Home> Lifestyle
Advertisement

Astrology: ದಾರಿಯಲ್ಲಿ ನಿಮಗೆ ಈ ವಸ್ತುಗಳು ಸಿಕ್ಕರೆ ತುಂಬಾ ಅದೃಷ್ಟವಂತೆ! ಆದರೆ...

ಕೆಲವೊಮ್ಮೆ ದಾರಿಯಲ್ಲಿ ನಡೆಯುವಾಗ ಆಕಸ್ಮಿಕವಾಗಿ ಕೆಲವು ವಸ್ತುಗಳು  ಕಂಡುಬರುತ್ತವೆ ಅಥವಾ ಕಾಣುತ್ತವೆ. ಇವುಗಳಲ್ಲಿ ಕೆಲವು ಅದೃಷ್ಟವನ್ನು ಸೂಚಿಸುತ್ತವೆ. ದಾರಿಯಲ್ಲಿ ನಾಣ್ಯ, ಶಂಖ ಇತ್ಯಾದಿಗಳು ಕಂಡುಬಂದರೆ, ನಂತರ ಪರಿಹಾರವನ್ನು ತೆಗೆದುಕೊಳ್ಳುವುದು ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

Astrology: ದಾರಿಯಲ್ಲಿ ನಿಮಗೆ ಈ ವಸ್ತುಗಳು ಸಿಕ್ಕರೆ ತುಂಬಾ ಅದೃಷ್ಟವಂತೆ! ಆದರೆ...

ಬೆಂಗಳೂರು: ಸಾಮಾನ್ಯವಾಗಿ ಕುಂಡಲಿ, ಹಸ್ತ ಸಾಮುದ್ರಿಕ, ಟ್ಯಾರೋ ಕಾರ್ಡುಗಳ ಮೂಲಕ ನಾವು ಭವಿಷ್ಯವನ್ನು ತಿಳಿಯುತ್ತೇವೆ. ಇದರ ಹೊರತಾಗಿಯೂ ಭವಿಷ್ಯದ ಬಗ್ಗೆ ಸೂಚಿಸುವ ಅನೇಕ ವಿಷಯಗಳಿವೆ. ರಾತ್ರಿಯಲ್ಲಿ ಕಾಣುವ ಕನಸುಗಳು, ಕೆಲವು ಪ್ರಮುಖ ಕೆಲಸಗಳಿಗಾಗಿ ಮನೆಯಿಂದ ಹೊರಟ ತಕ್ಷಣ ಕೆಲವು ವಿಶೇಷ ವಸ್ತುಗಳನ್ನು ನೋಡುವುದು ಅಥವಾ ವ್ಯಕ್ತಿಯೊಂದಿಗೆ ಕೆಲವು ಘಟನೆಗಳು ಸಂಭವಿಸುವುದು ಕೂಡ ಮುಂದಾಗುವುದನ್ನು ಅಂದರೆ ಮುಂದೆ ಒಳ್ಳೆಯದಾಗಲಿದೆಯೇ ಅಥವಾ ಏನಾದರೂ ತೊಂದರೆಯಿದೆಯೇ (Good-Bad Indications) ಎಂಬುದನ್ನು ಸೂಚಿಸುತ್ತವೆ. ಇಂದು ನಾವು ಅಂತಹ ಕೆಲವು ವಿಷಯಗಳ ಬಗ್ಗೆ ತಿಳಿಸಲಿದ್ದೇವೆ. 

ಈ ವಸ್ತುಗಳನ್ನು ದಾರಿಯಲ್ಲಿ ಪಡೆಯುವುದು ಒಳ್ಳೆಯ ಸಂಕೇತ:

ಎಲ್ಲಿಯಾದರೂ ಹೋಗುವಾಗ, ಶಂಖ, ನಾಣ್ಯ (Coin), ಕುದುರೆಮುಖವು ದಾರಿಯಲ್ಲಿ ಕಂಡುಬಂದರೆ, ಅದು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ದಾರಿಯಲ್ಲಿ ಸ್ವಸ್ತಿಕ ಚಿಹ್ನೆಯನ್ನು ನೋಡುವುದು ಅಥವಾ ಸ್ವಸ್ತಿಕವನ್ನು ತಯಾರಿಸಿದಂತಹ ಏನನ್ನಾದರು ಕಂಡರೆ ತುಂಬಾ ಒಳ್ಳೆಯದು. 

