Home> Lifestyle
Advertisement

ಮನೆಯ ಈ ದಿಕ್ಕಿನಲ್ಲಿ ಸ್ಥಾಪಿಸಿದ ನವಿಲುಗರಿ ಹಣಕಾಸಿನ ಮುಗ್ಗಟ್ಟು ದೂರಾಗಿಸುತ್ತೆ!

Peacock Feather Benefits: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಮನೆಯ ಹಣಕಾಸಿನ ಮುಗ್ಗಟ್ಟು ದೂರಾಗುತ್ತದೆ ಎನ್ನಲಾಗುತ್ತದೆ, ನವಿಲು ಗರಿಯು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ ಎನ್ನಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನವಿಲು ಗರಿಗಳ ಪ್ರಯೋಜನಗಳು ಮತ್ತು ಅದರ ಸರಿಯಾದ ದಿಕ್ಕಿನ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ.
 

ಮನೆಯ ಈ ದಿಕ್ಕಿನಲ್ಲಿ ಸ್ಥಾಪಿಸಿದ ನವಿಲುಗರಿ ಹಣಕಾಸಿನ ಮುಗ್ಗಟ್ಟು ದೂರಾಗಿಸುತ್ತೆ!

ಬೆಂಗಳೂರು: ವಾಸ್ತು ಶಾಸ್ತ್ರದ ಪ್ರಕಾರ, ನವಿಲು ಗರಿ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ. ಈ ಗರಿಯು ಎಷ್ಟು ಸುಂದರವಾಗಿದೆಯೋ, ಅದರ ವೈಭವವು ಅಷ್ಟೇ ವಿಭಿನ್ನವಾಗಿದೆ. ಶ್ರೀಕೃಷ್ಣನ ಕಿರೀಟದ ಮೇಲಿರುವ ನವಿಲು ಗರಿಯು ಮನೆಯಲ್ಲಿನ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಇಂದಿನ ಲೇಖನದಲ್ಲಿ ನಾವು ನಿಮಗೆ ಮನೆಯಲ್ಲಿ ನವಿಲು ಗರಿಗಳನ್ನು (Lifestyle News In Kannada) ಇರಿಸುವುದರಿಂದಾಗುವ ಲಾಭಗಳೇನು ಎಂಬುದನ್ನು ಹೇಳಿಕೊಡುತ್ತಿದ್ದೇವೆ. ಇದರೊಂದಿಗೆ, ನವಿಲು ಗರಿಗಳ ದಿಕ್ಕಿನ ಬಗ್ಗೆಯೂ ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. 

