Home> Lifestyle
Advertisement

Guru Gochar 2022: ಈ ಮೂರು ರಾಶಿಗಳ ಭಾಗ್ಯಕ್ಕೆ ಸಿಗಲಿದೆ ದೇವಗುರು ಬೃಹಸ್ಪತಿಯ ಸಾಥ್, ಹೊಸವರ್ಷದಲ್ಲಿ ಮಾಲಾಮಾಲ್

Guru Gochar 2022 - ಗುರುವಿನ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ. 2022 ರಲ್ಲಿ, ಗುರುವಿನ ರಾಶಿ ಪರಿವರ್ತನೆ ಏಪ್ರಿಲ್ 13 ರಂದು ಅಂದರೆ,  ಬುಧವಾರದಂದು ನಡೆಯಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ  ರಾಶಿ ಬದಲಾವಣೆಯಲ್ಲಿ, ಗುರು ತನ್ನದೇ ಆದ ಮೀನ ರಾಶಿಯಾದ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ.

Guru Gochar 2022: ಈ ಮೂರು ರಾಶಿಗಳ ಭಾಗ್ಯಕ್ಕೆ ಸಿಗಲಿದೆ ದೇವಗುರು ಬೃಹಸ್ಪತಿಯ ಸಾಥ್, ಹೊಸವರ್ಷದಲ್ಲಿ ಮಾಲಾಮಾಲ್

ನವದೆಹಲಿ: Guru Gochar 2022 - ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವನ್ನು ದೇವಗುರು ಎಂದು ಕರೆಯಲಾಗುತ್ತದೆ. ಆದ್ದರಿಂದ, ಗುರುವಿನ (Guru Rashi Parivartan 2022)  ರಾಶಿ ಬದಲಾವಣೆಯಾದಾಗ, ಅದು ಎಲ್ಲಾ 12 ರಾಶಿಚಕ್ರದ ಚಿಹ್ನೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. 2022 ರಲ್ಲಿ, ಗುರು ಗ್ರಹದ ಸಂಕ್ರಮಣ (Guru Gochar 2022) ಏಪ್ರಿಲ್ 13ರಂದು ಅಂದರೆ, ಬುಧವಾರದಂದು ಸಂಭವಿಸಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ರಾಶಿಚಕ್ರ ಬದಲಾವಣೆಯಲ್ಲಿ, ಗುರುವು ತನ್ನದೇ ಆದ ರಾಶಿಯಾದ  ಮೀನಕ್ಕೆ (Pisces Zodiac) ಪ್ರವೇಶಿಸಲಿದ್ದಾನೆ. ಗುರುವಿನ ಈ ರಾಶಿ ಬದಲಾವಣೆಯಲ್ಲಿ (Jupiter Transit in Pisces), ಯಾವ 3 ರಾಶಿಗಳಿಗೆ ಹೆಚ್ಚು ಲಾಭ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

1. ವೃಶ್ಚಿಕ (Scorpio) - ಗುರುವಿನ ರಾಶಿ ಬದಲಾವಣೆಯು ವೃಶ್ಚಿಕ ರಾಶಿಯವರಿಗೆ ಲಾಭ ತರಲಿದೆ. ಗುರು ಸಂಚಾರದ ಸಮಯದಲ್ಲಿ ನೀವು ದೊಡ್ಡ ಆರ್ಥಿಕ ಲಾಭಗಳನ್ನು ಪಡೆಯುತ್ತೀರಿ. ಇದರ ಹೊರತಾಗಿ, ವೃತ್ತಿಜೀವನದಲ್ಲಿಯೂ ಅದ್ಭುತವಾದ ಪ್ರಯೋಜನಗಳಿವೆ. ಸಂಚಾರ ಅವಧಿಯಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಇದಲ್ಲದೆ, ಈ ರಾಶಿಚಕ್ರದ ಜನರಿಗೆ ಅನೇಕ ಆದಾಯದ ಮೂಲಗಳು ಸಿಗಲಿವೆ.  ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗುರು ಗ್ರಹವು ಈ ರಾಶಿಚಕ್ರದಲ್ಲಿ ಪ್ರಬಲವಾಗಿರಲಿದೆ.

