Home> Lifestyle
Advertisement

Pitru Paksha 2022: ಇಂದಿನಿಂದ ಪಿತೃಪಕ್ಷ ಆರಂಭ, ಈ ತಪ್ಪುಗಳನ್ನು ಮಾಡ್ಬೇಡಿ, ಮುಹೂರ್ತಗಳ ವಿವರ ಇಲ್ಲಿದೆ

Pitru Paksha 2022: ಶ್ರಾದ್ಧವು ಸೆಪ್ಟೆಂಬರ್ 10 ರಿಂದ ಆರಂಭಗೊಂದು ಸೆಪ್ಟೆಂಬರ್ 25 ರಂದು ಸರ್ವ ಪಿತೃ ಅಮವಾಸ್ಯೆಯಂದು ಕೊನೆಗೊಳ್ಳುತ್ತದೆ. ಸಾಮಾನ್ಯವಾಗಿ ಶ್ರಾದ್ಧವು 15 ದಿನಗಳವರೆಗೆ ಇರುತ್ತದೆ, ಆದರೆ ಈ ವರ್ಷ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಅದು 16 ದಿನಗಳವರೆಗೆ ಇರಲಿದೆ.

Pitru Paksha 2022: ಇಂದಿನಿಂದ ಪಿತೃಪಕ್ಷ ಆರಂಭ, ಈ ತಪ್ಪುಗಳನ್ನು ಮಾಡ್ಬೇಡಿ, ಮುಹೂರ್ತಗಳ ವಿವರ ಇಲ್ಲಿದೆ

Shradh 2022:  ಪಿತೃ ಪಕ್ಷ ಅಂದರೆ ಶ್ರಾದ್ಧ ಇಂದಿನಿಂದ ಆರಂಭವಾಗುತ್ತಿದೆ. ಶ್ರಾದ್ಧ ಪಕ್ಷವು 25 ಸೆಪ್ಟೆಂಬರ್ 2022 ರಂದು ಕೊನೆಗೊಳ್ಳಲಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಪಿತೃ ಪಕ್ಷವು ಪ್ರತಿ ವರ್ಷ ಭಾದ್ರಪದ ಹುಣ್ಣಿಮೆಯ ತಿಥಿಯಿಂದ ಆರಂಭಗೊಂಡು, ಅಶ್ವಿನ್ ಮಾಸದ ಕೃಷ್ಣ ಪಕ್ಷದ ಪ್ರತಿಪದದವರೆಗೆ ಇರುತ್ತದೆ. ಪಕ್ಷಮಾಸದಲ್ಲಿ ಕಾಗೆಗೆ ವಿಶೇಷ ಮಹತ್ವವಿದೆ. ಧರ್ಮಗ್ರಂಥಗಳಲ್ಲಿ ಕಾಗೆಯನ್ನು ಯಮರಾಜನ ಸಂಕೇತವೆಂದು ಪರಿಗಣಿಸಲಾಗಿದೆ. ಕಾಗೆಗೆ ತುಪ್ಪ ನೀಡಿದ ನಂತರ ಪೂರ್ವಜರು ತೃಪ್ತರಾಗುತ್ತಾರೆ. ಪಿತೃ ಪಕ್ಷದ ಈ 15 ದಿನಗಳಲ್ಲಿ ಪೂರ್ವಜರನ್ನು ಪೂಜಿಸಲಾಗುತ್ತದೆ, ತರ್ಪಣ ಮತ್ತು ಪಿಂಡದಾನ ಮಾಡಲಾಗುತ್ತದೆ. ಈ ಬಾರಿಯ ಶ್ರಾದ್ಧ 16 ದಿನಗಳವರೆಗೆ ಇರಲಿದೆ.

ಶ್ರಾದ್ಧd ಹಿಂದಿನ ನಂಬಿಕೆ ಏನು?

ಹಿಂದೂ ಧರ್ಮದಲ್ಲಿ ಪಿತೃ ಪಕ್ಷ ಅಂದರೆ ಶ್ರಾದ್ಧಕ್ಕೆ ವಿಶೇಷ ಮಹತ್ವವಿದೆ. ಪಿತೃ ಪಕ್ಷದ ಶ್ರಾದ್ಧ ಕರ್ಮದಲ್ಲಿ ಶ್ರದ್ಧಾಭಕ್ತಿಯಿಂದ ಪೂರ್ವಜರನ್ನು ಸ್ಮರಿಸಲಾಗುತ್ತದೆ. ಪೂರ್ವಜರ ವಿಮೋಚನೆಯ ಜೊತೆಗೆ, ಅವರ ಬಗ್ಗೆ ಒಬ್ಬರು ತಮ್ಮ ಗೌರವವನ್ನು ವ್ಯಕ್ತಪಡಿಸಲು ಶ್ರಾದ್ಧವನ್ನು ಸಹ ನಡೆಸಲಾಗುತ್ತದೆ. ಪಿತೃ ಪಕ್ಷದಲ್ಲಿ, ನಿಮ್ಮ ಪೂರ್ವಜರಿಗೆ ಪೂಜ್ಯಭಾವದಿಂದ ಜಾಲವನ್ನು ಅರ್ಪಿಸುವ ವಿಧಾನವಿದೆ.

