ನವದೆಹಲಿ: Lakshman Plant Benefits - ಮನೆಯಲ್ಲಿ ಈ ಸಸಿಯನ್ನು ನೆಡುವುದು ಎಲ್ಲಾ ದೃಷ್ಟಿಯಿಂದಲೂ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದು ಗಿಡ-ಮರಗಳಲ್ಲಿ ಕೆಲವು ದೈವಿಕ ಶಕ್ತಿ ಇರುತ್ತದೆ ಎಂದು ನಂಬಲಾಗಿದೆ. ಈ ಗಿಡ-ಮರಗಳ ಕಾರಣ ಮನೆ ಅಥವಾ ಅದರ ಸುತ್ತಮುತ್ತಲಿನ ಪರಿಸರದಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಉಂಟಾಗುತ್ತದೆ. ಅಂತಹುದೇ ಒಂದು ಸಸ್ಯ ಎಂದರೆ ಅದುವೇ ಲಕ್ಷ್ಮಣ ಸಸ್ಯ. ಮನೆಯಲ್ಲಿ ಈ ಗಿಡವನ್ನು ನೆಟ್ಟರೆ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ. ಇದು ಮನೆಗೆ ಸಂಪತ್ತನ್ನು ತರುತ್ತದೆ ಎನ್ನಲಾಗಿದೆ. ಹಾಗಾದರೆ ಬನ್ನಿ ಈ ಸಸ್ಯದ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ,
ಲಕ್ಷ್ಮಣ ಸಸ್ಯ ದೇವಿ ಲಕ್ಷ್ಮಿಗೆ ನೇರವಾಗಿ ಸಂಬಂಧಿಸಿದೆ
ಇದನ್ನೂ ಓದಿ-HOLI 2022: ಮೊಟ್ಟಮೊದಲ ಬಾರಿಗೆ ಹೋಳಿ ಹಬ್ಬ ಎಲ್ಲಿ ಆಚರಿಸಲಾಗಿದೆ ಗೊತ್ತಾ?
ಲಕ್ಷ್ಮಣ ಸಸ್ಯ ಹೇಗಿರುತ್ತದೆ?
ಲಕ್ಷ್ಮಣ ಸಸ್ಯ ಬಳ್ಳಿ ಜಾತಿಗೆ ಸೇರಿದೆ ಒಂದು ಸಸ್ಯವಾಗಿದೆ ಎಂದು ಹೇಳಲಾಗುತ್ತದೆ.. ಇದರ ಎಲೆಗಳು ವೀಳ್ಯದೆಲೆ ಅಥವಾ ಆಲದ ಮರದ ಎಲೆಗಳನ್ನು ಹೋಲುತ್ತವೆ. ಈ ಸಸ್ಯವನ್ನು ಆಯುರ್ವೇದದಲ್ಲಿಯೂ ಬಳಸಲಾಗುತ್ತದೆ. ಇದನ್ನು ಲಕ್ಷ್ಮಣ ಬೂಟಿ ಎಂದು ಕೂಡ ಕರೆಯಲಾಗುತ್ತದೆ. ಈ ಸಸ್ಯವು ಹಣವನ್ನು ತನ್ನತ್ತ ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಮನೆಯಲ್ಲಿ ಇಟ್ಟರೆ ಆರ್ಥಿಕ ಸಮಸ್ಯೆ ಬರುವುದಿಲ್ಲ. ಕುಟುಂಬದ ಸದಸ್ಯರ ಆದಾಯವು ಹೆಚ್ಚಾಗುತ್ತದೆ ಮತ್ತು ಕುಟುಂಬದ ವಾತಾವರಣವು ಸಂತೋಷದಿಂದ ಕೂಡಿರುತ್ತದೆ.
ಇದನ್ನೂ ಓದಿ-Palmistry: ಅಂಗೈಯಲ್ಲಿ ಈ ರೇಖೆ ಇರುವವರು ಹುಟ್ಟು ಶ್ರೀಮಂತರಾಗಿರುತ್ತಾರೆ, ನಿಮ್ಮ ಕೈಯಲ್ಲಿ ಇದೆಯಾ?
ಮನೆಯಲ್ಲಿ ಈ ಸಸ್ಯವನ್ನು ಎಲ್ಲಿ ನೆಡಬೇಕು?
ಮನೆಯಲ್ಲಿ ಪೂರ್ವ ಅಥವಾ ಪೂರ್ವೋತ್ತರ ದಿಕ್ಕಿನಲ್ಲಿ ಲಕ್ಷ್ಮಣ ಸಸ್ಯವನ್ನು ನೆಡಬೇಕು. ಉತ್ತರ ದಿಕ್ಕು ಸಂಪತ್ತಿನ ಅಂಶವಾಗಿದೆ ಮತ್ತು ಸಂಪತ್ತಿನ ದೇವರು ಕುಬೇರನೂ ಈ ದಿಕ್ಕಿನ ಜೊತೆಗೆ ಸಂಬಂಧ ಹೊಂದಿದ್ದಾನೆ. ಈ ದಿಕ್ಕಿಗೆ ಲಕ್ಷ್ಮಣ ಗಿಡ ನೆಟ್ಟರೆ ಮನೆಯಲ್ಲಿ ಹಣ ಹರಿದು ಬರುತ್ತಲೇ ಇರುತ್ತದೆ. ಹೀಗಾಗಿ ಮನೆಯಲ್ಲಿ ಹಣದ ಕೊರತೆ ಎದುರಾಗುವುದಿಲ್ಲ.
ಇದನ್ನೂ ಓದಿ-Weekly Horoscope : ಮುಂದಿನ ವಾರ ಈ ರಾಶಿಯವರಿಗೆ ಆರ್ಥಿಕ ಪ್ರಗತಿ : ನಿಮ್ಮ ವಾರದ ಭವಿಷ್ಯ ಹೇಗಿದೆ ನೋಡಿ
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ, ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.