ನವದೆಹಲಿ: ಸಹೋದರ-ಸಹೋದರಿಯರ ಸಂಬಂಧವನ್ನು ಸಾರಿ ಹೇಳುವ ಹಬ್ಬವೇ ರಕ್ಷಾಬಂಧನ. ರಕ್ಷಾಬಂಧನದ ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಸಹೋದರಿಯರು ತಮ್ಮ ಸಹೋದರರಿಗಾಗಿ ಸುಂದರವಾದ ರಾಖಿಗಳನ್ನು ಆರಿಸುವುದರಲ್ಲಿ ನಿರತರಾಗಿದ್ದಾರೆ, ಸಹೋದರರು ತಮ್ಮ ಪ್ರೀತಿಯ ಸಹೋದರಿಗಾಗಿ ಅತ್ಯುತ್ತಮ ಉಡುಗೊರೆಯನ್ನು ನೀಡಲು ತಯಾರಿ ನಡೆಸುತ್ತಿದ್ದಾರೆ. ರಕ್ಷಾಬಂಧನದ ಸಂದರ್ಭದಲ್ಲಿ ಸಹೋದರಿಯರು ತಮ್ಮ ಸಹೋದರನ ದೀರ್ಘಾಯುಷ್ಯ ಮತ್ತು ಸಂತೋಷದ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ. ಈ ಬಾರಿ ರಾಖಿ ತೆಗೆದುಕೊಳ್ಳುವಾಗ ಈ ಒಂದು ವಿಷಯದ ಬಗ್ಗೆ ಗಮನ ಹರಿಸಿದರೆ, ಈ ರಕ್ಷಾಬಂಧನವು ತಮ್ಮ ಸಹೋದರನಿಗೆ ಅತ್ಯಂತ ಮಂಗಳಕರವೆಂದು ಸಾಬೀತುಪಡಿಸಬಹುದು. ಇದಕ್ಕಾಗಿ, ಸಹೋದರಿಯು ತನ್ನ ಸಹೋದರನ ರಾಶಿಗೆ (Zodiac Sign) ಅನುಗುಣವಾಗಿ ಸಹೋದರನಿಗೆ ರಾಖಿ ಕಟ್ಟಬೇಕು. ಆಗಸ್ಟ್ 22 ರ ರಕ್ಷಾಬಂಧನದ ದಿನದಂದು ನಿಮ್ಮ ಸಹೋದರನಿಗೆ ಯಾವ ರಾಖಿಯನ್ನು ಕಟ್ಟುವುದು ಉತ್ತಮ ಎಂದು ತಿಳಿಯಿರಿ.
ರಾಶಿಚಕ್ರದ ಪ್ರಕಾರ ರಾಖಿಯನ್ನು ಆರಿಸಿ:
ಮೇಷ ರಾಶಿ:
ನಿಮ್ಮ ಸಹೋದರನ ರಾಶಿಯು ಮೇಷರಾಶಿಯಾಗಿದ್ದರೆ, ರಕ್ಷಾಬಂಧನದ ದಿನದಂದು ಅವನಿಗೆ ಕೆಂಪು ಬಣ್ಣದ ರಾಖಿಯನ್ನು ಕಟ್ಟುವುದು ಬಹಳ ಒಳ್ಳೆಯದು. ಇದು ನಿಮ್ಮ ಸಹೋದರನನ್ನು ಪವರ್ ಫುಲ್ ಆಗಿ ಮಾಡುವುದು ಮಾತ್ರವಲ್ಲ, ಅವರ ಜೀವನವು ಸದಾ ಸುಖ-ಶಾಂತಿ, ನೆಮ್ಮದಿಯಿಂದ ಇರುವಂತೆ ಮಾಡುತ್ತದೆ.
ವೃಷಭ ರಾಶಿ:
ಈ ರಾಶಿಯ ಜನರಿಗೆ ಬಿಳಿ ಬಣ್ಣದ ರಾಖಿ (Rakhi) ಕಟ್ಟುವುದು ತುಂಬಾ ಶುಭಕರವಾಗಿರುತ್ತದೆ. ಇದರೊಂದಿಗೆ, ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ಅವರಿಗೆ ನೀಡುವುದು ತುಂಬಾ ಒಳ್ಳೆಯದು.
ಇದನ್ನೂ ಓದಿ- Mercury Transit 2021: ನಾಳೆ ಸಿಂಹ ರಾಶಿಯಲ್ಲಿ ಬುಧನ ಗೋಚರ, ಯಾರಿಗೆ ಲಾಭ?
ಮಿಥುನ ರಾಶಿ:
ನಿಮ್ಮ ಸಹೋದರ ಮಿಥುನ ರಾಶಿಯವರಾಗಿದ್ದರೆ, ಅವರಿಗೆ ಹಸಿರು ಬಣ್ಣದ ರಾಖಿಯನ್ನು ಆರಿಸಿ. ಇದು ಅವರನ್ನು ತೊಂದರೆಗಳಿಂದ ರಕ್ಷಿಸುತ್ತದೆ.
ಕರ್ಕ ರಾಶಿ:
ಕರ್ಕಾಟಕ ರಾಶಿಯವರಿಗೆ ಬಿಳಿ ಅಥವಾ ಹಳದಿ ಬಣ್ಣದ ರಾಖಿ ಕಟ್ಟುವುದು ಶುಭಕರವಾಗಿರುತ್ತದೆ. ಇದು ಅವರ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ.
ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಕೆಂಪು ಅಥವಾ ಹಳದಿ ಬಣ್ಣದ ರಾಖಿ ಕಟ್ಟುವುದು ಶುಭಕರವಾಗಿರುತ್ತದೆ. ನಿಮ್ಮ ಸಹೋದರ ಸಿಂಹ ರಾಶಿಯವರಾಗಿದ್ದರೆ ಅವರಿಗೆ ಕೆಂಪು ಅಥವಾ ಹಳದಿ ಬಣ್ಣಗಳ ರಾಖಿ ಕಟ್ಟುವುದರಿಂದ ಅವರ ಅದೃಷ್ಟ ಬದಲಾಗುವುದು ಎಂಬ ನಂಬಿಕೆ ಇದೆ.
ಕನ್ಯಾ ರಾಶಿ:
ಈ ರಾಶಿಯ ಸಹೋದರನಿಗೆ ಕಿತ್ತಳೆ ಬಣ್ಣದ ರಾಖಿ ಅತ್ಯುತ್ತಮವಾಗಿರುತ್ತದೆ. ಇದು ಅವರ ಜೀವನದಲ್ಲಿ ಧೈರ್ಯ, ಉತ್ಸಾಹವನ್ನು ತುಂಬುತ್ತದೆ.
ತುಲಾ ರಾಶಿ:
ರಕ್ಷಾಬಂಧನದಲ್ಲಿ (Rakshabandhan) ತುಲಾ ರಾಶಿಯವರಿಗೆ ಬಿಳಿ ಬಣ್ಣದ ರಾಖಿ ಕಟ್ಟುವುದು ಮತ್ತು ಬಿಳಿ ಬಣ್ಣದ ಸಿಹಿತಿಂಡಿಗಳನ್ನು ನೀಡುವುದು ತುಂಬಾ ಒಳ್ಳೆಯದು.
ವೃಶ್ಚಿಕ ರಾಶಿ:
ಈ ರಾಶಿಯವರಿಗೆ ಅವರ ಸಹೋದರಿಯರು ಕೆಂಪು ಅಥವಾ ಗುಲಾಬಿ ಬಣ್ಣದ ರಾಖಿಯನ್ನು ಕಟ್ಟಿದರೆ ಅದು ಶುಭಕರವಾಗಿರುತ್ತದೆ.
ಇದನ್ನೂ ಓದಿ- Shravan Mas 2021: ಇಂದಿನಿಂದ ಶ್ರಾವಣ ಮಾಸ ಆರಂಭ, ಮೊದಲ ಸೋಮವಾರ ಶಿವನನ್ನು ಒಲಿಸಿಕೊಳ್ಳಲು ಈ ರೀತಿ ಪೂಜೆ ಸಲ್ಲಿಸಿ
ಧನು ರಾಶಿ:
ಧನು ರಾಶಿಯ ಸಹೋದರರಿಗೆ ಹಳದಿ ಅಥವಾ ಚಿನ್ನದ ಬಣ್ಣದ ರಾಖಿ ಕಟ್ಟಿಸಿ ಮತ್ತು ಅವರಿಗೆ ಹಳದಿ ಬಣ್ಣದ ಸಿಹಿತಿಂಡಿಗಳನ್ನು ತಿನ್ನಿಸಿ. ಇದು ಸಹೋದರನ ಸಂಪತ್ತನ್ನು ಹೆಚ್ಚಿಸುತ್ತದೆ.
ಮಕರ ರಾಶಿ:
ನಿಮ್ಮ ಸಹೋದರ ಮಕರ ರಾಶಿಯವರಾಗಿದ್ದರೆ ಅವರಿಗೆ ನೀಲಿ ಬಣ್ಣದ ರಾಖಿಯನ್ನು ಕಟ್ಟುವುದರಿಂದ ತುಂಬಾ ಒಳ್ಳೆಯದಾಗುತ್ತದೆ.
ಕುಂಭ ರಾಶಿ:
ಈ ರಾಶಿಯ ಜನರಿಗೆ, ಅವರ ಸಹೋದರಿಯರು ನೀಲಿ ಬಣ್ಣದ ರಾಖಿಯನ್ನು ಆರಿಸಿದರೆ, ನಿಮ್ಮ ಸಹೋದರನಿಗೆ ಎಂತಹದ್ದೇ ಕಷ್ಟ ಎದುರಾದರೂ ಜಯಶಾಲಿಯಾಗುತ್ತಾರೆ.
ಮೀನ ರಾಶಿ:
ಮೀನ ರಾಶಿಯ ಸಹೋದರರಿಗೆ ಹಳದಿ ಅಥವಾ ಚಿನ್ನದ ಬಣ್ಣದ ಸುಂದರ ರಾಖಿಯನ್ನು ಕಟ್ಟುವುದು ಶುಭಕರವಾಗಿರುತ್ತದೆ. ರಕ್ಷಾಬಂಧನದ ದಿನದಂದು ಸಹೋದರಿಯರು ಈ ಜನರಿಗೆ ಹಳದಿ ಬಣ್ಣದ ಸಿಹಿತಿಂಡಿಗಳನ್ನು ನೀಡುವುದು ಶುಭ.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