ಶ್ರಾದ್ಧ ಏಕೆ ಅವಶ್ಯಕ?
ಯಾವುದೇ ಓರ್ವ ವ್ಯಕ್ತಿ ಮೃತಪಟ್ಟ ನಂತರದ ಒಂದು ವರ್ಷದ ಅವಧಿಯನ್ನು ಪ್ರತೀಕ್ಷಾ ಕಾಲ ಎಂದು ಪರಿಗಣಿಸಲಾಗುತ್ತದೆ. ಒಂದು ವರ್ಷದ ವರೆಗೆ ಶ್ರಾದ್ಧ ಆಚರಣೆಗಳನ್ನು ನಡೆಸಲಾಗುವುದಿಲ್ಲ. ಅದರ ನಂತರ ಶ್ರಾದ್ಧ ಮಾಡುವ ಮೂಲಕ ನಾವು ನಮ್ಮ ಪೂರ್ವಜರಿಗೆ ನಮನ ಸಲ್ಲಿಸುತ್ತೇವೆ. ಪಿತೃ ಪಕ್ಷದಲ್ಲಿ ನಮ್ಮ ಪೂರ್ವಜರು ಮನೆ ಬಾಗಿಲಿಗೆ ಬರುತ್ತಾರೆ ಎಂಬ ನಂಬಿಕೆ ಇದೆ. ಶ್ರಾದ್ಧವನ್ನು ಮೂರು ತಲೆಮಾರುಗಳವರೆಗೆ ನಡೆಸಲಾಗುತ್ತದೆ. ಇದರಲ್ಲಿ ಮಾತೃಕುಲ ಮತ್ತು ಪಿತೃಕುಲ (ತಂದೆ ಕಡೆಯಿಂದ ಅಜ್ಜ ಮತ್ತು ತಾಯಿ ಕಡೆಯಿಂದ ಅಜ್ಜ) ಎರಡೂ ಶಾಮೀಲಾಗಿವೆ. ಮೂರು ತಲೆಮಾರುಗಳಿಗಿಂತ ಹೆಚ್ಚು ಕಾಲ ಶ್ರಾದ್ಧವನ್ನು ಮಾಡಲಾಗುವುದಿಲ್ಲ. ತರ್ಪಣ, ದಾನ, ಅನ್ನ, ಭವಾಂಜಲಿ, ತಿಲಾಂಜಲಿ ರೂಪದಲ್ಲಿ ಶ್ರಾದ್ಧ ಮಾಡುವುದು ವಾಡಿಕೆ ಇದೆ. ಪೂರ್ವಜರ ಹೆಸರಿನಲ್ಲಿ ಆಹಾರ ತೆಗೆದಿಡುವ ಮುನ್ನ ಹಸು, ಕಾಗೆ, ನಾಯಿಯ ಭಾಗವನ್ನು ತೆಗೆದಿಡಲಾಗುತ್ತದೆ.

ಸೂರ್ಯೋದಯದ ನಂತರ ತರ್ಪಣ ವಿಧಿ ನಡೆಸಲಾಗುತ್ತದೆ
ಸೂರ್ಯ ಚೆನ್ನಾಗಿ ಉದಯಿಸಿದಾಗ ಶ್ರಾದ್ಧ ಮತ್ತು ತರ್ಪಣ ಮಾಡಬೇಕು ಎಂಬ ವಿಧಾನವಿದೆ. ಇದಕ್ಕಾಗಿ ಬೆಳಗ್ಗೆ 11.30 ರಿಂದ ಮಧ್ಯಾಹ್ನ 12.30 ರ ನಡುವಿನ ಸಮಯವನ್ನು ಸೂಕ್ತ ಸಮಯವೆಂದು ಪರಿಗಣಿಸಲಾಗುತ್ತದೆ. ಸೂರ್ಯಾಸ್ತದ ನಂತರ ತರ್ಪಣ ಮತ್ತು ಶ್ರಾದ್ಧ ನಡೆಸಲಾಗುವುದಿಲ್ಲ.

ಪಿತೃ ದೋಷ ಏಕೆ ತಗುಲುತ್ತದೆ?
1. ವ್ಯಕ್ತಿಯ ಮರಣದ ನಂತರ, ವಿಧಿ ವಿಧಾನಗಳ ಮೂಲಕ ಅಂತಿಮ ವಿಧಿ ನಡೆಸದೆ ಹೋದರೆ, ನಂತರ ಪಿತ್ರ ದೋಷ ತಗುಲುತ್ತದೆ.

