Home> Lifestyle
Advertisement

ಮೌನಿ ಅಮವಾಸ್ಯೆಯ ದಿನ ಈ ಕೆಲಸಗಳನ್ನು ಮಾಡಿದರೆ, ಪಿತೃ ದೋಷ ನಿವಾರಣೆಯಾಗುತ್ತದೆ

Mauni Amavasya 2022: ಮಾಘ ಮಾಸದ ಅಮವಾಸ್ಯೆಯು ಪಿತೃ  ದೋಷ ನಿವಾರಣೆಗೆ ವಿಶೇಷವಾಗಿರುತ್ತದೆ. ಪಿತೃ ದೋಷ ನಿವಾರಣೆಗೆ ಮತ್ತು ಪಿತೃಗಳ ಅನುಗ್ರಹವನ್ನು ಪಡೆಯಲು ಈ ದಿನ ಬಹಳ ಮುಖ್ಯವಾಗಿರುತ್ತದೆ.

ಮೌನಿ ಅಮವಾಸ್ಯೆಯ ದಿನ ಈ ಕೆಲಸಗಳನ್ನು ಮಾಡಿದರೆ, ಪಿತೃ ದೋಷ ನಿವಾರಣೆಯಾಗುತ್ತದೆ

ನವದೆಹಲಿ : Mauni Amavasya 2022: ಮಾಘ ಮಾಸದ ಅಮವಾಸ್ಯೆಯು ಪಿತೃ  ದೋಷ ನಿವಾರಣೆಗೆ ವಿಶೇಷವಾಗಿರುತ್ತದೆ. ಪಿತೃ ದೋಷ ನಿವಾರಣೆಗೆ ಮತ್ತು ಪಿತೃಗಳ ಅನುಗ್ರಹವನ್ನು ಪಡೆಯಲು ಈ ದಿನ ಬಹಳ ಮುಖ್ಯವಾಗಿರುತ್ತದೆ. ಮಾಘ ಕೃಷ್ಣ ಪಕ್ಷದ ಅಮವಾಸ್ಯೆಯನ್ನು ಮೌನಿ ಅಮಾವಾಸ್ಯೆ (Mauni Amavasya) ಎಂದು ಕರೆಯಲಾಗುತ್ತದೆ. ಈ ದಿನದಂದು ಪೂರ್ವಜರ ಕೃಪೆಗೆ ಪಾತ್ರರಾಗಲು ತರ್ಪಣ ಬಿಡುವುದು,  ಪಿಂಡ ಪ್ರದಾನ ಮಾಡುವ ಸಂಪ್ರದಾಯವಿದೆ. ಇತರ ಅಮವಾಸ್ಯೆಗಳಿಗೆ ಹೋಲಿಸಿದರೆ, ಮೌನಿ ಅಮವಾಸ್ಯೆಯು ಪಿತೃ ದೋಷವನ್ನು (pitru dosha) ತೊಡೆದುಹಾಕಲು ವಿಶೇಷವಾಗಿರುತ್ತದೆ. ಈ ಬಾರಿಯ ಮೌನಿ ಅಮವಾಸ್ಯೆ ಫೆಬ್ರವರಿ 1ರಂದು ಇರಲಿದೆ. ಮೌನಿ ಅಮಾವಾಸ್ಯೆಯ ದಿನ ಕೆಲವು ಕ್ರಮಗಳನ್ನು ಕೈಗೊಂಡರೆ,  ಪಿತೃದೋಷದಿಂದ ಮುಕ್ತಿ ಸಿಗುತ್ತದೆ ಎನ್ನುವುದು ನಂಬಿಕೆ. 

ಪಿತೃ ದೋಷ- ನಿವಾರಣೆಗೆ ಇರುವ ಪರಿಹಾರಗಳು :

1. ಮೌನಿ ಅಮಾವಾಸ್ಯೆಯ ದಿನ ಹಿಟ್ಟಿನಲ್ಲಿ ಸಕ್ಕರೆ (Sugar) ಬೆರೆಸಿ, ಇರುವೆಗಳಿಗೆ ತಿನ್ನಿಸಿದರೆ ಪಿತೃ (pitru dosha) ದೋಷ ನಿವಾರಣೆಯಾಗುತ್ತದೆ. ಮೌನಿ ಅಮಾವಾಸ್ಯೆಯ ದಿನದಂದು ಕರಿ ಎಳ್ಳು ಲಡ್ಡು, ಎಳ್ಳೆಣ್ಣೆ, ಕಂಬಳಿ, ನೆಲ್ಲಿಕಾಯಿ (Amla) ಮತ್ತು ಕಪ್ಪು ಬಟ್ಟೆಗಳನ್ನು ದಾನ ಮಾಡಬೇಕು. ಇದು ಪಿತೃ ದೋಷವನ್ನು ಶಮನಗೊಳಿಸುತ್ತದೆ. ಮಾಘ ಅಮಾವಾಸ್ಯೆಯಂದು ನದಿಯಲ್ಲಿ ಸ್ನಾನ ಮಾಡಿದ ನಂತರ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ. ಪಿತೃಗಳು ಸಂತುಷ್ಟರಾದರೆ, ಪಿತೃ  ದೋಷದಿಂದ ಮುಕ್ತಿ ಸಿಗುತ್ತದೆ. 

