Home> Lifestyle
Advertisement

Guru Chandal Yog: ಜೀವನವನ್ನೇ ಹಾಳು ಮಾಡುತ್ತದೆ ಜಾತಕದಲ್ಲಿನ 'ಗುರು-ಚಂಡಾಲ' ದೋಷ, ಈ ಉಪಾಯಗಳನ್ನು ಅನುಸರಿಸಿ ಖುಷಿಯಾಗಿರಿ

Guru Chandal Yog Remedy - ಸಾಮಾನ್ಯವಾಗಿ ಜಾತಕದಲ್ಲಿ ಅನೇಕ ರೀತಿಯ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಇವುಗಳಲ್ಲಿ ಗುರು ಚಂಡಾಲ ಯೋಗ ಕೂಡ ಒಂದು. ಗುರು ಚಂಡಾಲ ಯೋಗದ ದೋಷವು ವ್ಯಕ್ತಿಯ ಜೀವನವನ್ನೇ ನಾಶಪಡಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಚಂಡಾಲ ದೋಷವನ್ನು ಈ ರೀತಿ ಪರಿಹರಿಸಬಹುದು.

Guru Chandal Yog: ಜೀವನವನ್ನೇ ಹಾಳು ಮಾಡುತ್ತದೆ ಜಾತಕದಲ್ಲಿನ 'ಗುರು-ಚಂಡಾಲ' ದೋಷ, ಈ ಉಪಾಯಗಳನ್ನು ಅನುಸರಿಸಿ ಖುಷಿಯಾಗಿರಿ

ನವದೆಹಲಿ: Guru Chandal Yog Cons -  ವ್ಯಕ್ತಿಯ ಜಾತಕದಲ್ಲಿ ಹಲವು ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಈ ಯೋಗಗಳು ಗ್ರಹಗಳ ಸಂಯೋಜನೆಯಿಂದ ರೂಪಗೊಳ್ಳುತ್ತವೆ. ಶುಭ ಯೋಗವು ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದರೆ, ಅಶುಭ ಯೋಗವು ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನು ತರುತ್ತವೆ. ಇಂತಹುದೇ ಒಂದು ಯೋಗ ಗುರು ರಾಹು ಮತ್ತು ಕೇತುಗಳ ಸಂಯೋಗದಿಂದ ರೂಪಗೊಳ್ಳುತ್ತದೆ. ಇದನ್ನು ಗುರು ಚಂಡಾಲ ಯೋಗ (Guru Chandal Yog Benefits) ಎನ್ನುತ್ತಾರೆ. ಜಾತಕದ ಗುರುವಿಗೆ ಚಂಡಾಲದೋಷದ (Guru Chandal Yog Pros) ದುಷ್ಪರಿಣಾಮಗಳೇನು ಮತ್ತು ಅದನ್ನು ಶಮನಗೊಳಿಸಲು ಏನು ಮಾಡಬೇಕು ತಿಳಿದುಕೊಳ್ಳೋಣ ಬನ್ನಿ.

>> ಜಾತಕದ ಮೊದಲ ಮನೆಯಲ್ಲಿ ಗುರು ಮತ್ತು ರಾಹು ಒಟ್ಟಿಗೆ ಕುಳಿತಿದ್ದರೆ. ಆದ್ದರಿಂದ ಮನುಷ್ಯನ ಚರಿತ್ರೆ ಅನುಮಾನಾಸ್ಪದವಾಗಲು ಪ್ರಾರಂಭಿಸುತ್ತದೆ. ಇದರೊಂದಿಗೆ ಅಂತಹ ವ್ಯಕ್ತಿ ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗುತ್ತಾನೆ

>> ಜಾತಕದ ಎರಡನೇ ಮನೆಯಲ್ಲಿ ಗುರು ಚಂಡಾಲ ಯೋಗವು ರೂಪುಗೊಂಡರೆ, ವ್ಯಕ್ತಿಯು ಶ್ರೀಮಂತನಾಗುತ್ತಾನೆ. ಆದರೆ ಸಂತೋಷ ಮತ್ತು ಐಷಾರಾಮಿ ಜೀವನ ನಡೆಸಲು ಹಣವನ್ನು ಖರ್ಚು ಮಾಡುತ್ತಾನೇ. ಇದಲ್ಲದೇ ದುರ್ಬಲ ಗುರುವಿನ ಕಾರಣದಿಂದ ವ್ಯಕ್ತಿಯು ಮತ್ತಿನಲ್ಲಿ ತೆಲಾಡುತ್ತಾನೆ.