2. ಅಕಾಲಿಕ ಮರಣದ ಸಂದರ್ಭದಲ್ಲಿ, ಕುಟುಂಬದ ಸದಸ್ಯರು ಅನೇಕ ತಲೆಮಾರುಗಳವರೆಗೆ ಪಿತ್ರಾ ದೋಷವನ್ನು ಎದುರಿಸಬೇಕಾಗುತ್ತದೆ, ಅಕಾಲಿಕ ಮರಣದ ಸಂದರ್ಭದಲ್ಲಿ, ಪಿತ್ರ ಶಾಂತಿ ಪೂಜೆಯನ್ನು ಮಾಡುವುದು ಅಗತ್ಯವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ-Panchak September 2022: ನಾಳೆಯಿಂದ 'ಚೋರ ಪಂಚಕ' ಆರಂಭ, ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ!

3. ಪೋಷಕರ ಅಗೌರವ, ಸಂಬಂಧಿಕರ ಮರಣದ ನಂತರ ಪಿಂಡದಾನ, ತರ್ಪಣ, ಶ್ರಾದ್ಧ ಮಾಡದಿದ್ದರೆ ಇಡೀ ಕುಟುಂಬವೇ ಪಿತೃ ದೋಷಕ್ಕೆ ಗುರಿಯಾಗುತ್ತದೆ. ಪೂರ್ವಜರನ್ನು ಅವಮಾನಿಸುವುದು, ಅಸಹಾಯಕರನ್ನು ಕೊಲ್ಲುವುದು, ಅಶ್ವತ್ಥ, ಬೇವು ಮತ್ತು ಆಲದ ಮರಗಳನ್ನು ಕಡಿಯುವುದು, ತಿಳಿದೋ ತಿಳಿಯದೆಯೋ ಹತ್ಯೆ ಮಾಡುವುದು ಅಥವಾ ಮಾಡಿಸುವುದು ಪಿತೃ ದೋಷಕ್ಕೆ ಕಾರಣವಾಗುತ್ತವೆ.

ಇದನ್ನೂ ಓದಿ-Pitru Paksha : ಹೆಣ್ಣು ಮಕ್ಕಳೂ ಶ್ರಾದ್ಧ ಕರ್ಮ ಮಾಡಬಹುದೇ! ಧರ್ಮಗ್ರಂಥ ಏನು ಹೇಳುತ್ತೆ?

ಪಿತೃ ಪಕ್ಷದಲ್ಲಿ ಶ್ರಾದ್ಧ 2022 ರ ದಿನಾಂಕಗಳ ಪಟ್ಟಿ ಇಂತಿದೆ
10 ಸೆಪ್ಟೆಂಬರ್  ಹುಣ್ಣಿಮೆ ಶ್ರಾದ್ಧ
11 ಸೆಪ್ಟೆಂಬರ್ ಪ್ರತಿಪದ ಶ್ರಾದ್ಧ
12 ಸೆಪ್ಟೆಂಬರ್ ದ್ವಿತೀಯಾ ಶ್ರಾದ್ಧ
12 ಸೆಪ್ಟೆಂಬರ್ ತೃತೀಯಾ ಶ್ರಾದ್ಧ
13 ಸೆಪ್ಟೆಂಬರ್ ಚತುರ್ಥಿಯ ಶ್ರಾದ್ಧ
14 ಸೆಪ್ಟೆಂಬರ್ ಪಂಚಮಿ ಶ್ರಾದ್ಧ
15 ಸೆಪ್ಟೆಂಬರ್ ಷಷ್ಠಿ  ಶ್ರಾದ್ಧ
16 ಸೆಪ್ಟೆಂಬರ್ ಸಪ್ತಮಿ ಶ್ರಾದ್ಧ
18 ಸೆಪ್ಟೆಂಬರ್ ಅಷ್ಟಮಿ ಶ್ರಾದ್ಧ
19 ಸೆಪ್ಟೆಂಬರ್ ನವಮಿ ಶ್ರಾದ್ಧ
20 ಸೆಪ್ಟೆಂಬರ್ ದಶಮಿಯ ಶ್ರಾದ್ಧ
21 ಸೆಪ್ಟೆಂಬರ್ ಏಕಾದಶಿಯ ಶ್ರಾದ್ಧ
22 ಸೆಪ್ಟೆಂಬರ್ ದ್ವಾದಶಿ/ಸಂನ್ಯಾಸಿಗಳ ಶ್ರಾದ್ಧ
23 ಸೆಪ್ಟೆಂಬರ್ ತ್ರಯೋದಶಿ ಶ್ರಾದ್ಧ
24 ಸೆಪ್ಟೆಂಬರ್ ಚತುರ್ದಶಿ ಶ್ರಾದ್ಧ
25 ಸೆಪ್ಟೆಂಬರ್ ಅಮವಾಸ್ಯೆ ಶ್ರಾದ್ಧ (ಸರ್ವ ಪಿತ್ರ ಶ್ರಾದ್ಧ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More