ಇದನ್ನೂ ಓದಿ :ಇವರು ಜೀವನದ ಪ್ರತಿ ಸಂತೋಷವನ್ನು ಅನುಭವಿಸುತ್ತಾರೆ, ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ, ನೀವೊಮ್ಮೆ ಪರಿಶೀಲಿಸಿಕೊಳ್ಳಿ

2. ಪಿತೃ ದೋಷದಿಂದ ಮುಕ್ತಿ ಹೊಂದಲು ಮೌನಿ ಅಮವಾಸ್ಯೆಯಂದು (Mauni Amavasya) ಪೂರ್ವಜರನ್ನು ಸ್ಮರಿಸಿ, ಸೂರ್ಯನಿಗೆ ನೀರನ್ನು ಅರ್ಪಿಸಬೇಕು. ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು, ಅದರಲ್ಲಿ ಕೆಂಪು ಹೂವುಗಳು ಮತ್ತು ಕಪ್ಪು ಎಳ್ಳನ್ನು ಬೆರೆಸಿ,  ಪೂರ್ವಜರನ್ನು ಧ್ಯಾನಿಸುತ್ತಾ, ಸೂರ್ಯ ದೇವರಿಗೆ (Sun god) ನೀರನ್ನು ಅರ್ಪಿಸಬೇಕು. ಅಲ್ಲದೆ, ಈ ದಿನ ಅಶ್ವತ ಮರದ ಬಳಿ, ಬಿಳಿ ಬಣ್ಣದ ಸಿಹಿ ತಿಂಡಿಯನ್ನು ಇರಿಸಿ, ಅಶ್ವತ ಮರಕ್ಕೆ 108 ಬಾರಿ ಪ್ರದಕ್ಷಿಣೆ ಹಾಕಬೇಕು.  

3. ಮನೆಯ ದಕ್ಷಿಣ ದಿಕ್ಕಿನಲ್ಲಿ ಬಿಳಿ ಬಟ್ಟೆ ಮತ್ತು ಕಪ್ಪು ಎಳ್ಳನ್ನು ಇರಿಸಿ. ಅದರ ಮೇಲೆ ಹಿತ್ತಾಳೆ-ತಾಮ್ರದ ಪಿತೃ ಯಂತ್ರವನ್ನು ಇರಿಸಿ. ಎಳ್ಳೆಣ್ಣೆಯ ದೀಪವನ್ನು ಹಚ್ಚಿ. ಒಂದು ಲೋಟ ನೀರನ್ನು  ಮಧ್ಯದಲ್ಲಿ ಇರಿಸಿ. ಒಂದು ಪ್ಲೇಟ್ ಇಟ್ಟು, ನಂತರ ಎಳ್ಳು ಮತ್ತು ಅನ್ನವನ್ನು (Rice) ಹಾಕಿ. ಅನ್ನದ ಮೇಲೆ ತುಳಸಿ ಎಲೆಗಳನ್ನು ಕೂಡಾ ಹಾಕಿ. ನಂತರ ಶ್ರೀಗಂಧ ಮತ್ತು ಬಿಳಿ ಹೂವುಗಳನ್ನು ಅರ್ಪಿಸಿ. ನಂತರ ಎಳ್ಳು ಅನ್ನವನ್ನು ಕಾಗೆಗಳಿಗೆ ಇಡಿ. ಹೀಗೆ ಮಾಡುವಾಗ ಸ್ವಲ್ಪ ಭಾಗವನ್ನು ಅಶ್ವತ ಮರದ ಕೆಳಗೆ ಇಡುವುದನ್ನು ಮರೆಯಬೇಡಿ. ಇನ್ನು ಮುಖ್ಯವಾದ ವಿಚಾರವೆಂದರೆ, ಈ ಎಲ್ಲಾ ಕೆಲಸಗಳನ್ನು ಮಾಡುವಾಗ ಮೌನ ವೃತದಲ್ಲಿರಬೇಕು.  

ಇದನ್ನೂ ಓದಿ : Shukra Rashi Parivartan: ಈ ರಾಶಿಯವರಿಗೆ ಆರಂಭವಾಗಲಿದೆ ಒಳ್ಳೆಯ ಸಮಯ

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More