ಇದನ್ನೂ ಓದಿ- Beauty Tips: ನಿಮ್ಮ ಮುಖದ ಕಾಂತಿಗೆ ಮಾಂತ್ರಿಕ ಟಾನಿಕ್ ಆಗಲಿದೆ ಒಂದು ಹಾಗಲಕಾಯಿ

ಅದೇ ರೀತಿ ಹಲವು ಬಾರಿ ನಾವು ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಸಿಗುವ ಕೆಲವು ವಸ್ತುಗಳನ್ನು ಮನೆಯ ಅಂಗಳದಲ್ಲಿ ಅಥವಾ ತೋಟದಲ್ಲಿ ಸಮಾಧಿ ಮಾಡುವುದು ಅಥವಾ ಪೂಜೆಯ ಸ್ಥಳದಲ್ಲಿ ಇರಿಸುವುದರಿಂದ ಅದೃಷ್ಟವೇ (Luck) ಬದಲಾಗುತ್ತದೆ ಎಂದು ಹೇಳಲಾಗುತ್ತದೆ.

ಇವುಗಳು ಕೂಡ ಅದೃಷ್ಟದ ಸಂಕೇತ: 
* ಆಕಸ್ಮಿಕವಾಗಿ ಬಟ್ಟೆಯನ್ನು ಉಲ್ಟಾ ಧರಿಸಿದರೆ:

ಹಲವು ಬಾರಿ ನಾವು ಆತುರದಲ್ಲಿ ಬಟ್ಟೆ ಧರಿಸುವಾಗ ಅದು ಸರಿಯಾಗಿದೆಯೋ ಅಥವಾ ಉಲ್ಟಾ ಇದೆಯೋ ಎಂಬುದನ್ನು ಗಮನಿಸಿರುವುದಿಲ್ಲ. ಆದರೆ ಈ ರೀತಿಯಾಗಿ ಆಕಸ್ಮಿಕವಾಗಿ ಬಟ್ಟೆಯನ್ನು ಉಲ್ಟಾ ಧರಿಸುವುದು ಶುಭ ಸಂಕೇತ ಎಂದು ಹೇಳಲಾಗುತ್ತದೆ. ಇದು ನಿಮಗೆ ಶೀಘ್ರದಲ್ಲೇ ಧನ-ಲಾಭವಾಗಲಿದೆ ಎಂಬುದನ್ನು ಸೂಚಿಸುತ್ತದೆ.

ಇದನ್ನೂ ಓದಿ- Mars Transit In Leo - ಮಂಗಳನ ಕೃಪೆಯಿಂದ ಸೆಪ್ಟೆಂಬರ್ 6ರವರೆಗೆ ಈ ರಾಶಿ ಜಾತಕದವರ ಭಾಗ್ಯ ಬದಲಾಗಲಿದೆ, ವ್ಯಾಪಾರದಲ್ಲಿಯೂ ಲಾಭ

* ರಸ್ತೆಯಲ್ಲಿ ನೀರು ತುಂಬಿದ ಪಾತ್ರೆಯನ್ನು ಕಂಡರೆ: 
ನೀವು ಯಾವುದಾದರೂ ಮಹತ್ವದ ಕೆಲಸಕ್ಕಾಗಿ ಮನೆಯಿಂದ ಹೊರಟಾಗ ರಸ್ತೆಯಲ್ಲಿ  ನೀರು ತುಂಬಿರುವ ಪಾತ್ರೆಯನ್ನು ನೋಡಿದರೆ ನೀವು ಹೋಗುತ್ತಿರುವ ಕೆಲಸದಲ್ಲಿ ಖಂಡಿತ ಯಶಸ್ಸು ಪ್ರಾಪ್ತಿಯಾಗಲಿದೆ ಎಂದರ್ಥ.

* ಕಬ್ಬನ್ನು ಕಂಡರೆ: ನೀವು ಬೆಳಿಗ್ಗೆ ಮನೆಯಿಂದ ಹೊರಬಂದ ತಕ್ಷಣ ಕಬ್ಬಿನ ರಾಶಿಯನ್ನು ನೋಡಿದರೆ, ಅದು ತುಂಬಾ ಮಂಗಳಕರ. ಇದು ಮುಂದಿನ ದಿನಗಳಲ್ಲಿ ನಿಮ್ಮ ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿದೆ ಎಂಬುದರ ಸಂಕೇತವಾಗಿದೆ.

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More