Home> Karnataka
Advertisement

Viral Video ನೋಡಿ: ಕೊಂಡ ಹಾಯುವಾಗ ಕೊಂಡಕ್ಕೆ ಬಿದ್ದ ಅರ್ಚಕ

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸುಳ್ಳೇರಿ ಗ್ರಾಮದ ಪಟ್ಟಲದಮ್ಮ ಕೊಂಡೋತ್ಸವದ ವೇಳೆ ಅವಘಡ ನಡೆದಿದೆ.

Viral Video ನೋಡಿ: ಕೊಂಡ ಹಾಯುವಾಗ ಕೊಂಡಕ್ಕೆ ಬಿದ್ದ ಅರ್ಚಕ

ರಾಮನಗರ: ಕೊಂಡ ಹಾಯುವಾಗ ಅರ್ಚಕರೊಬ್ಬರು ಕೊಂಡಕ್ಕೆ ಬಿದ್ದಿರುವ ಘಟನೆ ನಡೆದಿದೆ. ಗ್ರಾಮದೇವತೆ ಪಟ್ಟಲದಮ್ಮ ದೇವಿ(Pattaladamma Devi Temple)ಯ ಕೊಂಡೋತ್ಸವದ ವೇಳೆ ಈ ಅವಘಡ ಸಂಭವಿಸಿದೆ.

ರಾಮನಗರ(Ramanagara) ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸುಳ್ಳೇರಿ ಗ್ರಾಮದ ಪಟ್ಟಲದಮ್ಮ ಕೊಂಡೋತ್ಸವದ ವೇಳೆ ಅವಘಡ ನಡೆದಿದೆ. ಕೊಂಡಕ್ಕೆ ಬಿದ್ದ ಅರ್ಚಕ ರಾಜುವಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಕೊಂಡ ಹಾಯುವಾಗ ಅರ್ಚಕ ಆಯತಪ್ಪಿ ಬಿದ್ದಿದ್ದಾರೆ.

ಇದನ್ನೂ ಓದಿ: Electricity Price Hike : ಏಪ್ರಿಲ್ 1 ರಿಂದ ವಿದ್ಯುತ್ ಗ್ರಾಹಕರಿಗೆ ಕಾದಿದೆಯಾ ಕರೆಂಟ್ ಶಾಕ್?

ಭಕ್ತರ ಹರ್ಷೋದ್ಘಾರದ ನಡುವೆಯೇ ಕೊಂಡಕ್ಕೆ ಬಿದ್ದ ಅರ್ಚಕರನ್ನು ತಕ್ಷಣವೇ ಮೇಲಕ್ಕೆ ಎತ್ತಲಾಗಿದೆ. ಸದ್ಯ ಚನ್ನಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅರ್ಚಕ(Priest Injury) ಕೊಂಡಕ್ಕೆ ಬಿದ್ದಿರುವ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ‘ನಾನು ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ; ನನ್ನ ಹೇಳಿಕೆ ತಿರುಚಲಾಗಿದೆ’

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More