Home> Lifestyle
Advertisement

ಗ್ರಹ ದೋಷಗಳ ಪರಿಹಾರಕ್ಕೆ ಈ ಮಂತ್ರ ಪಠಿಸಿ: ಮಂಗಳಕರ ಫಲ ಪಡೆಯಿರಿ

ಈ ಮಂತ್ರಗಳ ಪ್ರಬಲ ಪರಿಣಾಮದ ದೃಷ್ಟಿಯಿಂದ, ಅವುಗಳಿಗೆ ಮಹಾಮಂತ್ರದ ಸ್ಥಾನಮಾನವನ್ನು ನೀಡಲಾಗಿದೆ. ಜಾತಕದ ಗ್ರಹದೋಷಗಳನ್ನು ಹೋಗಲಾಡಿಸಲು ತುಂಬಾ ಉಪಯುಕ್ತವಾದ ಅಂತಹ ಕೆಲವು ಮಂತ್ರಗಳ ಬಗ್ಗೆ ಇಂದು ನಾವು ತಿಳಿಸಲಿದ್ದೇವೆ. 

ಗ್ರಹ ದೋಷಗಳ ಪರಿಹಾರಕ್ಕೆ ಈ ಮಂತ್ರ ಪಠಿಸಿ: ಮಂಗಳಕರ ಫಲ ಪಡೆಯಿರಿ

ಹಿಂದೂ ಧರ್ಮದಲ್ಲಿ ಕೆಲವು ಮಂತ್ರಗಳನ್ನು ಬಹಳ ಪ್ರಾಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ಮಂತ್ರಗಳು ಜೀವನದ ಎಲ್ಲಾ ತೊಂದರೆಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿವೆ ಎನ್ನಲಾಗುತ್ತದೆ. ಅಷ್ಟೇ ಅಲ್ಲದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಮಂತ್ರಗಳ ಪಠಣವು ಜಾತಕದ ಗ್ರಹ ದೋಷಗಳನ್ನು ತೆಗೆದುಹಾಕಲು ಅತ್ಯಂತ ಪರಿಣಾಮಕಾರಿ ಪರಿಹಾರವೆಂದು ಹೇಳಲಾಗಿದೆ. ಈ ಮಂತ್ರಗಳ ಪ್ರಬಲ ಪರಿಣಾಮದ ದೃಷ್ಟಿಯಿಂದ, ಅವುಗಳಿಗೆ ಮಹಾಮಂತ್ರದ ಸ್ಥಾನಮಾನವನ್ನು ನೀಡಲಾಗಿದೆ. ಜಾತಕದ ಗ್ರಹದೋಷಗಳನ್ನು ಹೋಗಲಾಡಿಸಲು ತುಂಬಾ ಉಪಯುಕ್ತವಾದ ಅಂತಹ ಕೆಲವು ಮಂತ್ರಗಳ ಬಗ್ಗೆ ಇಂದು ನಾವು ತಿಳಿಸಲಿದ್ದೇವೆ. 