ಇದನ್ನೂ ಓದಿ-Makar Sankranti 2022: ಮಕರ ಸಂಕ್ರಾಂತಿಯಂದು ಈ ವಸ್ತುಗಳ ದಾನ ಮಾಡಲು ಮರೆಯಬೇಡಿ

>> ಜಾತಕದ ಮೂರನೇ ಮನೆಯಲ್ಲಿ ಗುರು ಮತ್ತು ರಾಹು ಭೇಟಿಯಾಗುವುದರಿಂದ, ವ್ಯಕ್ತಿಯು ಶಕ್ತಿಶಾಲಿ ಮತ್ತು ಧೈರ್ಯಶಾಲಿಯಾಗುತ್ತಾನೆ. ಆದರೆ ತಪ್ಪು ಕಾರ್ಯಗಳಲ್ಲಿ ಕುಖ್ಯಾತನಾಗುತ್ತಾನೆ. ಅಲ್ಲದೆ, ವ್ಯಕ್ತಿಯು ಬೆಟ್ಟಿಂಗ್, ಜೂಜು ಇತ್ಯಾದಿಗಳ ಮೂಲಕ ಹಣವನ್ನು ಗಳಿಸಲು ಪ್ರಯತ್ನಿಸುತ್ತಾನೆ.

ಇದನ್ನೂ ಓದಿ-ಮನೆ ಬಾಗಿಲಲ್ಲಿ ಈ ಒಂದು ವಸ್ತು ಇಡಿ : ಇದರಿಂದ ಹಣದ ಮಳೆ ಸುರಿಯುತ್ತೆ ಮತ್ತು ನಿಮ್ಮ ಅದೃಷ್ಟವು ಬೆಳಗುತ್ತದೆ!

ಯಾವ ಉಪಾಯಗಳನ್ನು ಮಾಡಬೇಕು (Astrology)
ಗುರು ಚಂಡಾಲ ದೋಷವನ್ನು ತೊಡೆದುಹಾಕಲು, ವ್ಯಕ್ತಿಯು ಗುರು ಮತ್ತು ರಾಹುವಿನ ಶಾಂತಿ ಪಾರಾಯಣವನ್ನು ನಡೆಸಬೇಕು. ಇದಲ್ಲದೇ ಪೋಷಕರ ಸೇವೆ ಮಾಡಬೇಕು. ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ವಿಷ್ಣುವನ್ನು ಪೂಜಿಸುವುದರಿಂದ ಗುರು ಚಂಡಾಲ ದೋಷದ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಬಹುದು. ಸೋಮವಾರದಂದು ಎರಡು ಮುಖಿ ರುದ್ರಾಕ್ಷವನ್ನು ಧರಿಸುವುದು ಸಹ ಪ್ರಯೋಜನಕಾರಿಯಾಗಿದೆ. ಅಲ್ಲದೆ, ಗಣೇಶನ ನಿಯಮಿತ ಪೂಜೆಯು ಗುರು ಚಂಡಾಲ ದೋಷವನ್ನು ನಿವಾರಿಸುತ್ತದೆ. 'ಓಂ ಬ್ರಾಂ ಬ್ರಿಂ ಬ್ರೌನ್ ಸಹ ಗುರುವೇನಮಃ' ಎಂಬ ಗುರು ಮಂತ್ರವನ್ನು ಪ್ರತಿದಿನ ಜಪಿಸಬೇಕು.

ಇದನ್ನೂ ಓದಿ-ಸೂರ್ಯ-ಬುಧ-ಶುಕ್ರನ ಸ್ಥಾನ ಬದಲಾವಣೆ.. ದ್ವಾದಶ ರಾಶಿಗಳ ಮೇಲಾಗುವ ಪರಿಣಾಮವೇನು?

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More