Home> Lifestyle
Advertisement

Friday Remedies: ಶುಕ್ರವಾರದಂದು ಈ ಕೆಲಸ ಮಾಡಿ ಲಕ್ಷ್ಮೀ ದೇವಿ ಆಶೀರ್ವಾದ ಪಡೆಯಿರಿ

ಇಂದಿನ ಕಾಲದಲ್ಲಿ ಹಣ ಎಲ್ಲದಕ್ಕೂ ಮುಖ್ಯ. ಹಾಗಾಗಿಯೇ ಎಲ್ಲರೂ ಸಂಪತ್ತು ಮತ್ತು ಸಮೃದ್ಧಿಗಾಗಿ ಹಂಬಲಿಸುತ್ತಾರೆ. ಇದಕ್ಕಾಗಿ ಜನರು ಅನೇಕ ರೀತಿಯ ಉಪವಾಸ ಮತ್ತು ವ್ರತಗಳನ್ನು ಸಹ ಮಾಡುತ್ತಾರೆ, ಆದರೆ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಕೃಪೆಯನ್ನು ಸುಲಭವಾಗಿ ಪಡೆಯಬಹುದು. ಅದರಲ್ಲೂ ವಿಶೇಷವಾಗಿ ಶುಕ್ರವಾರದಂದು ಮಾಡುವ ಕೆಲವು ಕೆಲಸಗಳ ಮೂಲಕ ಇದು ಸಾಧ್ಯವಾಗುತ್ತದೆ. ವಾಸ್ತವವಾಗಿ ಶುಕ್ರವಾರದ ದಿನ ವಿಶೇಷವಾದ ಕಾರಣ ಇದನ್ನು ಲಕ್ಷ್ಮಿ ದೇವಿಯ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಸಂಪತ್ತು, ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆ ಇದೆ. ಇದಕ್ಕಾಗಿ ಶುಕ್ರವಾರ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸಾಕಷ್ಟು ಲಾಭವಾಗುತ್ತದೆ.

Friday Remedies: ಶುಕ್ರವಾರದಂದು ಈ ಕೆಲಸ ಮಾಡಿ ಲಕ್ಷ್ಮೀ ದೇವಿ ಆಶೀರ್ವಾದ ಪಡೆಯಿರಿ

ನವದೆಹಲಿ: ಇಂದಿನ ಕಾಲದಲ್ಲಿ ಹಣ ಎಲ್ಲದಕ್ಕೂ ಮುಖ್ಯ. ಹಾಗಾಗಿಯೇ ಎಲ್ಲರೂ ಸಂಪತ್ತು ಮತ್ತು ಸಮೃದ್ಧಿಗಾಗಿ ಹಂಬಲಿಸುತ್ತಾರೆ. ಇದಕ್ಕಾಗಿ ಜನರು ಅನೇಕ ರೀತಿಯ ಉಪವಾಸ ಮತ್ತು ವ್ರತಗಳನ್ನು ಸಹ ಮಾಡುತ್ತಾರೆ, ಆದರೆ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಕೃಪೆಯನ್ನು ಸುಲಭವಾಗಿ ಪಡೆಯಬಹುದು. ಅದರಲ್ಲೂ ವಿಶೇಷವಾಗಿ ಶುಕ್ರವಾರದಂದು ಮಾಡುವ ಕೆಲವು ಕೆಲಸಗಳ ಮೂಲಕ ಇದು ಸಾಧ್ಯವಾಗುತ್ತದೆ. ವಾಸ್ತವವಾಗಿ ಶುಕ್ರವಾರದ ದಿನ ವಿಶೇಷವಾದ ಕಾರಣ ಇದನ್ನು ಲಕ್ಷ್ಮಿ ದೇವಿಯ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಸಂಪತ್ತು, ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆ ಇದೆ. ಇದಕ್ಕಾಗಿ ಶುಕ್ರವಾರ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸಾಕಷ್ಟು ಲಾಭವಾಗುತ್ತದೆ.

ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಈ ಕೆಲಸಗಳನ್ನು ಮಾಡಿ:

ಕೆಂಪು ಬಟ್ಟೆಗಳನ್ನು ಅರ್ಪಿಸಿ: ಕೆಂಪು ಬಣ್ಣವು ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾಗಿದೆ, ಆದ್ದರಿಂದ ಶುಕ್ರವಾರ ಮಾತಾ ಮಹಾಲಕ್ಷ್ಮಿ ದೇವಸ್ಥಾನಕ್ಕೆ (Laxmi Temple) ಹೋಗಿ ಅವಳಿಗೆ ಕೆಂಪು ಬಟ್ಟೆಗಳನ್ನು ಅರ್ಪಿಸಿ. ಇದರ ಜೊತೆಗೆ, ಕೆಂಪು ಬಿಂದಿ, ಕುಂಕುಮ ಮತ್ತು ಕೆಂಪು ಬಳೆಗಳನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ. ಇದು ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ.