ಇದನ್ನೂ ಓದಿ: ಈ ವಿಶೇಷ ವ್ಯಾಪಾರ ಇಂದೇ ಪ್ರಾರಂಭಿಸಿ! ತಿಂಗಳಿಗೆ 10 ಲಕ್ಷದವರೆಗೆ ಸಂಪಾದಿಸಿ

ಗಾಯತ್ರಿ ಮಂತ್ರವು ಅತ್ಯಂತ ಶಕ್ತಿಯುತ ಮಹಾಮಂತ್ರ: 
ಗಾಯತ್ರಿ ಮಂತ್ರವನ್ನು ಧಾರ್ಮಿಕ ಗ್ರಂಥಗಳು, ಜ್ಯೋತಿಷ್ಯ ಇತ್ಯಾದಿಗಳಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಇದನ್ನು ಮಹಾಮಂತ್ರ ಎಂದು ಕರೆಯಲಾಗುತ್ತದೆ. ಗಾಯತ್ರಿ ಮಂತ್ರವು ಅನೇಕ ರೀತಿಯ ತೊಂದರೆಗಳಿಂದ ರಕ್ಷಿಸುತ್ತದೆ. ಜೀವನದ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಸಂತೋಷ - ಸಮೃದ್ಧಿಯನ್ನು ನೀಡುತ್ತದೆ. ಈ ಮಂತ್ರವನ್ನು ಪ್ರತಿದಿನ ಕನಿಷ್ಠ 11 ಬಾರಿ ಪೂರ್ಣ ಭಕ್ತಿಯಿಂದ ಪಠಿಸುವುದರಿಂದ ಜೀವನದಲ್ಲಿ ಅನೇಕ ಧನಾತ್ಮಕ ಬದಲಾವಣೆಗಳು ಉಂಟಾಗುತ್ತದೆ. ವ್ಯಕ್ತಿಯ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದರ ಜೊತೆಗೆ, ಆಲೋಚನೆಗಳು ಧನಾತ್ಮಕವಾಗಿ ಮೂಡುತ್ತದೆ.

ಮಂತ್ರಗಳು ತುಂಬಾ ಪರಿಣಾಮಕಾರಿ:
ಗಾಯತ್ರಿ ಮಂತ್ರದ ಹೊರತಾಗಿ, ಸರಸ್ವತಿ ಗಾಯತ್ರಿ ಮಂತ್ರ, ದುರ್ಗಾ-ಗಾಯತ್ರಿ ಮಂತ್ರ, ಹನುಮಾನ್-ಗಾಯತ್ರಿ ಮಂತ್ರ, ಸೂರ್ಯ-ಗಾಯತ್ರಿ ಮಂತ್ರ, ಶನಿ-ಗಾಯತ್ರಿ ಮಂತ್ರ, ಗಣೇಶ-ಗಾಯತ್ರಿ ಮಂತ್ರ, ಶ್ರೀಕೃಷ್ಣ-ಗಾಯತ್ರಿ ಮಂತ್ರ, ವಿಷ್ಣು-ಗಾಯತ್ರಿ ಮಂತ್ರ, ಲಕ್ಷ್ಮಿ-ಗಾಯತ್ರಿ ಮಂತ್ರ, ಶಿವ-ಗಾಯತ್ರಿ ಮಂತ್ರ ಮತ್ತು ತುಳಸಿ-ಗಾಯತ್ರಿ ಮಂತ್ರ ಕೂಡ ಅತ್ಯಂತ ಪರಿಣಾಮಕಾರಿ ಮಂತ್ರಗಳಾಗಿವೆ. ಮಂತ್ರವನ್ನು ಪಠಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ

ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಈ ಎಲೆಗಳನ್ನು ಸೇವಿಸಿ... ಅದ್ಭುತ ಪ್ರಯೋಜನ ಪಡೆಯಿರಿ

ಮಂತ್ರವನ್ನು ಪಠಿಸುವಾಗ ಕುಳಿತುಕೊಳ್ಳುವ ಸ್ಥಳ ಯಾವಾಗಲೂ ಸ್ವಚ್ಛವಾಗಿರಬೇಕು. ಹಾಗೆಯೇ ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿದ ನಂತರವೇ ಮಂತ್ರವನ್ನು ಜಪಿಸಬೇಕು.  

  • ಕುಶಾ ಅಥವಾ ಹತ್ತಿ ಬಟ್ಟೆಯ ಆಸನದ ಮೇಲೆ ಕುಳಿತು ಯಾವಾಗಲೂ ಮಂತ್ರಗಳನ್ನು ಪಠಿಸಿ.
  • ರುದ್ರಾಕ್ಷಿ ಮಾಲೆಯೊಂದಿಗೆ ಗಾಯತ್ರಿ ಮಂತ್ರವನ್ನು ಪಠಿಸುವುದು ಉತ್ತಮ.
  • ಮಂತ್ರವನ್ನು ಪಠಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಅರ್ಹ ಬ್ರಾಹ್ಮಣರಿಂದ ಮಂತ್ರವನ್ನು ಪಠಿಸಬಹುದು

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Read More