸಲಹೆ ಅನುಸರಿಸಿ!

ವೃಶ್ಚಿಕ ರಾಶಿ: ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆಗಳಿವೆ. ದೊಡ್ಡ ಲಾಭದಾಯಕ ವ್ಯವಹಾರವು ನಿಮ್ಮ ಕೈಯಿಂದ ಜಾರಿಕೊಳ್ಳಬಹುದು. ವ್ಯಾಪಾರ ವರ್ಗಕ್ಕೆ ಈ ಸಮಯ ವಿರುದ್ಧವಾಗಿದೆ. ವೈವಾಹಿಕ ಜೀವನದಲ್ಲೂ ಸಮಸ್ಯೆಗಳು ಹೆಚ್ಚಾಗಬಹುದು. ಪತಿ-ಪತ್ನಿಯರ ನಡುವೆ ಮನಸ್ತಾಪ ಉಂಟಾಗಬಹುದು.

ಮಕರ ರಾಶಿ: ಶನಿಯ ಉದಯವು ಮಕರ ರಾಶಿಯವರಿಗೆ ತೊಂದರೆ ನೀಡುತ್ತದೆ. ಆಸ್ತಿ ವಿಚಾರದಲ್ಲಿ ಒಡಹುಟ್ಟಿದವರೊಂದಿಗೆ ವಿವಾದ ಉಂಟಾಗಬಹುದು. ಆರೋಗ್ಯವೂ ಅಸ್ಥಿರವಾಗಿರಬಹುದು. ವೃತ್ತಿಯಲ್ಲಿಯೂ ಕಷ್ಟಗಳನ್ನು ಎದುರಿಸಬಹುದು. ವ್ಯಾಪಾರ ಮತ್ತು ಉದ್ಯೋಗ ಸಂಬಂಧಿಸಿದಂತೆ ಸಮಸ್ಯೆಗಳು ಹೆಚ್ಚುತ್ತವೆ. ಶನಿಯ ಉದಯದ ನಂತರ ನೀವು ಹೆಚ್ಚು ಜಾಗರೂಕರಾಗಿರಬೇಕು.

ಮೀನ ರಾಶಿ: ಶನಿಯು ಉದಯಿಸಿದ ನಂತರ ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ವ್ಯರ್ಥ ಖರ್ಚು ಮಾಡುವುದನ್ನು ತಪ್ಪಿಸಿ. ಯಾವುದೇ ಕಾರಣವಿಲ್ಲದೆ ಹಣ ಖರ್ಚು ಮಾಡುವುದು ನಿಮ್ಮನ್ನು ಹಾಳುಮಾಡುತ್ತದೆ. ವ್ಯಾಪಾರ ಅಥವಾ ಉದ್ಯೋಗದಲ್ಲಿ ನೀವು ಪಡೆಯುವ ಲಾಭಗಳಲ್ಲಿ ಕುಸಿತ ಉಂಟಾಗಬಹುದು. ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು.  

ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ ಜೊತೆಗೆ ಧನಲಾಭವಾಗಲಿದೆ

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More