Home> Lifestyle
Advertisement

Child Problem: ಸಂತಾನ ಪ್ರಾಪ್ತಿಯ ದುರ್ಲಭ ಯೋಗ, ಸಂಕಷ್ಟ ಚತುರ್ಥಿಯಂದು ಈ ಉಪಾಯ ಮಾಡಲು ಮರೆಯಬೇಡಿ

Remedy To Get Child Problem - ಇಂದು ಸಂಕಷ್ಟ ಚತುರ್ಥಿ (Sankashta Chaturthi), ಈ ದಿನ ಅತ್ಯಂತ ಮಂಗಳಕರ ಯೋಗ ರೂಪಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಸಂತಾನ ಪ್ರಾಪ್ತಿ ಬಯಸುವವರು ಉಪವಾಸ (Fasting) ಮಾಡುವುದು ವಿಶೇಷ. ಇದಲ್ಲದೆ ಕೆಲ ವಿಶೇಷ ಉಪಾಯಗಳನ್ನು ಮಾಡುವ ಮೂಲಕ ಸಂತಾನ ಪ್ರಾಪ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಬಹುದು.

Child Problem: ಸಂತಾನ ಪ್ರಾಪ್ತಿಯ ದುರ್ಲಭ ಯೋಗ, ಸಂಕಷ್ಟ ಚತುರ್ಥಿಯಂದು ಈ ಉಪಾಯ ಮಾಡಲು ಮರೆಯಬೇಡಿ

ನವದೆಹಲಿ: Remedy To Get Child Problem - ಜೀವನದಲ್ಲಿಯ ಎಲ್ಲಾ ತೊಂದರೆಗಳು ಹಾಗೂ ಸಂಕಷ್ಟ ನಿವಾರಣೆಗಾಗಿ ಸಂಕಷ್ಟಿಯಂದು (Sankashta Chaturthi) ಉಪವಾಸ ವೃತವನ್ನು ಕೈಗೊಳ್ಳಲಾಗುತ್ತದೆ. ಇಂದಿನ ಸಂಕಷ್ಟಿಯಂದು ಎರಡು ಅತ್ಯಂತ ಮಂಗಳಕರ ಯೋಗಗಳು (Auspicious Yoga) ರೂಪುಗೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ, ಮಕ್ಕಳನ್ನು ಹೊಂದಲು ಬಯಕೆ ಇರುವವರಿಗೆ ಕೆಲವು ವಿಶೇಷ ಕ್ರಮಗಳು ಪ್ರಯೋಜನಕಾರಿಯಾಗಬಹುದು. ಮಕ್ಕಳ ದೀರ್ಘಾಯುಷ್ಯಕ್ಕಾಗಿ ಮತ್ತು ಅವರಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಸಂತಾನ ಸಮಸ್ಯೆ ನಿವಾರಣೆಯಾಗುತ್ತದೆ

ಸಂತಾನ ಪ್ರಾಪ್ತಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅಥವಾ ಮಗುವಿಗೆ ಯಾವುದೇ ರೀತಿಯ ತೊಂದರೆ ಇದ್ದರೆ, ಅದನ್ನು ಹೋಗಲಾಡಿಸಲು ಗಣೇಶನಿಗೆ (Lord Ganesh) ಕಪ್ಪು ಎಳ್ಳು ಮತ್ತು ಬೆಲ್ಲವನ್ನು ಅರ್ಪಿಸಿ. ಇದರ ನಂತರ, ಮಗುವಿನ ಆಸೆಯನ್ನು ಈಡೇರಿಸಲು ಗಣೇಶನನ್ನು ಪ್ರಾರ್ಥಿಸಿ.

ಮನೆಯಲ್ಲಿ ಅದೃಷ್ಟಕ್ಕಾಗಿ
ಮನೆಯ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು, ಗಣೇಶನನ್ನು ಪೂಜಿಸುವ ಸಮಯದಲ್ಲಿ, ತಾಮ್ರದ ಪಾತ್ರೆಯಲ್ಲಿ ಗಂಗಾಜಲವನ್ನು ತುಂಬಿಸಿ ಮತ್ತು ಅದರಲ್ಲಿ ವೀಳ್ಯದೆಲೆ ಇಡಿ. ಪೂಜೆಯ ನಂತರ, ಈ ನೀರನ್ನು ಮನೆಯಲ್ಲೆಲ್ಲಾ ಸಿಂಪಡಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂವಹನ ಉಂಟಾಗುತ್ತದೆ ಮತ್ತು ಅಪಶ್ರುತಿ ದೂರವಾಗುತ್ತದೆ.

