Home> Lifestyle
Advertisement

Makar Sankranti 2021: ಸಂಕ್ರಾಂತಿಯ ದಿನ ಈ ಶುಭ ಯೋಗ ನಿರ್ಮಾಣ, 6 ರಾಶಿಯ ಜನರಿಗೆ ಮಹಾಲಾಭ

Makar Sankranti 2021: 14 ಜನವರಿಗೆ ಈ ಬಾರಿ ಮಕರ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತಿದೆ. ಈ ದಿನ ಶ್ರವಣ ನಕ್ಷತ್ರದಲ್ಲಿ ಸೂರ್ಯ ಮಕರ ರಾಶಿ ಪ್ರವೇಶಿಸುತ್ತಾನೆ. 

Makar Sankranti 2021: ಸಂಕ್ರಾಂತಿಯ ದಿನ ಈ ಶುಭ ಯೋಗ ನಿರ್ಮಾಣ, 6 ರಾಶಿಯ ಜನರಿಗೆ ಮಹಾಲಾಭ

Makar Sankranti 2021: 14 ಜನವರಿಗೆ ಈ ಬಾರಿ ಮಕರ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತಿದೆ. ಈ ದಿನ ಶ್ರವಣ ನಕ್ಷತ್ರದಲ್ಲಿ ಸೂರ್ಯ ಮಕರ ರಾಶಿ ಪ್ರವೇಶಿಸುತ್ತಾನೆ. ಈ ವೇಳೆ ಧ್ವಜ ಯೋಗ ನಿರ್ಮಾಣಗೊಳ್ಳಲಿದೆ. ಈ ವಿಶಿಷ್ಟ ಯೋಗ ಹಲವು ಜಾತಕದ ಜನರಿಗೆ ಶುಭಫಲಗಳನ್ನು ನೀಡಲಿದೆ. ಈ ಬಾರಿ ಸಂಕ್ರಾಂತಿಯಂದು ಬೆಳಗ್ಗೆ 8.15 ಕ್ಕೆ ಸೂರ್ಯ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದೆ ದಿನ ಶ್ರವಣ ನಕ್ಷತ್ರ ಬಂದಿರುವ ಕಾರಣ ಈ ದಿನದ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಸೂರ್ಯನ ಮಕರ ರಾಶಿ ಪ್ರವೇಶದ ಮೊಲಕ ಮಕರ ಸಂಕ್ರಾಂತಿಯ ದಿನ 5 ಗ್ರಹಗಳ ಶುಭಯೋಗ ಸೃಷ್ಟಿಯಾಗಲಿದೆ. ಇದರಲ್ಲಿ ಸೂರ್ಯ, ಬುಧ, ಚಂದ್ರ ಹಾಗೂ ಚಂದ್ರ ಶಾಮೀಲಾಗಿವೆ. ಹಾಗಾದರೆ ಬನ್ನಿ ಯಾವ ರಾಶಿಗಳ ಮೇಲೆ ಈ ಶುಭಯೋಗ ಪ್ರಭಾವ ಬೀರಲಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.

ಮೇಷ: ಮಕರ ಸಂಕ್ರಾಂತಿಯನ್ನು (Makar Sankranti) ನಿರ್ಮಾಣಗೊಳ್ಳುತ್ತಿರುವ ಈ ಶುಭಯೋಗದ ಶುಭ ಪ್ರಭಾವ ಮೇಷರಾಶಿಯ ಜನರ ಮೇಲೆ ಬೀಳಲಿದೆ. ಇದರ ಪ್ರಭಾವದಿಂದ ಮೇಷರಾಶಿಯ ಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ ಹಾಗೂ ಧನಾಗಮನದ ದಾರಿ ತೆರೆದುಕೊಳ್ಳಲಿವೆ. ಹಿರಿಯರ ಆಶೀರ್ವಾದ ಲಭಿಸಿ ಕೆಲಸದಲ್ಲಿನ ಅಡೆತಡೆಗಳು ದೂರವಾಗಲಿವೆ.

ಇದನ್ನು ಓದಿ- ಈ ಗ್ರಾಮದಲ್ಲಿ ರಾತ್ರಿ ಹೊತ್ತಲ್ಲಿ 'ಗಾಳಿಪಟ' ಹಾರಿಸಲು ಕಾರಣ...