ಇದನ್ನೂ ಓದಿ - Friday Remedies: ಶುಕ್ರವಾರ ಮುಸ್ಸಂಜೆ ವೇಳೆ ಈ ಕೆಲಸ ಮಾಡಿ Lakshmi ಕೃಪೆಗೆ ಪಾತ್ರರಾಗಿ

ಪೂಜೆಯಲ್ಲಿ ಕೆಂಪು ಹೂವುಗಳನ್ನು ಬಳಸಿ: ಲಕ್ಷ್ಮಿ ದೇವಿಯ (Goddess Laxmi) ಆಶೀರ್ವಾದ ಪಡೆಯಲು, ಶುಕ್ರವಾರ ಪೂಜಿಸುವಾಗ, ನಿಮ್ಮ ಕೈಯಲ್ಲಿ 5 ಕೆಂಪು ಹೂಗಳನ್ನು ತೆಗೆದುಕೊಂಡು ತಾಯಿಯನ್ನು ನೆನೆಯಿರಿ. ನಿಮ್ಮ ಮನಸ್ಸಿನ ಇಚ್ಛೆಯನ್ನು ತಾಯಿಗೆ ಹೇಳಿಕೊಳ್ಳಿ. ನಂತರ ಈ ಹೂವುಗಳನ್ನು ನಿಮ್ಮ ತಿಜೋರಿ ಅಥವಾ ಬೀರುವಿನಲ್ಲಿ ಇರಿಸಿ.

ಶ್ರೀ ಲಕ್ಷ್ಮಿ ನಾರಾಯಣನನ್ನು ಸ್ಮರಿಸಿ: ಶ್ರೀ ಲಕ್ಷ್ಮಿ ನಾರಾಯಣನನ್ನು ಸ್ಮರಿಸಿ ಭಜನೆ ಮಾಡಿ. ಲಕ್ಷ್ಮೀ ನಾರಾಯಣರನ್ನು ಒಟ್ಟಿಗೆ ಸ್ಮರಿಸುವುದರಿಂದ ಲಕ್ಷ್ಮೀ ಬೇಗ ಸಂತುಷ್ಟಳಾಗಿ ಭಕ್ತರಿಗೆ ಒಲಿಯುತ್ತಾಳೆ ಎಂದು ಹೇಳಲಾಗುತ್ತದೆ. ಹಾಗಾಗಿ ಲಕ್ಷ್ಮೀ ನಾರಾಯಣನಿಗೆ ಪೂಜಿಸಿ, ನಂತರ ಭಗವಾನ್ ಲಕ್ಷ್ಮಿ ನಾರಾಯಣನಿಗೆ ಖೀರ್ ಮಾಡಿ ಅದನ್ನು ದೇವರಿಗೆ ಪ್ರಸಾದವಾಗಿ ಅರ್ಪಿಸಬೇಕು ಎಂದು ಹೇಳಲಾಗುತ್ತದೆ. ಇದರೊಂದಿಗೆ ಈ ಪ್ರಸಾದವನ್ನು ಬಾಲಕಿಯರಿಗೆ ನೀಡಬೇಕು. ಇದರಿಂದ ನಿಮ್ಮ ಎಂತಹದ್ದೇ ಆರ್ಥಿಕ ಸಂಕಷ್ಟವಿದ್ದರೂ ಅದು ದೂರವಾಗುತ್ತದೆ ಎನ್ನಲಾಗುತ್ತದೆ.

ಇದನ್ನೂ ಓದಿ - Planets Transit: ಜೂನ್ ತಿಂಗಳಲ್ಲಿ 5 ಗ್ರಹಗಳ ಸ್ಥಾನ ಪಲ್ಲಟ, ಅದರ ಪರಿಣಾಮ ಏನೆಂದು ತಿಳಿಯಿರಿ

ಒಂದು ಹಿಡಿ ಅಕ್ಕಿಯನ್ನು ಹಣವಿಡುವ ಜಾಗದಲ್ಲಿ ಇರಿಸಿ: ಹಣವನ್ನು ಪಡೆಯಲು ಮತ್ತೊಂದು ಪರಿಹಾರ ಬಹಳ ವಿಶೇಷವೆಂದು ಹೇಳಲಾಗುತ್ತದೆ. ಇದಕ್ಕಾಗಿ ಶುಕ್ರವಾರ ಕೆಂಪು ಬಟ್ಟೆಯನ್ನು ತೆಗೆದುಕೊಂಡು ಒಂದೂವರೆ ಕಿಲೋಗ್ರಾಂಗಳಷ್ಟು ಸಂಪೂರ್ಣ ಅಕ್ಕಿಯನ್ನು ಅದರಲ್ಲಿ ಇರಿಸಿ ಒಂದು ಕಟ್ಟು ಮಾಡಿ. ಭತ್ತದ ಧಾನ್ಯಗಳು ಚೆಲ್ಲದಂತೆ ನೋಡಿಕೊಳ್ಳಿ. ಅಕ್ಕಿ ಗಂಟು ಹಾಕಿರುವ ಈ ಕಟ್ಟನ್ನು ಕೈಯಲ್ಲಿ ತೆಗೆದುಕೊಂಡು, ಓಂ ಶ್ರೀ ಶ್ರೀಯೇ ನಮಃ  ಎಂದು 5 ಬಾರಿ ಜಪಿಸಿ. ನಂತರ ಅದನ್ನು ನೀವು ಹಣ ಇಡುವ ಜಾಗದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಸಂಪತ್ತು ನಿಮ್ಮದಾಗಲಿದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More