Home> Lifestyle
Advertisement

ರಾತ್ರಿವೇಳೆ ನಿಮಗೂ ಇಂತಹ ಸಮಸ್ಯೆ ಇದೆಯೇ? ಇದು ರಾಹುವಿನ ಪ್ರಭಾವ ಇರಬಹುದು!

ಜಾತಕದಲ್ಲಿ ಶನಿ, ರಾಹು-ಕೇತುಗಳಂತಹ ಗ್ರಹಗಳು ಅಶುಭವಾಗಿದ್ದರೆ, ಪರಿಹಾರ ತೆಗೆದುಕೊಳ್ಳುವಲ್ಲಿ ವಿಳಂಬ ಮಾಡಬಾರದು.

ರಾತ್ರಿವೇಳೆ ನಿಮಗೂ ಇಂತಹ ಸಮಸ್ಯೆ ಇದೆಯೇ? ಇದು ರಾಹುವಿನ ಪ್ರಭಾವ ಇರಬಹುದು!

ನವದೆಹಲಿ: ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹವು ನಮ್ಮ ಜೀವನದ ಕೆಲವು ಅಂಶಗಳಿಗೆ ಸಂಬಂಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಜಾತಕದಲ್ಲಿ ಆ ಗ್ರಹದ ಶುಭ ಮತ್ತು ಅಶುಭ ಸ್ಥಾನವು ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವುದೇ ಗ್ರಹವು ಅಶುಭವಾಗಿದ್ದರೆ ಅದರ ಶಾಂತಿಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಆ ಗ್ರಹದಿಂದ ಉಂಟಾಗುವ ಕೆಟ್ಟ ಫಲಿತಾಂಶಗಳಿಂದ ಪರಿಹಾರ ಪಡೆಯಬಹುದು. ಜಾತಕದಲ್ಲಿ ಶನಿ, ರಾಹು-ಕೇತುಗಳಂತಹ ಗ್ರಹಗಳು ಅಶುಭವಾಗಿದ್ದರೆ, ಪರಿಹಾರ ತೆಗೆದುಕೊಳ್ಳುವಲ್ಲಿ ವಿಳಂಬ ಮಾಡಬಾರದು. ಇಲ್ಲದಿದ್ದರೆ ಜೀವನವು ತೊಂದರೆಗಳಿಂದ ಸುತ್ತುವರಿಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಕೆಟ್ಟ ರಾಹುವಿನ ಚಿಹ್ನೆಗಳು ಮತ್ತು ಅದರ ಕೆಟ್ಟ ಪರಿಣಾಮಗಳನ್ನುತೊಡೆದುಹಾಕುವ ಮಾರ್ಗಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಕೆಟ್ಟ ರಾಹು ಜೀವನದಲ್ಲಿ ದುಃಖ ತರುತ್ತಾನೆ!

ರಾಹುವು ಶುಭ ಫಲಿತಾಂಶಗಳನ್ನು ನೀಡಿದರೆ, ನಿಮ್ಮ ಜೀವನವು ರಾಜನಂತಿರುತ್ತದೆ. ಒಂದು ವೇಳೆ ರಾಹು ಅಶುಭ ಫಲಿತಾಂಶಗಳನ್ನು ನೀಡಿದರೆ ನಿಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಆದ್ದರಿಂದ, ಆದಷ್ಟು ಬೇಗ ಕೆಟ್ಟ ರಾಹುವನ್ನು ಗುರುತಿಸಿ, ಸಮಸ್ಯೆಗಳನ್ನು ತಪ್ಪಿಸಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಇದನ್ನೂ ಓದಿ: Astrology Tips: ಆರ್ಥಿಕ ಸಂಕಷ್ಟ ಕಾಡುತ್ತಿದೆಯೇ? ಲಕ್ಷ್ಮಿ ಕೃಪೆಗಾಗಿ ಮನೆಯ ಸುತ್ತ ಇರಲಿ ಈ 5 ಸಸ್ಯಗಳು