ಮಗುವಿನ ದೀರ್ಘಾಯುಷ್ಯಕ್ಕಾಗಿ
ಮಗುವಿನ ದೀರ್ಘಾಯುಷ್ಯಕ್ಕಾಗಿ ನಿರ್ಜಲ ಉಪವಾಸವನ್ನು ಕೈಗೊಳ್ಳಿ. ಸಂಜೆ ದೇವರಿಗೆ ಪೂಜೆ ಸಲ್ಲಿಸಿದ ನಂತರ, ಬೆಲ್ಲ ಮತ್ತು ಎಳ್ಳಿನಿಂದ ಮಾಡಿದ ಭಕ್ಷ್ಯವನ್ನು ಅರ್ಪಿಸಿ. ಇದಾದ ನಂತರ, ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ, ಉಪವಾಸವನ್ನು ಮುರಿಯಿರಿ. ಹೀಗೆ ಮಾಡುವುದರಿಂದ ಮಗುವಿನ ದೀರ್ಘಾಯುಷ್ಯದ ಆಶೀರ್ವಾದ ಲಭಿಸುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ-Money Remedies: ಹಣದ ನಷ್ಟ ತಪ್ಪಿಸಿ ಆರ್ಥಿಕ ಪ್ರಗತಿ ಹೊಂದಲು ಸಹಾಯಕ ಕಪ್ಪು ಎಳ್ಳಿನ ಈ ಟ್ರಿಕ್ಸ್

ಗಣೇಶನನ್ನು ಹೇಗೆ ಮೆಚ್ಚಿಸಬೇಕು
ಕರಿಕೆ ಅಥವಾ ದುರ್ವಾ  ಗಣೇಶ್‌ಗೆ ತುಂಬಾ ಪ್ರಿಯ. ಇಂತಹ ಪರಿಸ್ಥಿತಿಯಲ್ಲಿ, ಶ್ರೀಗಣೇಶನನ್ನು ಮೆಚ್ಚಿಸಲು, ಪೂಜೆಯ ಸಮಯದಲ್ಲಿ, ನೀವು ಐದು ಗಂಟುಗಳ ಕರಿಕೆಯನ್ನು ಗಣೇಶನಿಗೆ  ಅರ್ಪಿಸಬೇಕು. ಇದಲ್ಲದೆ, ಗಣೇಶನಿಗೆ ಹಳದಿ ಹೂವುಗಳು ಮತ್ತು ಮೋದಕಗಳನ್ನು ಅರ್ಪಿಸಿ.

ಇದನ್ನೂ ಓದಿ-ಬೆಳ್ಳಿಯನ್ನು ಈ ರೀತಿಯಲ್ಲಿ ಬಳಸಿದರೆ, ಹೊಳೆಯುತ್ತದೆ ಅದೃಷ್ಟ, ಆದರೆ ಈ ರಾಶಿಯವರು ಬೆಳ್ಳಿಯಿಂದ ದೂರವಿರಿ

ಇಷ್ಟಾರ್ಥ ಸಿದ್ಧಿಗಾಗಿ ಏನು ಮಾಡಬೇಕು?
ಇಷ್ಟಾರ್ಥ ಸಿದ್ಧಿಗಾಗಿ ಬಲಭಾಗದಲ್ಲಿ ಸೊಂಡಿಲಿರುವ  ಗಣಪತಿಯನ್ನು ಪೂಜಿಸಿ. ಇದರ ಜೊತೆಗೆ, ಪೂಜೆಯ ಸಮಯದಲ್ಲಿ, ಕನಿಷ್ಠ 108 ಬಾರಿ ಓಂ ಗಣಪತಯೇ ನಮಃ ಮಂತ್ರ ಪಠಿಸಿ.

ಇದನ್ನೂ ಓದಿ-ಕಣ್ಣುಗಳೇ ಹೇಳುತ್ತದೆ ನಿಮ್ಮ ಅದೃಷ್ಟ , ಹೀಗಿದೆಯೇ ನಿಮ್ಮ ಅಕ್ಷಿ ಒಮ್ಮೆ ನೋಡಿಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More