ನವಿಲು ಗರಿಗಳ ಪ್ರಯೋಜನಗಳು

>> ಮನೆಯಲ್ಲಿ ನವಿಲು ಗರಿಗಳನ್ನು ಇರಿಸುವುದರಿಂದ ಸಂಪತ್ತಿನ ಅಧಿದೇವತೆ ಲಕ್ಷ್ಮಿ ಮತ್ತು ವಿದ್ಯೆಯ ಅಧಿದೇವತೆ ಸರಸ್ವತಿ ಇಬ್ಬರೂ ಮನೆಯಲ್ಲಿ ನೆಲೆಸುತ್ತಾರೆ ಎನ್ನಲಾಗುತ್ತದೆ.
>> ಮನೆಯಲ್ಲಿ ನವಿಲು ಗರಿಗಳನ್ನು ಕೊಳಲಿನ ಜೊತೆಗೆ ಇರಿಸಿಕೊಂಡರೆ, ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ.
>> ದಾಂಪತ್ಯ ಜೀವನದಲ್ಲಿ ಟೆನ್ಷನ್ ಇದ್ದರೆ ಮಲಗುವ ಕೋಣೆಯಲ್ಲಿ ನವಿಲು ಗರಿಗಳನ್ನು ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಪತಿ-ಪತ್ನಿಯರ ಜೀವನದಲ್ಲಿ ಮಧುರತೆ ಹೆಚ್ಚಾಗುತ್ತೆ.
>> ಯಾರಾದರೂ ನಿಮ್ಮ ಶತ್ರುಗಳಾಗಿದ್ದರೆ ಅಥವಾ ಯಾರೊಂದಿಗಾದರೂ ದ್ವೇಷವನ್ನು ಕೊನೆಗೊಳಿಸಲು ಬಯಸುತ್ತಿದ್ದರೆ, ನಂತರ ನವಿಲಿನ ಗರಿಗಳ ಮೇಲೆ ಹನುಮಂತನ ತಲೆಯ ಸಿಂಧೂರದಿಂದ ಶತ್ರುವಿನ ಹೆಸರನ್ನು ಬರೆಯಿರಿ ಮತ್ತು ಆ ನವಿಲು ಗರಿಯನ್ನು ಮಂಗಳವಾರ ಮತ್ತು ಶನಿವಾರದಂದು ರಾತ್ರಿ ಪೂಜಾ ಸ್ಥಳದಲ್ಲಿ ಇರಿಸಿ. ಮಾರನೆಯ ದಿನ ಬೆಳಗ್ಗೆ ನವಿಲು ಗರಿಯನ್ನು ನೀರಿನಲ್ಲಿ ತೇಲಿಬಿಡಿ. ಹೀಗೆ ಮಾಡುವುದರಿಂದ ದ್ವೇಷ ಕೊನೆಗೊಳ್ಳುತ್ತದೆ.
>> ನೀವು ನಿಮ್ಮ ಜಾತಕದಲ್ಲಿ ಗ್ರಹಗಳ ಅಶುಭ ಪರಿಣಾಮಗಳನ್ನು ತೊಡೆದುಹಾಕಲು ಬಯಸುತ್ತಿದ್ದರೆ, ಸಂಬಂಧಿಸಿದ ಗ್ರಹದ ಮಂತ್ರವನ್ನು 21 ಬಾರಿ ಜಪಿಸುವುದರ ಮೂಲಕ, ನವಿಲು ಗರಿಗಳ ಮೇಲೆ ನೀರನ್ನು ಸಿಂಪಡಿಸಿ ಮತ್ತು ಸ್ಪಷ್ಟವಾಗಿ ಗೋಚರಿಸುವ ಸ್ಥಳದಲ್ಲಿ ಅದನ್ನು ಸ್ಥಾಪಿಸಿ. ಹೀಗೆ ಮಾಡುವುದರಿಂದ ಗ್ರಹಗಳ ಅಶುಭ ಪರಿಣಾಮಗಳು ಅಂತ್ಯವಾಗುತ್ತದೆ.
>> ನಿಮ್ಮ ಮಗುವನ್ನು ಕೆಟ್ಟ ದೃಷ್ಟಿಯಿಂದ ರಕ್ಷಿಸಲು ನೀವು ಬಯಸುತ್ತಿದ್ದರೆ, ನವಿಲು ಗರಿಯನ್ನು ಬೆಳ್ಳಿಯ ತಾಯಿತದಲ್ಲಿ ಧರಿಸಬೇಕು.

ಇದನ್ನೂ ಓದಿ-ಈ ಜನರ ಸ್ಪರ್ಶದಿಂದ ಮಣ್ಣು ಕೂಡ ಹೊನ್ನಾಗುತ್ತದೆ, ಕಾರಣ ತುಂಬಾ ರೋಚಕವಾಗಿದೆ!

ನವಿಲು ಗರಿಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದಕ್ಷಿಣ ದಿಕ್ಕಿನ ತಿಜೋರಿಯಲ್ಲಿ ನಿಂತಿರುವ ನವಿಲು ಗರಿಗಳನ್ನು ಇದ್ರಿಸಿದರೆ, ಹಣದ ಕೊರತೆ ಇರುವುದಿಲ್ಲ. ಇದಲ್ಲದೆ, ನೀವು ರಾಹುವಿನ ದೋಷವನ್ನು ತೆಗೆದುಹಾಕಲು ಬಯಸಿದರೆ, ಅದನ್ನು ಪೂರ್ವ ಮತ್ತು ವಾಯುವ್ಯ ದಿಕ್ಕಿನಲ್ಲಿ ಇರಿಸಿ. ಮನೆಯ ಪೂರ್ವ ಮತ್ತು ವಾಯುವ್ಯ ಗೋಡೆಗಳ ಮೇಲೆ ನವಿಲು ಗರಿಗಳನ್ನು ಇರಿಸಿದರೆ, ರಾಹುವಿನ ಅಡೆತಡೆ ದೂರಾಗುತ್ತದೆ ಎನ್ನಲಾಗುತ್ತದೆ. ಇದರಿಂದ ಮನೆಯ ಸದಸ್ಯರ ಆರೋಗ್ಯವೂ ಉತ್ತಮವಾಗಿರುತ್ತದೆ. 

ಇದನ್ನೂ ಓದಿ-ಇಪ್ಪತ್ನಾಲ್ಕು ಗಂಟೆಗಳಲ್ಲಿ ನಿಮ್ಮನ್ನು ಸಾಹುಕಾರನನ್ನಾಗಿಸುತ್ತವೆ ಅರಿಶಿನದ ಈ ಉಪಾಯಗಳು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More