ಜಾತಕದಲ್ಲಿ ರಾಹು ನೀಚನಾಗಿದ್ದರೆ, ವ್ಯಕ್ತಿಯ ಸ್ವಭಾವವು ಕೆರಳಿದಂತಿರುತ್ತದೆ. ಈ ಸಂದರ್ಭದಲ್ಲಿ ಆ ವ್ಯಕ್ತಿ ಮನೆಯಲ್ಲಿ ನಿತ್ಯ ಜಗಳ ಮಾಡುತ್ತಲೇ ಇರುತ್ತಾನೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ರಾಹು ಸ್ಥಾನವು ತೊಂದರೆಗೊಳಗಾಗಿದ್ದರೆ, ಆ ಮನೆಯಲ್ಲಿ ಯಾವಾಗಲೂ ಜಗಳ ಮತ್ತು ಅಶಾಂತಿಯ ವಾತಾವರಣ ಇರುತ್ತದೆ. ಮನೆಯ ಜನರ ಪ್ರಗತಿ ನಿಲ್ಲುತ್ತದೆ. ಕೆಟ್ಟ ರಾಹು ನಿದ್ರಾಭಂಗವನ್ನುಂಟು ಮಾಡುತ್ತದೆ. ರಾತ್ರಿ ವೇಳೆ ಯಾವುದೇ ಕಾರಣವಿಲ್ಲದೆ ವ್ಯಕ್ತಿಗೆ  ಪದೇ ಪದೇ ನಿದ್ರಾ ಸಮಸ್ಯೆಯುಂಟಾಗುತ್ತದೆ. ಇಂತಹ ವ್ಯಕ್ತಿಗಳು ಅಪರಿಚಿತರ ಆತಂಕ ಮತ್ತು ಭಯದಿಂದ ಬದುಕುತ್ತಾರೆ. ಅಲ್ಲದೆ ಆಗಾಗ್ಗೆ ದುಃಸ್ವಪ್ನಗಳಿಗೆ ಒಳಗಾಗುತ್ತಾರೆ. ಇದರಿಂದ ಅವರು ಕುಡಿಯಲು ಪ್ರಾರಂಭಿಸುತ್ತಾರೆ ಮತ್ತು ರೋಗಗಳು ಅವರನ್ನು ಸುತ್ತುವರೆಯುತ್ತವೆ.

ರಾಹು ಬಲಪಡಿಸುವುದು ಹೇಗೆ..?

ಕೆಟ್ಟ ರಾಹುವನ್ನು ಬಲಪಡಿಸಲು ಹರಿಯುವ ನೀರಿನಲ್ಲಿ ಬೆಳ್ಳಿಯಿಂದ ಮಾಡಿದ 2 ಹಾವುಗಳನ್ನು ತೇಲುವಂತೆ ಮಾಡಿ. ಇದಲ್ಲದೇ ಮನೆಯಲ್ಲಿ ರಾಹು ಯಂತ್ರವನ್ನು ಪ್ರತಿಷ್ಠಾಪಿಸಿ ಪ್ರತಿನಿತ್ಯ ಪೂಜೆ ಮಾಡಿ. ಪದೇ ಪದೇ ನಿದ್ದೆಯ ಸಮಸ್ಯೆ ಕಾಡುತ್ತಿದ್ದರೆ ರಾತ್ರಿ ಮಲಗುವಾಗ ಸ್ವಲ್ಪ ಬಾರ್ಲಿಯನ್ನು ತಲೆಯ ಬಳಿ ಇಟ್ಟುಕೊಂಡು ಮಲಗಬೇಕು. ಬೆಳಗ್ಗೆ ಎದ್ದ ನಂತರ ಅಗತ್ಯವಿರುವವರಿಗೆ ಬಾರ್ಲಿಯನ್ನು ದಾನ ಮಾಡಿ. ಇದಲ್ಲದೆ ರಾಹುವಿನ ಬೀಜ ಮಂತ್ರದ 2 ರಿಂದ 3 ಜಪಮಾಲೆಗಳಿಂದ ‘ಓಂ ಭ್ರಂ ಭ್ರೌನ್ ಸಹ ರಾಹವೇ ನಮಃ’ ಮಂತ್ರವನ್ನು ಪ್ರತಿದಿನ ಪಠಿಸಿರಿ.

ಇದನ್ನೂ ಓದಿ: ಶಕುನ ಶಾಸ್ತ್ರ: ಮನೆಗೆ ಕಾಗೆ ಬರೋದು ಶುಭವೋ ಅಶುಭವೋ? ಧರ್ಮಗ್ರಂಥಗಳಲ್ಲಿ ಹೇಳಿರೋದು ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More