Home> Lifestyle
Advertisement

ಅಕ್ಷಯ ತೃತೀಯದ ದಿನ ಈ ನಾಲ್ಕು ಕೆಲಸಗಳನ್ನು ಮಾಡಿದರೆ ಜೀವನ ಪೂರ್ತಿ ಸಿರಿ ಸಂಪತ್ತಿಗೆ ಕೊರತೆ ಇರುವುದೇ ಇಲ್ಲ

ಅಕ್ಷಯ ತೃತೀಯದ ಪವಿತ್ರ ಹಬ್ಬವನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಈ ವರ್ಷ, ಅಕ್ಷಯ ತೃತೀಯವನ್ನು ಮಂಗಳವಾರ, 03 ಮೇ 2022 ರಂದು ಆಚರಿಸಲಾಗುತ್ತದೆ. ಈ ಪವಿತ್ರ ದಿನದಂದು ಮಾಡುವ ಸ್ನಾನ, ದಾನ, ಧರ್ಮ ಮತ್ತು ಕಾರ್ಯಗಳ ಮಹತ್ವವು ಬಹಳ ಮುಖ್ಯವಾಗಿದೆ. 

ಅಕ್ಷಯ ತೃತೀಯದ ದಿನ ಈ ನಾಲ್ಕು ಕೆಲಸಗಳನ್ನು ಮಾಡಿದರೆ ಜೀವನ ಪೂರ್ತಿ ಸಿರಿ ಸಂಪತ್ತಿಗೆ ಕೊರತೆ ಇರುವುದೇ ಇಲ್ಲ

ಬೆಂಗಳೂರು : ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಮಹತ್ವವಿದೆ. ಈ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಕ್ಷಯ ತೃತೀಯದ ಪವಿತ್ರ ಹಬ್ಬವನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಈ ವರ್ಷ, ಅಕ್ಷಯ ತೃತೀಯವನ್ನು ಮಂಗಳವಾರ, 03 ಮೇ 2022 ರಂದು ಆಚರಿಸಲಾಗುತ್ತದೆ. ಈ ಪವಿತ್ರ ದಿನದಂದು ಮಾಡುವ ಸ್ನಾನ, ದಾನ, ಧರ್ಮ ಮತ್ತು ಕಾರ್ಯಗಳ ಮಹತ್ವವು ಬಹಳ ಮುಖ್ಯವಾಗಿದೆ. ಅಕ್ಷಯ ತೃತೀಯ ದಿನದಂದು ಲಕ್ಷ್ಮೀ ಮತ್ತು ಭಗವಾನ್ ವಿಷ್ಣುವಿನ ಪೂಜೆಗೆ ವಿಶೇಷ ಮಹತ್ವವಿದೆ. ಅಕ್ಷಯ ತೃತೀಯ ದಿನದಂದು ಕೆಲವು  ಕ್ರಮಗಳನ್ನು ಅನುಸರಿಸುವುದರಿಂದ ಲಕ್ಷ್ಮೀ  ದೇವಿಯ ವಿಶೇಷ ಕೃಪೆ ಸಿಗುತ್ತದೆ ಎಂದು ನಂಬಲಾಗಿದೆ.

ಮನೆಯಲ್ಲಿ ಸ್ವಚ್ಛತೆ ಕಾಪಾಡಿ :
ಅಕ್ಷಯ ತೃತೀಯ ದಿನದಂದು ಮನೆಯಲ್ಲಿ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ದಿನ ಮನೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಈ ದಿನ ಮನೆಯಲ್ಲಿ ಗಂಗಾಜಲವನ್ನು ಸಿಂಪಡಿಸುವುದು ಒಳ್ಳೆಯದು ಎನ್ನಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮೀ  ದೇವಿಯು ಶುಚಿತ್ವವನ್ನು ಕಾಪಾಡುವ ಮನೆಯಲ್ಲಿ ನೆಲೆಯಾಗುತ್ತಾಳೆ ವಂದು ಹೇಳಲಾಗುತ್ತದೆ. 

ಇದನ್ನೂ ಓದಿ : Shani Dosha Remedies: ಈ ಸರಳ ಮಾರ್ಗಗಳನ್ನು ಅನುಸರಿಸಿದರೆ ಸುಲಭವಾಗಿ ಸಿಗಲಿದೆ ಶನಿ ಪ್ರಕೋಪದಿಂದ ಮುಕ್ತಿ

ಜಗಳಗಳಿಂದ ದೂರವಿರಿ :
ಅಕ್ಷಯ ತೃತೀಯ ದಿನದಂದು ಯಾವುದೇ ರೀತಿಯ ತೊಂದರೆ ಅಥವಾ ಜಗಳಕ್ಕೆ ಅವಕಾಶ ನೀಡಬೇಡಿ. ಅಶಾಂತಿ ಇರುವ ಮನೆಯಲ್ಲಿ ತಾಯಿ ಲಕ್ಷ್ಮೀ ನೆಲೆಸುವುದಿಲ್ಲ. ಕುಟುಂಬ ಸದಸ್ಯರು ಪ್ರೀತಿಯಿಂದ ವಾಸಿಸುವ ಉತ್ತಮ ವಾತಾವರಣವಿರುವ ಮನೆಯಲ್ಲಿ ತಾಯಿ ಲಕ್ಷ್ಮೀ ನೆಲೆಯಾಗುತ್ತಾಳೆ. 

ಸಾತ್ವಿಕ ಆಹಾರವನ್ನು ಸೇವಿಸಿ :
ಅಕ್ಷಯ ತೃತೀಯ ದಿನದಂದು ಸಾತ್ವಿಕ ಆಹಾರವನ್ನು ಸೇವಿಸಬೇಕು. ಈ ದಿನ ಆಹಾರ ಸೇವಿಸುವ ಮೊದಲು ದೇವರಿಗೆ ಭೋಗ ಅರ್ಪಿಸುವುದನ್ನು ಮರೆಯಬೇಡಿ. ಈ ಶುಭ ದಿನದಂದು ತಾಮಸಿಕ ಆಹಾರ ಮತ್ತು ಮಾಂಸ ಮತ್ತು ಮದ್ಯವನ್ನು ಸೇವಿಸಬಾರದು. ನಿಮ್ಮ ಪ್ರಧಾನ ದೇವತೆಯನ್ನು  ಈ ದಿನ  ಪೂಜಿಸಬೇಕು.

ಇದನ್ನೂ ಓದಿ : Shani Rashi Parivartan 2022: ನಾಳೆ ಶನಿ ಗ್ರಹದ ಸ್ಥಾನದಲ್ಲಿ ಆಗಲಿದೆ ಮಹಾ ಬದಲಾವಣೆ .! 12 ರಾಶಿಗಳ ಮೇಲೆ ಬೀರಲಿದೆ ಪರಿಣಾಮ

ತಪ್ಪು ಕೆಲಸಗಳಿಂದ ದೂರವಿರಿ :
ಅಕ್ಷಯ ತೃತೀಯದ ಶುಭ ದಿನದಂದು ತಪ್ಪು ಕೆಲಸಗಳಿಂದ ಯಾವಾಗಲೂ ದೂರವಿರಬೇಕು. ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು ತಪ್ಪು ಕೆಲಸಗಳನ್ನು ಮಾಡುವ ವ್ಯಕ್ತಿಯು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ದಿನ ಬಡವರಿಗೆ ಸಹಾಯ ಮಾಡಿ. ಈ ದಿನ ನಿಮ್ಮ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನ ಮಾಡಬೇಕು.

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Read More