Home> Karnataka
Advertisement

ಭಾರತ್ ಜೋಡೋ ಸಭೆಗೆ ನನ್ನ ಕರೆದಿಲ್ಲ, ನಾನ್ಯಾಕೆ ಬರಲಿ? : ಸಿದ್ದರಾಮಯ್ಯ

ಭಾರತ್ ಜೋಡೋ ಸಭೆಗೆ ತೆರಳಲು ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ನನ್ನ ಕರೆದಿಲ್ಲ ಮಾಡಿಲ್ಲ ನಾನ್ಯಾಕೆ ಬರಲಿ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ. 

ಭಾರತ್ ಜೋಡೋ ಸಭೆಗೆ ನನ್ನ ಕರೆದಿಲ್ಲ, ನಾನ್ಯಾಕೆ ಬರಲಿ? : ಸಿದ್ದರಾಮಯ್ಯ

ಬೆಂಗಳೂರು : ಭಾರತ್ ಜೋಡೋ ಸಭೆಗೆ ತೆರಳಲು ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ನನ್ನ ಕರೆದಿಲ್ಲ ಮಾಡಿಲ್ಲ ನಾನ್ಯಾಕೆ ಬರಲಿ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ. ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯ ವೇಳೆ ಹೀಗೆ ಹೇಳಿದ್ದಾರೆ. 

ಇದನ್ನೂ ಓದಿ: ಉಮಾಶಂಕರ್ ಹಲ್ಲಿ: ಬಿಳಿಗಿರಿ ಬನದಲ್ಲಿ ಹೊಸ ಹಲ್ಲಿ ಪತ್ತೆ ಹಚ್ಚಿದ ಸಂಶೋಧಕರು!

ಎದುರು ಬದುರು ಹಾಲ್ ನಲ್ಲಿ ಶಾಸಕಾಂಗ ಸಭೆ ಹಾಗೂ ಭಾರತ್ ಜೋಡೋ ಮೀಟಿಂಗ್ ಆಯೋಜನೆ ಮಾಡಲಾಗಿದೆ. ಶಾಸಕಾಂಗ ಸಭೆಗೆ ಸಿದ್ದರಾಮಯ್ಯ ಆಗಮಿಸಿದ್ದರು. ಆದರೆ ಇದಕ್ಕೂ ಮುನ್ನವೇ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಡಿ.ಕೆ.ಶಿವಕುಮಾರ್ ಭಾರತ್ ಜೋಡೋ ಸಭೆಯಲ್ಲಿ ಕುಳಿತಿದ್ದರು.

ಸಿದ್ದರಾಮಯ್ಯ ಅವರನ್ನೂ ಭಾರತ್ ಜೋಡೋ ಸಭೆಗೆ ಆಗಮಿಸುವಂತೆ ಅಜಯ್ ಸಿಂಗ್ ಹಾಗೂ ಸಲೀಂ ಅಹಮದ್ ಕೋರಿಕೊಂಡರು. ಆದರೆ ಇದಕ್ಕೆ ಖಡಾಖಂಡಿತವಾಗಿ ನಿರಾಕರಿಸಿದ ಸಿದ್ದರಾಮಯ್ಯ, ನನಗೆ ಭಾರತ್ ಜೋಡೋ ಸಭೆ ಬಗ್ಗೆ ಹೇಳಿಲ್ಲ, ನನಗೆ ಕರೆದಿಲ್ಲ ಮಾಡಿಲ್ಲ ನಾನ್ಯಾಕೆ ಬರಲಿ ಎಂದು ಗರಂ ಆದರು. ಬಳಿಕ ಸಿದ್ದರಾಮಯ್ಯ ಅವರಿಗೆ ಅಜಯ್ ಸಿಂಗ್ ಹಾಗೂ ಸಲೀಂ ಅಹಮದ್ ಸಮಜಾಯಿಷಿ ನೀಡಿದರು. 

ಇದನ್ನೂ ಓದಿ: Snake Found In Scooty : ಸ್ಕೂಟರ್‌ ಒಳಗಿನಿಂದ ಹೊರಬಂತು 5 ಅಡಿ ಉದ್ದದ ಹಾವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More