Home> Karnataka
Advertisement

ಮುಂದುವರೆದ ರೇಣುಕಾಚಾರ್ಯ ವಾಗ್ದಾಳಿ; ಸುಧಾಕರ್, ಕಟೀಲ್, ಅಣ್ಣಾಮಲೈ ವಿರುದ್ಧ ಅಸಮಾಧಾನ

ನನಗೆ ಯಾವುದೇ ಭಯ ಇಲ್ಲ,‌ ನಾನು‌ ನಿರ್ಭಯವಾಗಿ ಮಾತಾಡ್ತೀನಿ. ಇವರಿಗೆ ಒಂದು ಗ್ರಾಮಪಂಚಾಯ್ತಿ ನಿಂತು ಗೆಲ್ಲೋಕೆ ಆಗಲ್ಲ ಎಂದು ವಾಗ್ದಾಳಿ ನಡೆಸಿದರು. ಆ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿ, ಅವರ ಹೆಸರು ಇವಾಗ ನಾನು ಹೇಳಲ್ಲ, ಸಮಯ ಬಂದಾಗ ಅವರ ಹೆಸರು ಹೇಳ್ತೀನಿ, ಎಂದು ತಮ್ಮ ಮಾತಿನಿಂದ ಜಾರಿಕೊಂಡರು. 

ಮುಂದುವರೆದ ರೇಣುಕಾಚಾರ್ಯ ವಾಗ್ದಾಳಿ; ಸುಧಾಕರ್, ಕಟೀಲ್, ಅಣ್ಣಾಮಲೈ ವಿರುದ್ಧ ಅಸಮಾಧಾನ

ಬೆಂಗಳೂರು : ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಇಂದು ಮಾಜಿ ಸಚಿವ ಸುಧಾಕರ್, ರಾಜ್ಯಾಧ್ಯಕ್ಷ ಕಟೀಲ್ ಹಾಗೂ ಚುನಾವಣೆ ಉಸ್ತುವಾರಿ ಅಣ್ಣಾಮಲೈ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ಮುಂದುವರಿಸಿದ್ದಾರೆ.

ಏಕವಚನದಲ್ಲಿ ಸುಧಾಕರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರೇಣುಕಾಚಾರ್ಯ: 

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಸುಧಾಕರ್‌ ಒಬ್ನೇನಾ..? ಅವನೊಬ್ಬನೇನಾ ಸೋತಿರೋದು..? ನಾವು ಸೋತಿದ್ವಿ ತಾನೇ, ನಮ್ಮ ಜೊತೆ ಯಾಕೆ ಮಾತಾಡಿಲ್ಲ..? ಏನ್ ಪಾರ್ಟಿ ಮುಗಿಸ್ತೀನಿ ಅಂತಾ ಅವ್ನು ಏನು ನಿಮಗೆ ಹೆದರಿಸಿದ್ನಾ..? ಅದಕ್ಕಾಗಿ ಭಯಗೊಂಡು ಹೋಗಿದ್ರಾ ಅವನ ಜೊತೆ ಮಾತಾಡೋಕೆ ಹೋದರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸವಾಲು ಹಾಕಿದರು.

ಕೋವಿಡ್ ಸಂದರ್ಭದಲ್ಲಿ ನನ್ನ ಕಾರ್ಯಕ್ಕೆ ಶಭಾಷ್ ಎನ್ನಲಿಲ್ಲ:
ನನಗೆ ಯಾವುದೇ ಭಯ ಇಲ್ಲ,‌ ನಾನು‌ ನಿರ್ಭಯವಾಗಿ ಮಾತಾಡ್ತೀನಿ. ಇವರಿಗೆ ಒಂದು ಗ್ರಾಮಪಂಚಾಯ್ತಿ ನಿಂತು ಗೆಲ್ಲೋಕೆ ಆಗಲ್ಲ ಎಂದು ವಾಗ್ದಾಳಿ ನಡೆಸಿದರು. ಆ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿ, ಅವರ ಹೆಸರು ಇವಾಗ ನಾನು ಹೇಳಲ್ಲ, ಸಮಯ ಬಂದಾಗ ಅವರ ಹೆಸರು ಹೇಳ್ತೀನಿ, ಎಂದು ತಮ್ಮ ಮಾತಿನಿಂದ ಜಾರಿಕೊಂಡರು. 

ಇದನ್ನೂ ಓದಿ- ಬರೋಬ್ಬರಿ 200 ಕೋಟಿ ಮೌಲ್ಯ ದಾಟಿದ ನಾರಿಯರ ಸಂಚಾರ

ಕೊವೀಡ್ ಸಂದರ್ಭದಲ್ಲಿ  ರೇಣುಕಾಚಾರ್ಯ ಒಳ್ಳೆಯ ಕೆಲಸ ಮಾಡಿದ್ದ ಅಂತಾ ಹೇಳೋಕೆ ನಿಮ್ಮ ಬಾಯಿಗೆ ಏನು ಹುಳ ಬಿದ್ದಿತ್ತಾ..? ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಎಷ್ಟೋ ಬಾರಿ ಹೇಳಿದ್ದಾರೆ. ಅವರ ಪಕ್ಷದವರಿಗೆ ರೇಣುಕಾಚಾರ್ಯ ನೋಡಿ ಕಲೀರಿ ಅಂತಾ ಹೇಳಿದ್ದರು. ಆದರೆ ನಮ್ಮವರು ಮಾತ್ರ ನನ್ನ ಬಗ್ಗೆ ಹೇಳಿಲ್ಲ. ಯಾಕೆ ರೇಣುಕಾಚಾರ್ಯ ಬೆಳೆದು ಬಿಡ್ತಾನೆ ಅಂತಾ ಹೇಳಿಲ್ವಾ..?, ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಕೆಂಡಕಾರಿದ ರೇಣುಕಾಚಾರ್ಯ, ನಳೀನ್ ಕುಮಾರ್ ಕಟೀಲ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು. ಮೊನ್ನೆ ರಾಜೀನಾಮೆ ಅಂದ್ರು, ಆಮೇಲೆ ಇಲ್ಲ ಅಂದ್ರು. ಏನು ನಿಮ್ಮ ಉದ್ದೇಶ..? ನೀವು ನಾಲ್ಕೈದು ಬಾರಿ ರಾಜ್ಯ ಪ್ರವಾಸ ಮಾಡಿದ್ರಲ್ಲ ಏನು ಪ್ರಯೋಜನ..? ಅದು ಏನು ಮತಗಳಾಗಿ ಪರಿವರ್ತನೆ ಆಯ್ತಾ..? ಎಂದು ಪ್ರಶ್ನಿಸಿದರು.

ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿಲ್ಲ :
ನಿನ್ನೆ ನಳೀನ್ ಕುಮಾರ್ ಕಟೀಲ್ ಕರೆ ಮಾಡಿದ್ರು, ಮಾಧ್ಯಮದ ಮುಂದೆ ಮಾತನಾಡಬಾರದು ಎಂದ್ರು. ಶುಕ್ರವಾರ ಸಭೆ ನಡೆಸೋಣ ಎಂದ್ರು, ನಾನು ಪಕ್ಷ‌ವಿರೋಧಿ ಚಟುವಟಿಕೆ ಮಾಡಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಮೇಲೆ ಕ್ರಮ ತೆಗೆದುಕೊಂಡಿಲ್ಲ, ಎಂದು ಹರಿಹಾಯ್ದರು. 

ಇದನ್ನೂ ಓದಿ- ಬೆಳಗಾವಿಯಲ್ಲಿ 250 ಕೋಟಿ ರೂ. ಹೂಡಿಕೆಗೆ ಎಸ್‌ಎಫ್‌ಎಸ್‌ ಕಂಪನಿ ಪ್ರಸ್ತಾವನೆ : ಎಂ.ಬಿ. ಪಾಟೀಲ್‌

ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಗಲಿ :
ಇದೇ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಪರ ನಾನು ಬ್ಯಾಟ್ ಮಾಡಲ್ಲ, ಆದರೆ ವಿಜಯೇಂದ್ರ ರಾಜ್ಯಾಧ್ಯಕ್ಷ ಆದರೆ ತಪ್ಪಿಲ್ಲ. ಕಾಂಗ್ರೆಸ್ ನಿಂದ ಯಾರು ಕರೆ ಮಾಡಿಲ್ಲ, ನಾನು ಕಾಂಗ್ರೆಸ್ ಗೆ ಹೋಗುವ ಯೋಚನೆಯನ್ನೂ ಮಾಡಿಲ್ಲ. ಜನರ ಭಾವನೆಗಳು, ಅಭಿಪ್ರಾಯಗಳು ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಲಿ ಎಂಬುದಾಗಿದೆ. ಸೋಮಣ್ಣ ಅವರಿಗೂ ಸಾಮರ್ಥ್ಯ ಇದೆ, ನನಗೂ ಸಾಮರ್ಥ್ಯ ಇದೆ ಎಂದು ಪರೋಕ್ಷವಾಗಿ ತಾವೂ ಕೂಡ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬುದನ್ನೂ ತಿಳಿಸಿದರು. 

ಎನ್‌ಪಿ‌ಎಸ್ ನೌಕರರ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕೇಳಿದ್ದೆ, ಅವಕಾಶ ಕೊಟ್ಟಿಲ್ಲ. ಎನ್‌ಪಿ‌ಎಸ್ ಕೂಡ ಬಿಜೆಪಿ ಸೋಲಿಗೆ ಕಾರಣ. ಕಾಂಗ್ರೆಸ್ ನ ಗ್ಯಾರಂಟಿ ಯಶಸ್ಸು ಆಗಿಲ್ಲ. 10 kg ಅಕ್ಕಿ ಕೊಡಬೇಕು ಇಲ್ಲದಿದ್ದರೆ 50 ರೂ. ನಂತೆ 10 kg ಗೆ ಹಣ ಕೊಡಬೇಕು. ಅಕ್ಕಿ ಗಿರಣಿ ಮಾಲೀಕರೆ ಅಕ್ಕಿ ಕೊಡಲು ಮುಂದೆ ಬಂದಿದ್ದಾರೆ. ರಾಜ್ಯ ಸರ್ಕಾರ ಉತ್ತಮ ದರ ನೀಡಿ ಖರೀದಿಸಿದರೆ ರೈತರಿಗೆ ಪ್ರೋತ್ಸಾಹ ನೀಡಿದಂತಾಗತ್ತೆ. ವಿದ್ಯುತ್ ದರ ಕಡಿಮೆ ಮಾಡಬೇಕು, ಇಲ್ಲದಿದ್ದರೆ ಕೈಗಾರಿಕೆಗಳು ಇಲ್ಲಿಂದ ಹೋಗುತ್ತವೆ. ಒಂದು ಸ್ಥಾನಕ್ಕೆ ನಾಲ್ಕೈದು ಶಿಫಾರಸ್ಸು ಮಾಡಲಾಗಿದೆ, ಸಿಎಂ ಸ್ಥಾನಕ್ಕೆ ಇದು ಅಗೌರವ, ಪಾರದರ್ಶಕ ಆಡಳಿತ ನೀಡಿ, ಎಂದು ಕಾಂಗ್ರೆಸ್ ಗೆ ಸಲಹೆ ನೀಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More