ಕರ್ಕ: ಮಕರ ಸಂಕ್ರಾಂತಿಯಂದು ನಿರ್ಮಾಣಗೊಳ್ಳುತ್ತಿರುವ ಶುಭ ಯೋಗ ಕರ್ಕ ರಾಶಿಯ ಜಾತಕದವರಿಗೆ ಮಹಾಲಾಭ ನೀಡಲಿದೆ. ಈ ಜನರ ವ್ಯಾಪಾರದಲ್ಲಿ ವೃದ್ಧಿಯಾಗಲಿದೆ. ಮಹಿಳೆಯರಿಗೆ ಧನಪ್ರಾಪ್ತಿಯ ಯೋಗ ಕೂಡ ಇದೆ. ದಾಂಪತ್ಯ ಜೀವನ ಖುಷಿಯಿಂದ ತುಂಬಿರಲಿದೆ. ಸಂತಸದ ಸುದ್ದಿ ಸಿಗುವ ಸಾಧ್ಯತೆ ಇದೆ. ಆಕಸ್ಮಿಕ ಧನಾಗಮನದ ಯೋಗ ಇದೆ.

ಕನ್ಯಾ: ಕನ್ಯಾ ರಾಶಿಯ ಜಾತಕ ಹೊಂದಿದವರ್ಗೂ ಕೂಡ ಈ ಯೋಗ ಶುಭ ಸಾಬೀತಾಗಲಿದೆ. ಈ ರಾಶಿಯ ಜಾತಕದವರ ಗೌರವ ಹೆಚ್ಚಾಗಲಿದೆ. ಪದೋನ್ನತಿಯ ಯೋಗ ಕೂಡ ಇದೆ. ಇದರಿಂದ ನಿಮ್ಮ ಆದಾಯ ಕೂಡ ಹೆಚ್ಚಾಗಲಿದೆ. ಕುಟುಂಬ ಸದಸ್ಯರಿಂದ ಸಪೋರ್ಟ್ ಸಿಗಲಿದೆ. ಸಾಲ ತೀರಿಸಲು ಇದು ಸರಿಯಾದ ಸಮಯವಲ್ಲ.

ಇದನ್ನು ಓದಿ- ಮಕರ ಸಂಕ್ರಾಂತಿ ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು ?

ತುಲಾ: ಈ ರಾಶಿಯ ಜಾತಕ ಹೊಂದಿದವರಿಗೂ ಕೂಡ ಈ ಯೋಗ ಶುಭಫಲಗಳನ್ನು ನೀಡಲಿದೆ. ಧನ ಪ್ರಾಪ್ತಿಯ ವಿಷಯದಲ್ಲಿ ಈ ದಿನ ನಿಮಗೆ ಲಕ್ಕಿ ಸಾಬೀತಾಗುವ ಸಾಧ್ಯತೆ ಇದೆ. ನಿಂತುಹೋದ ಹಣ ಮರಳಿ ಸಿಗಲಿದೆ. ವಾಣಿಯ ಮೇಲೆ ನಿಯಂತ್ರಣವಿಡಿ.

ಧನು: ಧನು ರಾಶಿಯ ಜನರಿಗೆ ಈ ಶುಭಯೋಗದ ಹಲವು ಶುಭ ಫಲಗಳು ಪ್ರಾಪ್ತಿಯಾಗಲಿವೆ. ಮನೆಯಲ್ಲಿ ಸಮೃದ್ಧಿ ಹೆಚ್ಚಾಗುವುದರ ಜೊತೆಗೆ ಪ್ರಸನ್ನತೆಯ ವಾತಾವರಣ ನೆಲೆಸಲಿದೆ. ಧನಾಗಮನದ ಬಾಗಿಲುಗಳು ತೆರೆದುಕೊಳ್ಳಲಿವೆ. ದಾಂಪತ್ಯ ಜೀವನ ಸಂತಸದಿಂದ ಕೂಡಿರಲಿದೆ. ಸಂತಾನದ ವತಿಯಿಂದ ಶುಭ ಸಮಾಚಾರ ಸಿಗುವ ಸಾಧ್ಯತೆ ಇದೆ.

ಇದನ್ನು ಓದಿ- ಅಕಾಲ ಮೃತ್ಯು ಭಯ ನಿವಾರಣೆಗೆ ಶನಿವಾರ ಈ ಕೆಲಸ ತಪ್ಪದೆ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More