2. ಧನು (Sagittarius) - ಗುರುವಿನ ರಾಶಿಯ ಬದಲಾವಣೆಯು ಧನು ರಾಶಿಯವರಿಗೆ ವರದಾನವಾಗಿ ಪರಿಣಮಿಸಲಿದೆ. ಈ ಪರಿವರ್ತನೆಯ ಸಮಯದಲ್ಲಿ ಕೆಲಸದಲ್ಲಿ ಅದ್ಭುತ ಪ್ರಗತಿ ಕಂಡುಬರಲಿದೆ. ಇದಲ್ಲದೆ, ಅದೃಷ್ಟವು ಸಂಪೂರ್ಣ ಬೆಂಬಲ ನೀಡಲಿದೆ. ಹಳದಿ ವಸ್ತುಗಳಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಆರ್ಥಿಕ ಲಾಭವಿದೆ. ಹಾಗೆ ನೋಡಿದರೆ ಗುರುವು ಧನು ರಾಶಿಯೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ. ಆದ್ದರಿಂದ, ಈ ರಾಶಿಚಕ್ರದ ಜನರು ಗುರು ಗ್ರಹದಿಂದ ಸಂಪೂರ್ಣ ಬೆಂಬಲಸಿಗಲಿದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಕಾಣಲಿದೆ.

ಇದನ್ನೂ ಓದಿ-Sunday Remedies: ಖುಷಿಗಳಿಂದ ತುಂಬಿದ ಹಾಗೂ ಪ್ರಗತಿಪರ ಜೀವನಕ್ಕಾಗಿ ಭಾನುವಾರ ಈ ಉಪಾಯಗಳನ್ನು ಅನುಸರಿಸಲು ಮರೆಯಬೇಡಿ

ಕುಂಭ (Aquarius) - ಗುರುವಿನ ಈ ರಾಶಿ ಪರಿವರ್ತನೆ ಕುಂಭ ರಾಶಿಯ ಜನರಿಗೂ ಸಹ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ಮೀನ ರಾಶಿಯಲ್ಲಿ ಗುರುವಿನ ಸಂಚಾರದಿಂದ ಈ ರಾಶಿಯ ಜನರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇದರೊಂದಿಗೆ ಹೊಸ ಆದಾಯದ ಮೂಲಗಳೂ ಸೃಷ್ಟಿಯಾಗಲಿವೆ. ಇದಲ್ಲದೇ ವ್ಯಾಪಾರದಲ್ಲಿ ದೈನಂದಿನ ಆದಾಯ ಹೆಚ್ಚುತ್ತದೆ. ಸಂಚಾರದ ಅವಧಿಯು ಹೂಡಿಕೆ ಮಾಡಲು ಮಂಗಳಕರವಾಗಿದೆ ಎಂದು ಸಾಬೀತುಪಡಿಸುತ್ತದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಉದ್ಯೋಗಾಕಾಂಕ್ಷಿಗಳಿಗೂ ಒಳ್ಳೆಯದಾಗಲಿದೆ.

ಇದನ್ನೂ ಓದಿ-Vastu Tips - ನಿಮ್ಮ ಮನೆಯಲ್ಲಿಯೂ ಇರಲಿ ಈ ನಾಲ್ಕು ಸಸಿಗಳು, ಹಣಕಾಸಿನ ಮುಗ್ಗಟ್ಟು ದೂರಾಗುತ್ತದೆ

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ. ಝೀ ಹಿಂದುಸ್ತಾನ್ ಕನ್ನಡ ಖಚಿತಪಡಿಸುವುದಿಲ್ಲ ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ)

ಇದನ್ನೂ ಓದಿ-30 ವರ್ಷಗಳ ನಂತರ ಶನಿ ಬದಲಾವಣೆ: ಈ ರಾಶಿಯವರಿಗೆ ಅದೃಷ್ಟ, ಈ 2 ರಾಶಿಯವರಿಗೆ ಅಪಾಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More